ಅಂಧರ ಕ್ರಿಕೆ​ಟ್‌: ರಾಜ್ಯ​ದ ಸುನಿಲ್‌ ಭಾರತ ತಂಡದ ನಾಯ​ಕ

Published : Nov 27, 2019, 09:37 AM IST
ಅಂಧರ ಕ್ರಿಕೆ​ಟ್‌: ರಾಜ್ಯ​ದ ಸುನಿಲ್‌ ಭಾರತ ತಂಡದ ನಾಯ​ಕ

ಸಾರಾಂಶ

ನೇಪಾಳ ವಿರುದ್ದದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಅಂಧರ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ರಾಜ್ಯದ ಸುನಿಲ್ ರಮೇಶ್ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿರುವ ಇತರ ಕನ್ನಡಿಗರ ವಿವರ ಇಲ್ಲಿದೆ.  

ನವ​ದೆ​ಹ​ಲಿ(ನ.27) : ಡಿ.2 ರಿಂದ 8ರ ವರೆಗೆ ನಡೆ​ಯ​ಲಿ​ರುವ ನೇಪಾಳ ವಿರು​ದ್ಧದ ಸೀಮಿತ ಓವ​ರ್‌​ಗಳ ಸರ​ಣಿಗೆ ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎ​ಬಿ​ಐ) ಆಯ್ಕೆ ಸಮಿತಿ, 10 ರಾಜ್ಯ​ಗ​ಳಿಂದ 14 ಸದ​ಸ್ಯರ ಭಾರತ ತಂಡ​ವನ್ನು ಆಯ್ಕೆ ಮಾಡಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!

ಕರ್ನಾ​ಟ​ಕದ ಸುನಿಲ್‌ ರಮೇಶ್‌ರನ್ನು ಏಕ​ದಿನ ತಂಡದ ನಾಯ​ಕ​ರ​ನ್ನಾಗಿ ನೇಮಿ​ಸಿದೆ. ರಾಜ್ಯದ ಆಟ​ಗಾರರಾದ ಲೋಕೇಶ್‌, ಏಕ​ದಿನ ನಾಯಕ ಸುನಿಲ್‌, ಏಕದಿನ ಹಾಗೂ ಟಿ20 ಎರಡೂ ತಂಡ​ಗ​ಳಲ್ಲಿ ಸ್ಥಾನ ಪಡೆ​ದಿ​ದ್ದಾ​ರೆ. ಭಾರ​ತ ಅಂಧರ ಟಿ20 ನಾಯ​ಕ​ರಾಗಿ ಹರ್ಯಾ​ಣದ ದೀಪಕ್‌ ಮಲಿಕ್‌ ಆಯ್ಕೆ​ ಆಗಿದ್ದಾರೆ.

ಇದನ್ನೂ ಓದಿ:  ಅಂಧರ ಟಿ20: ಲಂಕಾ ವಿರುದ್ಧ ಭಾರತಕ್ಕೆ ಸರಣಿ!

ಡಿ.2ರಿಂದ 4ರ ವರೆಗೆ ಕಾನ್ಪು​ರ​ದಲ್ಲಿ 3 ಪಂದ್ಯ​ಗಳ ಏಕ​ದಿನ ಸರಣಿ ನಡೆ​ಯ​ಲಿದೆ. ಡಿ.6 ರಿಂದ 8ರ ವರೆಗೆ ಡೆಹ್ರಾ​ಡೂ​ನ್‌​ನಲ್ಲಿ 3 ಪಂದ್ಯ​ಗಳ ಟಿ20 ಸರಣಿ ನಡೆ​ಯ​ಲಿ​ದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?