
ಬೆಂಗಳೂರು(ಜೂ.28): IPL 2020 ಆಯೋಜನೆ ಬಿಸಿಸಿಐಗೆ ಕಗ್ಗಂಟಾಗಿದೆ. ಟೂರ್ನಿ ಆಯೋಜನೆಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಐಪಿಎಲ್ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸುವ ಮೂಲಕ 8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಹೋರಾಡಲು ಸಜ್ಜಾಗಿತ್ತು. ಈ ಕಾರಣಕ್ಕಾಗಿ ಐಪಿಎಲ್ 2020 ವಿಶೇಷವಾಗಿದೆ. ಅದರಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ನಾಯಕ, ಕೋಚ್, ಸೇರಿದಂತೆ ಬಹುತೇಕರು ಕನ್ನಡಿಗರೇ ಆಗಿದ್ದಾರೆ. ಐವರು ಕ್ರಿಕೆಟಿಗರು ಸೇರಿದಂತೆ ಕೋಚ್ ಅನಿಲ್ ಕುಂಬ್ಳೆ ಕೂಡ ಕನ್ನಡದವರೇ ಆಗಿರುವುದು ಕನ್ನಡಿಗರ ಸಂತಸ ಇಮ್ಮಡಿಗೊಳಿಸಿತ್ತು.
ಆಗಸ್ಟ್ಗೆ ಮುಗಿಯಲಿದೆ ನಿಷೇಧ; ಕ್ರಿಕೆಟ್ಗೆ ಮರಳಲು ಶ್ರೀಶಾಂತ್ ಅಭ್ಯಾಸ ಶುರು!
ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಜೆ ಸುಚಿತ್ ಹಾಗೂ ಕೆ ಗೌತಮ್ ಕನ್ನಡಿಗರಾಗಿ ತಂಡದಲ್ಲಿದ್ದಾರೆ. ಜೊತೆಗೆ ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನ ಕೂಡ ಇದೆ. ಈ ಕುರಿತು ಕೆ ಗೌತಮ್ ಸಂತಸ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿನ ಸಂದರ್ಶನದಲ್ಲಿ ಗೌತಮ್, ಪಂಜಾಬ್ ತಂಡದಲ್ಲಿನ ಕನ್ನಡಿಗರ ಕುರಿತು ಮಾತನಾಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲು ನನಗೆ ತುಂಬಾ ಸಂತೋಷ. ಏಕೆಂದರೆ, ನೀವು ಗಮನಿಸಬಹುದು, ಒಟ್ಟು ಐದು ಕರ್ನಾಟಕದ ಆಟಗಾರರು ಈ ತಂಡಲ್ಲಿದ್ದಾರೆ. ಇದು ಒಂದು ರೀತಿ ಮಿನಿ ಕರ್ನಾಟಕ ತಂಡದ ತರಹ ಅನಿಸುತ್ತಿದೆ. ವರ್ಷದಲ್ಲಿ ಆರು ತಿಂಗಳ ಕಾಲ ಆಡಿದ್ದ ಐದು ಮಂದಿ ಸಹ ಆಟಗಾರರೊಂದಿಗೆ ಐಪಿಎಲ್ನಲ್ಲೂ ಒಂದೇ ಫ್ರಾಂಚೈಸಿಯಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು ಸಂತೋಷ ನೀಡುತ್ತದೆ. ಈ ವೇಳೆ ನಾವು ಕನ್ನಡ ಮಾತನಾಡಲು ಯತ್ನಿಸುತ್ತೇವೆ ಎಂದು ಕನ್ನಡಿಗ ಕೃಷ್ಣಪ್ಪ ಗೌತಮ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.