ಭಾರತ-ಬಾಂಗ್ಲಾ ಸರಣಿ ಅನು​ಮಾ​ನ!

By Kannadaprabha NewsFirst Published Oct 22, 2019, 12:06 PM IST
Highlights

ನವೆಂಬರ್ 03ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್ ಇದೀಗ ನಡೆಯುವುದು ಅನುಮಾನ ಎನಿಸತೊಡಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆಇಲ್ಲಿದೆ ನೋಡಿ ಉತ್ತರ...

ಢಾಕಾ[ಅ.22]: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಮುಕ್ತಾಯ​ಗೊ​ಳ್ಳು​ತ್ತಿ​ದ್ದಂತೆ ಭಾರತ, ಬಾಂಗ್ಲಾ​ದೇ​ಶಕ್ಕೆ ಆತಿಥ್ಯ ವಹಿ​ಸ​ಲಿದೆ. 3 ಟಿ20 ಹಾಗೂ 2 ಟೆಸ್ಟ್‌ ಪಂದ್ಯ​ಗಳ ಸರ​ಣಿ​ಯ​ನ್ನಾ​ಡಲು ತಂಡ, ಭಾರ​ತಕ್ಕೆ ಆಗ​ಮಿ​ಸ​ಬೇ​ಕಿದೆ. 

ಬಾಂಗ್ಲಾ ಟಿ20 ಸರಣಿ: ಕೊಹ್ಲಿಗೆ ವಿಶ್ರಾಂತಿ?

ಆದರೆ ಸೋಮ​ವಾರ ತಂಡದ ಪ್ರಮುಖ ಆಟ​ಗಾ​ರ​ರಾದ ಶಕೀಬ್‌ ಅಲ್‌ ಹಸನ್‌, ಮುಷ್ಫಿ​ಕರ್‌ ರಹೀಮ್‌, ತಮೀಮ್‌ ಇಕ್ಬಾಲ್‌, ಮಹ​ಮ​ದ್ದುಲ್ಲಾ ಸೇರಿ​ದಂತೆ ಬಹು​ತೇಕ ಎಲ್ಲಾ ಆಟ​ಗಾ​ರರು ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ (ಬಿ​ಸಿ​ಬಿ) ವಿರುದ್ಧ ಪ್ರತಿ​ಭ​ಟನೆ ಆರಂಭಿ​ಸಿ​ದ್ದಾರೆ. ವೇತನ ಹೆಚ್ಚಳ ಸೇರಿ​ದಂತೆ ಒಟ್ಟು 11 ಷರ​ತ್ತು​ಗ​ಳನ್ನು ಬಿಸಿಬಿ ಮುಂದಿ​ಟ್ಟಿ​ರುವ ಆಟ​ಗಾ​ರರು, ಸಮಸ್ಯೆ ಬಗೆಹರಿ​ಸುವ ವರೆ​ಗೂ ಎಲ್ಲಾ ಕ್ರಿಕೆಟ್‌ ಚಟು​ವ​ಟಿಕೆಗಳಿಂದ ದೂರ​ವಿ​ರುವು​ದಾಗಿ ಘೋಷಿ​ಸಿ​ದ್ದಾರೆ.

ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ 

ಸೋಮ​ವಾರ ಇಲ್ಲಿ ನಡೆದ ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಅಂತಾ​ರಾ​ಷ್ಟ್ರೀಯ ಆಟ​ಗಾ​ರರು ಸೇರಿದಂತೆ 50ಕ್ಕೂ ಹೆಚ್ಚು ಕ್ರಿಕೆ​ಟಿ​ಗರು ಪಾಲ್ಗೊಂಡಿ​ದ್ದರು. ದೇಸಿ ಆಟ​ಗಾ​ರರ ಸಂಭಾ​ವನೆ ಏರಿಕೆ, 2ಕ್ಕಿಂತ ಹೆಚ್ಚು ವಿದೇಶಿ ಲೀಗ್‌ಗಳಲ್ಲಿ ಆಡಲು ಅವ​ಕಾಶ ನೀಡ​ಬೇಕು, ಬಾಂಗ್ಲಾ​ದೇಶ ಪ್ರೀಮಿ​ಯರ್‌ ಲೀಗ್‌ (ಬಿ​ಪಿ​ಎಲ್‌) ಟಿ20 ಟೂರ್ನಿ​ಯಲ್ಲಿ ಆಟ​ಗಾ​ರ​ರನ್ನು ಹೆಚ್ಚಿನ ಮೊತ್ತಕ್ಕೆ ಖರೀ​ದಿ​ಸ​ಬೇಕು ಎನ್ನು​ವುದು ಪ್ರಮುಖ ಷರ​ತ್ತು​ಗ​ಳಾ​ಗಿವೆ.

ಈ ಬೆಳ​ವ​ಣಿಗೆ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಬಿಸಿ​ಸಿಐ, ‘ಇದು ಬಾಂಗ್ಲಾ​ದೇ​ಶದ ಆಂತ​ರಿಕ ಸಮಸ್ಯೆ. ಬಿಸಿಬಿ ಯಾವುದೇ ಅಧಿ​ಕೃತ ಮಾಹಿತಿ ರವಾ​ನಿ​ಸಿಲ್ಲ. ಸರಣಿ ರದ್ದು​ಗೊ​ಳಿ​ಸುವ ಬಗ್ಗೆ ಈಗಲೇ ತೀರ್ಮಾನ ಕೈಗೊ​ಳ್ಳಲು ಸಾಧ್ಯ​ವಿ​ಲ್ಲ’ ಎಂದಿದೆ.

click me!