ಟಿ20 ವಿಶ್ವಕಪ್‌ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!

ಸ್ಪಿನ್ನರ್ ವರುಣ್ ಚಕ್ರವರ್ತಿ 2021ರ ಟಿ20 ವಿಶ್ವಕಪ್ ಸೋಲಿನ ನಂತರದ ಕರಾಳ ದಿನಗಳನ್ನು ವಿವರಿಸಿದ್ದಾರೆ. ಬೆದರಿಕೆ ಕರೆಗಳು, ಹಿಂಬಾಲಿಸುವಿಕೆ ಮತ್ತು ಡಿಪ್ರೆಷನ್‌ಗೆ ಒಳಗಾದ ಬಗ್ಗೆ ಅವರು ಮಾತನಾಡಿದ್ದಾರೆ.


ನವದೆಹಲಿ: ಇತ್ತೀಚೆಗೆ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, 2021ರ ಟಿ20 ವಿಶ್ವಕಪ್‌ ಸೋತಾಗ ಎದುರಾಗಿದ್ದ ಸಂಕಷ್ಟದ ಕ್ಷಣಗಳನ್ನು ವಿವರಿಸಿದ್ದಾರೆ. 

ಈ ಬಗ್ಗೆ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘2021ರ ವಿಶ್ವಕಪ್‌ ಬಳಿಕ ನನಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಭಾರತಕ್ಕೆ ಬರದಂತೆ ಬೆದರಿಸಿದ್ದರು. ಬರಲು ಪ್ರಯತ್ನಿಸಿದರೂ ಸಾಧ್ಯವಿಲ್ಲ ಎಂದಿದ್ದರು. ವಿಮಾನ ನಿಲ್ದಾಣದಿಂದ ಕೆಲವು ಮಂದಿ ನನ್ನನ್ನು ಹಿಂಬಾಲಿಸಿದ್ದರು. ಬೈಕ್‌ನಲ್ಲಿ ಮನೆವರೆಗೂ ಬಂದಿದ್ದರು. ಹೀಗಾಗಿ ಹಲವು ಬಾರಿ ಅವರ ಕಣ್ತಪ್ಪಿಸಬೇಕಾಗಿತ್ತು. ಆದರೆ ಅಭಿಮಾನಿಗಳು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದು ಸಹಜ’ ಎಂದಿದ್ದಾರೆ. 

Latest Videos

ಇದನ್ನೂ ಓದಿ: ಭಾರತ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡ್ತಾರಾ ಕೊಹ್ಲಿ? ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಆಸೆ ವ್ಯಕ್ತಪಡಿಸಿದ ವಿರಾಟ್!

ಅವು ನನ್ನ ಪಾಲಿನ ಅತ್ಯಂತ ಕರಾಳ ದಿನಗಳಾಗಿದ್ದವು, ನಾನು ಒಂದು ರೀತಿ ಡಿಪ್ರೆಷನ್‌ಗೆ ಒಳಗಾಗಿದ್ದೆ. ಯಾಕೆಂದರೆ ನಾನು ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದೆ. ನನ್ನ ಸ್ಥಾನಕ್ಕೆ ನ್ಯಾಯಕೊಡಲು ವಿಫಲವಾಗಿಬಿಟ್ಟೆ ಎಂದು ಅನಿಸಿತ್ತು. ನನ್ನ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಕೊಂಡು 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು ಎಂದು ಆ ದಿನಗಳನ್ನು ವರುಣ್ ಚಕ್ರವರ್ತಿ ಮೆಲುಕು ಹಾಕಿದ್ದಾರೆ.

𝗖. 𝗛. 𝗔. 𝗠. 𝗣. 𝗜. 𝗢. 𝗡. 𝗦! 🇮🇳🏆 🏆 🏆

The Rohit Sharma-led are ICC 2025 𝙒𝙄𝙉𝙉𝙀𝙍𝙎 👏 👏

Take A Bow! 🙌 🙌 | | pic.twitter.com/ey2llSOYdG

— BCCI (@BCCI)

ವರುಣ್ ಚಕ್ರವರ್ತಿ ತವರಿನಲ್ಲಿ ನಡೆದ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿಯನ್ನು ಭಾರತ ಏಕದಿನ ಸರಣಿಗೂ ಆಯ್ಕೆ ಮಾಡಲಾಗಿತ್ತು. 

ಇದನ್ನೂ ಓದಿ: WPL 2025 ಮುಂಬೈ ಇಂಡಿಯನ್ಸ್‌ ಚಾಂಪಿಯನ್‌; ಡೆಲ್ಲಿಗೆ ಫೈನಲ್‌ನಲ್ಲಿ ಹ್ಯಾಟ್ರಿಕ್ ಸೋಲು

ಟಿ20 ಸರಣಿ ಮುಕ್ತಾಯದ ಬಳಿಕ ನಾನು ಚೆನ್ನೈಗೆ ವಾಪಾಸ್ಸಾಗಲು ಟಿಕೆಟ್ ಬುಕ್ ಮಾಡಿದ್ದೆ. ಆದರೆ ಮರುದಿನವೇ ನಾನು ಏಕದಿನ ಸರಣಿಗೂ ಆಯ್ಕೆಯಾಗಿದ್ದೇನೆ. ಹೀಗಾಗಿ ನಾಗ್ಪುರಕ್ಕೆ ಹೊರಡಲು ರೆಡಿಯಾಗಿ ಎನ್ನುವ ಸಂದೇಶ ಬಂದಿತು ಎಂದು ಇಂಗ್ಲೆಂಡ್ ಎದುರಿಸನ ಏಕದಿನ ಸರಣಿಗೆ ಆಯ್ಕೆಯಾದ ವಿಚಾರವನ್ನು ವರುಣ್ ಚಕ್ರವರ್ತಿ ಬಿಚ್ಚಿಟ್ಟಿದ್ದಾರೆ.

2021ರ ವಿಶ್ವಕಪ್‌ ಆಡಿದ್ದ ವರುಣ್‌ ಒಂದೂ ವಿಕೆಟ್‌ ಪಡೆದಿರಲಿಲ್ಲ. ಇತ್ತೀಚೆಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ 9 ವಿಕೆಟ್‌ ಕಬಳಿಸಿದ್ದರು. ಇದೀಗ ವರುಣ್ ಚಕ್ರವರ್ತಿ ಮುಂಬರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲು ಸಜ್ಜಾಗಿದ್ದಾರೆ. ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ಅವರನ್ನು ಕೆಕೆಆರ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿತ್ತು.

click me!