IND vs WI T20 ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ, ಸೋಲಿಗೆ ಸೇಡು ತೀರಿಸುತ್ತಾ ಪಾಂಡ್ಯ ಪಡೆ!

Published : Aug 06, 2023, 07:34 PM ISTUpdated : Aug 06, 2023, 07:44 PM IST
IND vs WI T20 ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ, ಸೋಲಿಗೆ ಸೇಡು ತೀರಿಸುತ್ತಾ ಪಾಂಡ್ಯ ಪಡೆ!

ಸಾರಾಂಶ

ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20ಯಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಗಯಾನ(ಆ.06) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕುಲ್ದೀಪ್ ಯಾದವ್ ಗಾಯಗೊಂಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಕುಲ್ದೀಪ್ ಬದಲು ರವಿ ಬಿಶ್ನೋಯ್ ಸ್ಥಾನ ಪಡೆದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಅರ್ಶದೀಪ್ ಸಿಂಗ್, ಯಜುವೇಂದ್ರ ಚಹಾಲ್, ಮುಕೇಶ್ ಕುಮಾರ್, ರವಿ ಬಿಶ್ನೋಯ್ 

2019ರ ವಿಶ್ವಕಪ್ ಬಳಿಕ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು..! ಈ ಪಟ್ಟಿಯಲ್ಲಿ ಏಕೈಕ ಭಾರತೀಯನಿಗೆ ಸ್ಥಾನ

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜೋನ್ಸನ್ ಚಾರ್ಲೆಸ್, ನಿಕೋಲಸ್ ಪೂರನ್, ರೊವ್ಮನ್ ಪೊವೆಲ್(ನಾಯಕ), ಶಿಮ್ರೊನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಅಕೀಲ್ ಹುಸೈನ್, ಅಲ್ಜಾರಿ ಜೊಸೆಫ್, ಒಬೆಡ್ ಮೆಕೊಯ್ 

ಮೊದಲ ಟಿ20 ಪಂದ್ಯದಲ್ಲಿ ವಿಂಡೀಸ್‌ ಪವರ್‌-ಪ್ಲೇ ಮುಕ್ತಾಯಕ್ಕೆ 2 ವಿಕೆಟ್‌ಗೆ 54 ರನ್‌ ಸಿಡಿ​ಸಿ​ದರೂ, 10 ಓವರ್‌ ಮುಕ್ತಾ​ಯಕ್ಕೆ 3 ವಿಕೆಟ್‌ಗೆ 69 ರನ್‌ ಗಳಿ​ಸಿತು. ನಾಯಕ ರೋವ್ಮನ್‌ ಪೋವೆಲ್‌(48)ರ ಹೋರಾ​ಟದ ನೆರ​ವಿ​ನಿಂದ ಕೊನೆಯ 10 ಓವ​ರಲ್ಲಿ 80 ರನ್‌ ಕಲೆಹಾಕಿದ ವಿಂಡೀಸ್‌ 20 ಓವ​ರಲ್ಲಿ 6 ವಿಕೆಟ್‌ಗೆ 149 ರನ್‌ಗಳ ಸ್ಪರ್ಧಾ​ತ್ಮಕ ಮೊತ್ತ ದಾಖ​ಲಿ​ಸಿತು.

ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ಪಾಕ್‌ ಮಾಜಿ ಕ್ರಿಕೆಟಿಗ..!

ಶುಭ್‌ಮನ್‌ ಗಿಲ್‌(03), ಇಶಾನ್‌ ಕಿಶನ್‌(06) ತಂಡಕ್ಕೆ ಉತ್ತಮ ಆರಂಭ ಒದ​ಗಿ​ಸಲು ವಿಫ​ಲ​ರಾ​ದರು. ಸೂರ್ಯ​ಕು​ಮಾರ್‌(21) ನಿರೀ​ಕ್ಷಿತ ಪ್ರದ​ರ್ಶ​ನ ತೋರ​ಲಿಲ್ಲ. ಪದಾ​ರ್ಪಣಾ ಪಂದ್ಯ​ದಲ್ಲೇ ಆಕ​ರ್ಷಕ ಆಟ​ವಾ​ಡಿದ ತಿಲಕ್‌ ವರ್ಮಾ 22 ಎಸೆ​ತ​ದಲ್ಲಿ 39 ರನ್‌ ಸಿಡಿ​ಸಿ​ದರು. ಆದರೆ 16ನೇ ಓವ​ರಲ್ಲಿ ಹಾರ್ದಿಕ್‌, ಸ್ಯಾಮ್ಸನ್‌ ಇಬ್ಬರೂ ಔಟಾ​ಗಿದ್ದು ಪಂದ್ಯ ವಿಂಡೀಸ್‌ನತ್ತ ವಾಲು​ವಂತೆ ಮಾಡಿತು. ಕೊನೆ​ಯಲ್ಲಿ ಅಶ್‌ರ್‍ದೀಪ್‌ 2 ಬೌಂಡರಿ ಬಾರಿಸಿ ಸಾಹಸ ಮೆರೆ​ಯುವ ಯತ್ನ ನಡೆ​ಸಿ​ದ​ರೂ, ಗೆಲು​ವಿಗೆ ಸಾಕಾ​ಗ​ಲಿಲ್ಲ. ಭಾರತ 9 ವಿಕೆಟ್‌ ಕಳೆ​ದು​ಕೊಂಡು 145 ರನ್‌ ಗಳಿ​ಸ​ಲಷ್ಟೇ ಶಕ್ತ​ವಾ​ಯಿತು.

ಭಾರ​ತಕ್ಕೆ 30 ಎಸೆ​ತ​ದಲ್ಲಿ ಗೆಲ್ಲಲು ಕೇವಲ 37 ರನ್‌ ಬೇಕಿತ್ತು. ಆದರೆ 16ನೇ ಓವರ್‌ ಪಂದ್ಯದ ಗತಿ ಬದ​ಲಿ​ಸಿತು. ಹಾರ್ದಿಕ್‌ ಹಾಗೂ ಸ್ಯಾಮ್ಸನ್‌ ಇಬ್ಬರೂ ಔಟಾ​ದರು. ಇದು ತಂಡದ ಸೋಲಿಗೆ ಪ್ರಮುಖ ಕಾರ​ಣ​ವೆ​ನಿ​ಸಿ​ತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Viral Video: ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು ಕಾಶ್ಮೀರ ನಾಯಕನಿಂದ ಕರ್ನಾಟಕ ಪ್ಲೇಯರ್‌ಗೆ ಡಿಚ್ಚಿ!
ಮಹಿಳೆ ಜೊತೆ ಫ್ಲರ್ಟ್‌ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು