ಅಂಧರ ಕ್ರಿಕೆ​ಟ್‌: ರಾಜ್ಯ​ದ ಸುನಿಲ್‌ ಭಾರತ ತಂಡದ ನಾಯ​ಕ

By Web DeskFirst Published Nov 27, 2019, 9:37 AM IST
Highlights

ನೇಪಾಳ ವಿರುದ್ದದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಅಂಧರ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ರಾಜ್ಯದ ಸುನಿಲ್ ರಮೇಶ್ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿರುವ ಇತರ ಕನ್ನಡಿಗರ ವಿವರ ಇಲ್ಲಿದೆ.
 

ನವ​ದೆ​ಹ​ಲಿ(ನ.27) : ಡಿ.2 ರಿಂದ 8ರ ವರೆಗೆ ನಡೆ​ಯ​ಲಿ​ರುವ ನೇಪಾಳ ವಿರು​ದ್ಧದ ಸೀಮಿತ ಓವ​ರ್‌​ಗಳ ಸರ​ಣಿಗೆ ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎ​ಬಿ​ಐ) ಆಯ್ಕೆ ಸಮಿತಿ, 10 ರಾಜ್ಯ​ಗ​ಳಿಂದ 14 ಸದ​ಸ್ಯರ ಭಾರತ ತಂಡ​ವನ್ನು ಆಯ್ಕೆ ಮಾಡಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!

ಕರ್ನಾ​ಟ​ಕದ ಸುನಿಲ್‌ ರಮೇಶ್‌ರನ್ನು ಏಕ​ದಿನ ತಂಡದ ನಾಯ​ಕ​ರ​ನ್ನಾಗಿ ನೇಮಿ​ಸಿದೆ. ರಾಜ್ಯದ ಆಟ​ಗಾರರಾದ ಲೋಕೇಶ್‌, ಏಕ​ದಿನ ನಾಯಕ ಸುನಿಲ್‌, ಏಕದಿನ ಹಾಗೂ ಟಿ20 ಎರಡೂ ತಂಡ​ಗ​ಳಲ್ಲಿ ಸ್ಥಾನ ಪಡೆ​ದಿ​ದ್ದಾ​ರೆ. ಭಾರ​ತ ಅಂಧರ ಟಿ20 ನಾಯ​ಕ​ರಾಗಿ ಹರ್ಯಾ​ಣದ ದೀಪಕ್‌ ಮಲಿಕ್‌ ಆಯ್ಕೆ​ ಆಗಿದ್ದಾರೆ.

ಇದನ್ನೂ ಓದಿ:  ಅಂಧರ ಟಿ20: ಲಂಕಾ ವಿರುದ್ಧ ಭಾರತಕ್ಕೆ ಸರಣಿ!

ಡಿ.2ರಿಂದ 4ರ ವರೆಗೆ ಕಾನ್ಪು​ರ​ದಲ್ಲಿ 3 ಪಂದ್ಯ​ಗಳ ಏಕ​ದಿನ ಸರಣಿ ನಡೆ​ಯ​ಲಿದೆ. ಡಿ.6 ರಿಂದ 8ರ ವರೆಗೆ ಡೆಹ್ರಾ​ಡೂ​ನ್‌​ನಲ್ಲಿ 3 ಪಂದ್ಯ​ಗಳ ಟಿ20 ಸರಣಿ ನಡೆ​ಯ​ಲಿ​ದೆ.

click me!