ದುಲೀಪ್ ಟ್ರೋಫಿಯಲ್ಲಿ ಕನ್ನಡದ ತ್ರಿಮೂರ್ತಿಗಳ ಕಮಾಲ್..! ಕರ್ನಾಟಕದಲ್ಲಿ ಮತ್ತೆ ವೇಗಿಗಳ ಉದಯ?

Published : Jul 18, 2023, 03:56 PM ISTUpdated : Jul 18, 2023, 04:03 PM IST
ದುಲೀಪ್ ಟ್ರೋಫಿಯಲ್ಲಿ ಕನ್ನಡದ ತ್ರಿಮೂರ್ತಿಗಳ ಕಮಾಲ್..! ಕರ್ನಾಟಕದಲ್ಲಿ ಮತ್ತೆ ವೇಗಿಗಳ ಉದಯ?

ಸಾರಾಂಶ

ವೇಗಿಗಳ ನಾಡಲ್ಲಿ ಮರೆಯಾಗಿದ್ದ ವೇಗಿಗಳು..! ಕರ್ನಾಟಕದಲ್ಲಿ ಮತ್ತೆ ಉದಯಿಸ್ತಿದ್ದಾರೆ ಫಾಸ್ಟ್ ಬೌಲರ್ಸ್ ದುಲೀಪ್ ಟ್ರೋಫಿಯಲ್ಲಿ ತ್ರಿಮೂರ್ತಿಗಳು ಕಮಾಲ್​..!  

ಬೆಂಗಳೂರು(ಜು.18) ಕರ್ನಾಟಕ, ಟೀಂ ಇಂಡಿಯಾಗೆ ಬ್ಯಾಟರ್ಸ್ ಮತ್ತು ಸ್ಪಿನ್ ಬೌಲರ್​ಗಳನ್ನ ಹೇಗೆ ಕೊಡುಗೆಯಾಗಿ ನೀಡಿದ್ಯೋ ಹಾಗೆ ವೇಗದ ಬೌಲರ್​ಗಳನ್ನೂ ನೀಡಿದೆ. ವೇಗಿಗಳ ನಾಡು ಕರ್ನಾಟಕ ಅಂದ್ರೆ ತಪ್ಪಲ್ಲ. ಜಾವಗಲ್ ಶ್ರೀನಾಥ್​, ವೆಂಕಟೇಶ್ ಪ್ರಸಾದ್​, ಡೇವಿಡ್ ಜಾನ್ಸನ್, ದೊಡ್ಡ ಗಣೇಶ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಸ್​. ಅರವಿಂದ್​ ಹೀಗೆ ಸಾಕಷ್ಟು ವೇಗದ ಬೌಲರ್ಸ್​ ಕರ್ನಾಟಕದಿಂದ ಟೀಂ ಇಂಡಿಯಾ ಪ್ರತಿನಿಧಿಸಿದ್ದಾರೆ. ಇದರಲ್ಲಿ ಬಹುತೇಕರು ಮಿಂಚಿದ್ದಾರೆ.

ಸದ್ಯ ಟೀಂ ಇಂಡಿಯಾದಲ್ಲಿ ಕರ್ನಾಟಕದ ಒಬ್ಬೇ ಒಬ್ಬ ಫಾಸ್ಟ್ ಬೌಲರ್ ಇಲ್ಲ. ಪ್ರತಿ ಎರಡು-ಮೂರು ವರ್ಷಕ್ಕೆ ಒಬ್ಬ ವೇಗದ ಬೌಲರ್ ಕರ್ನಾಟಕದಿಂದ ರಾಷ್ಟ್ರೀಯ ತಂಡ ಸೇರಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚೆಗೆ ಕರ್ನಾಟಕದ ಯಾವ್ದೇ ಫಾಸ್ಟ್ ಬೌಲರ್​ ಟೀಂ ಇಂಡಿಯಾ ಪರ ಆಡಿಲ್ಲ. ವೇಗಿಗಳ ನಾಡಿನಲ್ಲಿ ವೇಗಿಗಳೇ ಇಲ್ಲದಂತಾಗಿತ್ತು. ಕರ್ನಾಟಕದಲ್ಲಿನ ಬತ್ತಳಿಕೆಗಳು ಮುಗಿದಿವೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೆ ಈಗ ದಿಢೀರನೇ ಒಂದಲ್ಲ ಎರಡಲ್ಲ ಮೂರು ಬತ್ತಳಿಕೆಗಳು ರೆಡಿಯಾಗಿವೆ. ಅರ್ಥಾತ್​ ಮೂವರು ವೇಗಿಗಳ ಉಗಮವಾಗಿದೆ. ಅದು ದುಲೀಪ್ ಟ್ರೋಫಿ ಮೂಲಕ.

ಧೋನಿ ಮನೆಯಲ್ಲಿನ ಬೈಕ್-ಕಾರು ಕಲೆಕ್ಷನ್‌ಗೆ ಮನಸೋತ ವೆಂಕಟೇಶ್ ಪ್ರಸಾದ್‌..!

