ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೂರನೇ ಟೆಸ್ಟ್ ಇಂದೋರ್ ಶಿಫ್ಟ್
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ
ಮೂರನೇ ಟೆಸ್ಟ್ ಪಂದ್ಯವು ಮಾರ್ಚ್ 01ರಿಂದ 5ರ ವರೆಗೆ ನಡೆಯಲಿದೆ
ನವದೆಹಲಿ(ಫೆ.14): ಮಾರ್ಚ್ 1ರಿಂದ 5ರ ವರೆಗೂ ನಡೆಯಲಿರುವ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ 3ನೇ ಟೆಸ್ಟ್ ಧರ್ಮಶಾಲಾದಿಂದ ಇಂದೋರ್ಗೆ ಸ್ಥಳಾಂತರಗೊಂಡಿದೆ. ಧರ್ಮಶಾಲಾ ಕ್ರೀಡಾಂಗಣ ಇತ್ತೀಚೆಗೆ ನವೀಕರಣಗೊಂಡಿದ್ದು, ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯಕ್ಕೆ ಇನ್ನೂ ಯೋಗ್ಯವಲ್ಲದ ಕಾರಣ ಸ್ಥಳಾಂತರಗೊಳಿಸಲಾಗಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದೋರ್ನ ಹೋಲ್ಕರ್ ಕ್ರೀಡಾಂಗಣ ಈವರೆಗೂ 2 ಟೆಸ್ಟ್ಗಳಿಗೆ ಆತಿಥ್ಯ ವಹಿಸಿದ್ದು, ಎರಡರಲ್ಲೂ ಭಾರತ ದೊಡ್ಡ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ವಿರುದ್ಧ 2016ರಲ್ಲಿ ನಡೆದಿದ್ದ ಪಂದ್ಯವನ್ನು 321 ರನ್ಗಳಿಂದ ಗೆದ್ದಿದ್ದ ಭಾರತ, 2019ರಲ್ಲಿ ಬಾಂಗ್ಲಾ ವಿರುದ್ಧ ಇನ್ನಿಂಗ್್ಸ ಹಾಗೂ 130 ರನ್ಗಳ ಜಯ ದಾಖಲಿಸಿತ್ತು. ಈ ಮೈದಾನದಲ್ಲಿ ರವಿಚಂದ್ರನ್ ಅಶ್ವಿನ್ 2 ಟೆಸ್ಟ್ನಲ್ಲಿ ಬರೋಬ್ಬರಿ 18 ವಿಕೆಟ್ ಕಬಳಿಸಿದ್ದಾರೆ.
NEWS - Venue for third Test of the Australia tour of India for Border-Gavaskar Trophy shifted to Indore from Dharamsala.
More details here - https://t.co/qyx2H6N4vT pic.twitter.com/N3W00ukvYJ
ಅಶ್ವಿನ್ ಭೀತಿಯಲ್ಲಿ ಆಸೀಸ್: ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ರವಿಚಂದ್ರನ್ ಮಾರಕ ದಾಳಿಗೆ ತತ್ತರಿಸಿ ಹೋಗಿತ್ತು. ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದ್ದ ಅಶ್ವಿನ್, ಎರಡನೇ ಇನಿಂಗ್ಸ್ನಲ್ಲಿ ಕೇವಲ 37 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು 91 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಉಸ್ಮಾನ್ ಖವಾಜರನ್ನು ಅಶ್ವಿನ್ 5ಕ್ಕೆ ಔಟ್ ಮಾಡಿದರೆ, ಬಳಿಕ ಡೇವಿಡ್ ವಾರ್ನರ್(10), ರೆನ್ಶಾ(02), ಪೀಟರ್ ಹ್ಯಾಂಡ್್ಸಕಂಬ್(06), ಅಲೆಕ್ಸ್ ಕೇರಿ(10) ಅಶ್ವಿನ್ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದರು. ಈ ನಾಲ್ವರೂ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಇದೀಗ ಡೆಲ್ಲಿ ಟೆಸ್ಟ್ ಪಂದ್ಯದಲ್ಲೂ ಕಾಂಗರೂ ಪಡೆ ಅಶ್ವಿನ್ ಭೀತಿಯಲ್ಲಿಯೇ ಕಣಕ್ಕಿಳಿಯುವ ಸಾಧ್ಯತೆಯಿದೆ
ಆಸೀಸ್ ಏಕದಿನ ಸರಣಿಗೂ ವೇಗಿ ಬುಮ್ರಾ ಅಲಭ್ಯ?
ನವದೆಹಲಿ: ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮಾತ್ರವಲ್ಲದೇ ಏಕದಿನ ಸರಣಿಯಲ್ಲೂ ಆಡುವ ಸಾಧ್ಯತೆಗಳಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರು ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ನಿರೀಕ್ಷೆಯಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಏಕದಿನ ವಿಶ್ವಕಪ್ ಇದೇ ವರ್ಷ ನಡೆಯಲಿರುವ ಕಾರಣ, ಅವರನ್ನು ಆತುರದಲ್ಲಿ ತಂಡಕ್ಕೆ ಸೇರಿಸಿಕೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
WPL Auction ಆರ್ಸಿಬಿ ಪವರ್-ಪ್ಲೇ ಹರಾಜು ಸೂಪರ್..! 5 ಆಟಗಾರ್ತಿಯರಿಗೆ 9 ಕೋಟಿ ರುಪಾಯಿ ಖರ್ಚು
ಇದೇ ವೇಳೆ ಬೆನ್ನು ನೋವಿನಿಂದಾಗಿ ಆಸ್ಪ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್ಗೆ ಅಲಭ್ಯರಾಗಿದ್ದ ಶ್ರೇಯಸ್ ಅಯ್ಯರ್ 2ನೇ ಟೆಸ್ಟ್ಗೂ ಗೈರಾಗುವ ಸಾಧ್ಯತೆ ಇದೆ. ಸದ್ಯ ಅವರು ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.
ಶುಭ್ಮನ್ ಗಿಲ್ ಐಸಿಸಿ ಜನವರಿ ತಿಂಗಳ ಆಟಗಾರ
ನವದೆಹಲಿ: ಅಭೂತಪೂರ್ವ ಲಯದಲ್ಲಿರುವ ಭಾರತದ ತಾರಾ ಬ್ಯಾಟರ್ ಶುಭ್ಮನ್ ಗಿಲ್ ಐಸಿಸಿ ಜನವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಷೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ದ್ವಿಶತಕ ಹಾಗೂ ಶತಕ ಬಾರಿಸಿದ್ದ ಗಿಲ್, ಏಕದಿನ ಕ್ರಿಕೆಟ್ ನಂ.1 ಬೌಲರ್ ಮೊಹಮದ್ ಸಿರಾಜ್ ಹಾಗೂ ನ್ಯೂಜಿಲೆಂಡ್ ಬ್ಯಾಟರ್ ಡೆವೋನ್ ಕಾನ್ವೇ ಅವರನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಇಂಗ್ಲೆಂಡ್ನ ಗ್ರೇಸ್ ಸ್ಕ್ರೀವನ್ಸ್ ಪ್ರಶಸ್ತಿ ಪಡೆದಿದ್ದಾರೆ.