ಹೌದು, ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿಯಲ್ಲಿ ಕರ್ನಾಟಕದ ವೇಗದ ಬೌಲರ್​ಗಳು ಮಿಂಚಿದ್ದಾರೆ. ಸೌತ್ ಝೋನ್ ತಂಡಕ್ಕೆ ದುಲೀಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದೇ ಕನ್ನಡದ ಮೂವರು ಫಾಸ್ಟ್ ಬೌಲರ್ಸ್​. ಚಿನ್ನಸ್ವಾಮಿ ಸ್ಟೇಡಿಯಂನ ಬೌನ್ಸಿ ಪಿಚ್​ನಲ್ಲಿ ಈ ತ್ರಿಮೂರ್ತಿಗಳು ಮಾರಕ ಬೌಲಿಂಗ್ ದಾಳಿ ನಡೆಸಿದ್ರು. ಪರಿಣಾಮ ಪಶ್ಚಿಮ ವಲಯ ತಂಡ ತತ್ತರಸಿ ಹೋಯ್ತು. ವೆಸ್ಟ್ ಝೋನ್ ತಂಡದಲ್ಲಿ ಏನು ಡಮ್ಮಿ ಬ್ಯಾಟರ್ಸ್ ಇರಲಿಲ್ಲ. ಪೂಜಾರ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಪ್ರಿಯಾಂಕ್ ಪಾಂಚಾಲ್ ಹೀಗೆ ಘಟಾನುಘಟಿ ಬ್ಯಾಟರ್​ಗಳಿಗೆ ಎರೆಡೆರಡು ಬಾರಿ ಪೆವಿಲಿಯನ್ ದಾರಿ ತೋರಿಸಿದ್ದೇ ಕರ್ನಾಟಕದ ವೇಗಿಗಳು.

40ರಲ್ಲಿ 33 ವಿಕೆಟ್​ಗಳು ಕನ್ನಡಿಗರ ಪಾಲು..!

ದುಲೀಪ್ ಟ್ರೋಫಿಯ ಸೆಮಿಫೈನಲ್ & ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆದವು. ಸೆಮಿಸ್​ನಲ್ಲಿ ಉತ್ತರ ವಲಯ ಹಾಗೂ ಫೈನಲ್​ನಲ್ಲಿ ಪಶ್ಚಿಮ ವಲಯ ತಂಡಗಳನ್ನ ಸೋಲಿಸಿದ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಸೌತ್ ಝೋನ್​ಗೆ ಕನ್ನಡಿಗರು ದುಲೀಪ್ ಟ್ರೋಫಿ ಗೆಲ್ಲಿಸಿಕೊಟ್ಟರು ಅಂದ್ರೆ ತಪ್ಪಲ್ಲ. ಎದುರಾಳಿಯ 40ರಲ್ಲಿ 33 ವಿಕೆಟ್​ಗಳನ್ನ ಕರ್ನಾಟಕದ ವೇಗದ ಬೌಲರ್​ಗಳೇ ಪಡೆದಿದ್ದಾರೆ. ಕೊಡಗಿನ ಕುವರ ವಿದ್ಯುತ್​ ಕಾವೇರಪ್ಪ ಬರೋಬ್ಬರಿ 15 ವಿಕೆಟ್ ಪಡೆದಿದ್ದಾರೆ. ಇನ್ನು  ವಾಸುಕಿ ಕೌಶಿಕ್ ಮತ್ತು ವೈಶಾಕ್ ವಿಜಯ್​ಕುಮಾರ್ ಎರಡು ಮ್ಯಾಚ್​ನಿಂದ ತಲಾ 9 ವಿಕೆಟ್​ಗಳನ್ನ ಉರುಳಿಸಿದ್ರು. ಅಲ್ಲಿಗೆ ನೀವೇ ಊಹಿಸಿ ಈ ತ್ರಿವಳಿ ವೇಗಿಗಳು ಎದುರಾಳಿಯನ್ನ ಹೇಗೆ ಕಾಡಿದ್ದಾರೆ ಅಂತ.

ಇವರೇ ನೋಡಿ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಭಾರತದ ಕ್ರಿಕೆಟಿಗ..! ಆದ್ರೆ ಇವರು ಕೊಹ್ಲಿ, ಸಚಿನ್,ಯುವಿ ಅಲ್ಲವೇ ಅಲ್ಲ..!

ಟೀಂ ಇಂಡಿಯಾಗೆ ಎಂಟ್ರಿಕೊಡ್ತಾರಾ ತ್ರಿವಳಿಗಳು..?

ಈ ತ್ರಿವಳಿ ಫಾಸ್ಟ್ ಬೌಲರ್ಸ್​ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಆಯ್ಕೆಗಾರರ ಗಮನವನ್ನೂ ಸೆಳೆದಿದ್ದಾರೆ. ಇವರು ಪ್ರದರ್ಶನ ಹೀಗೆ ಮುಂದುವರೆದ್ರೆ ಸದ್ಯದಲ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಡಲಿದ್ದಾರೆ. ಭಾರತ ತಂಡದಲ್ಲೂ ವೇಗದ ಬೌಲರ್​ಗಳ ಕೊರತೆ ಇದೆ. ಅದನ್ನ ಈ ತ್ರಿವಳಿ ವೇಗಿಗಳು ನೀಗಿಸ್ತಾರಾ..? ಕಾದು ನೋಡ್ಬೇಕು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!