
ಮುಂಬೈ: ಏಷ್ಯಾಕಪ್ ಕ್ರಿಕೆಟ್ಗೆ ಮುನ್ನ ಭಾರತ ಕ್ರಿಕೆಟ್ ತಂಡ ದೊಡ್ಡ ಶಾಕ್ ಎದುರಾಗಿದೆ. ತಂಡದ ಪ್ರಮುಖ ಜರ್ಸಿ ಪ್ರಾಯೋಜಕರಾಗಿದ್ದ ಡ್ರೀಮ್ 11 ಹಿಂದೆ ಸರಿದಿದೆ. ಆನ್ಲೈನ್ ಗೇಮ್ಗಳಿಗೆ ನಿಷೇಧ ಹೇರುವ ಕೇಂದ್ರ ಸರ್ಕಾರದ ಹೊಸ ಕಾನೂನಿನಿಂದಾಗಿ ಡ್ರೀಮ್ 11 ಹಿಂದೆ ಸರಿದಿದೆ. ಏಷ್ಯಾಕಪ್ಗೆ ಮುನ್ನ ತಂಡದ ಜರ್ಸಿ ಪ್ರಾಯೋಜಕರನ್ನು ಹುಡುಕಬೇಕಾಗಿದೆ. ಒಂದು ವೇಳೆ ಪ್ರಾಯೋಜಕರು ಸಿಗದಿದ್ದರೆ ತಾತ್ಕಾಲಿಕ ಪ್ರಾಯೋಜಕರ ಜರ್ಸಿಯೊಂದಿಗೆ ಟೂರ್ನಿಗೆ ಇಳಿಯಲು ಬಿಸಿಸಿಐ ಚಿಂತಿಸುತ್ತಿದೆ. ನಂತರ ವಿವರವಾದ ಚರ್ಚೆ ಮತ್ತು ಬಿಡ್ಡಿಂಗ್ ಮೂಲಕ ಪ್ರಾಯೋಜಕರನ್ನು ಹುಡುಕಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಕಠಿಣ ಪೈಪೋಟಿ
ಭಾರತ ತಂಡದ ಪ್ರಾಯೋಜಕತ್ವ ಪಡೆಯಲು ಪೈಪೋಟಿ ಇದೆ ಎಂದು ಬಿಸಿಸಿಐ ಭಾವಿಸಿದೆ. ಇದರಿಂದ ಕೋಟಿಗಟ್ಟಲೆ ಆದಾಯ ನಿರೀಕ್ಷಿಸಲಾಗಿದೆ. ಗ್ರೋ, ಏಂಜಲ್ ಒನ್, ಝೆರೋಧ ಮುಂತಾದ ಹಣಕಾಸು ಸಂಸ್ಥೆಗಳ ಜೊತೆಗೆ ಆಟೋಮೊಬೈಲ್ ಕ್ಷೇತ್ರದ ದಿಗ್ಗಜರು, ಐಪಿಎಲ್ ಪ್ರಾಯೋಜಕರಾದ ಟಾಟಾ, ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೌತಮ್ ಅದಾನಿ ಅದಾನಿ ಗ್ರೂಪ್ ಕೂಡ ಆಸಕ್ತಿ ತೋರಿಸಿವೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 9 ರಂದು ಏಷ್ಯಾಕಪ್ ಆರಂಭವಾಗುವುದರಿಂದ ಹೊಸ ಪ್ರಾಯೋಜಕರನ್ನು ಹುಡುಕುವುದು ಬಿಸಿಸಿಐಗೆ ಸವಾಲಾಗಿದೆ.
ಜರ್ಸಿ ಪ್ರಾಯೋಜಕತ್ವದಲ್ಲಿ ಟೀಂ ಇಂಡಿಯಾ ದುರಾದೃಷ್ಟ
2023 ರಲ್ಲಿ ಡ್ರೀಮ್ 11 ಭಾರತ ತಂಡದ ಪ್ರಮುಖ ಜರ್ಸಿ ಪ್ರಾಯೋಜಕರಾಗಿತ್ತು. ಮೂರು ವರ್ಷಗಳ ಒಪ್ಪಂದ ಇತ್ತು. ಹೊಸ ಕಾನೂನಿನಿಂದಾಗಿ ಡ್ರೀಮ್ 11 ಹಿಂದೆ ಸರಿದಿದೆ. ಭಾರತ ತಂಡದ ಜರ್ಸಿ ಪ್ರಾಯೋಜಕತ್ವ ಕಾನೂನು ಸಮಸ್ಯೆಗೆ ಸಿಲುಕಿದ್ದು ಇದೇ ಮೊದಲಲ್ಲ. 2001 ರಿಂದ 2013 ರವರೆಗೆ ಭಾರತದ ಜರ್ಸಿ ಪ್ರಾಯೋಜಕರಾಗಿದ್ದ ಸಹಾರಾ ಗ್ರೂಪ್ ಅನ್ನು ಆರ್ಥಿಕ ಅ ಸೆಬಿಪರಾಧಗಳಿಗೆ ನಿಷೇಧಿಸಿದ್ದರಿಂದ ಅವರನ್ನು ತೆಗೆದುಹಾಕಲಾಯಿತು.
ನಂತರ ಸ್ಟಾರ್ ಸ್ಪೋರ್ಟ್ಸ್ 2013 ರಿಂದ 2017 ರವರೆಗೆ ಪ್ರಾಯೋಜಕರಾಗಿತ್ತು. ಆದರೆ ಸ್ಪರ್ಧಾ ಆಯೋಗದ ತನಿಖೆಯಿಂದಾಗಿ ಅವರನ್ನೂ ತೆಗೆದುಹಾಕಲಾಯಿತು. ನಂತರ ಒಪ್ಪೊ 2017 ರಿಂದ 2020 ರವರೆಗೆ ಪ್ರಾಯೋಜಕರಾಗಿತ್ತು. 2020 ರಲ್ಲಿ ಬಂದ ಬೈಜೂಸ್ ಆರ್ಥಿಕ ಸಮಸ್ಯೆಗಳಿಂದಾಗಿ ಬಿಸಿಸಿಐ ವಿರುದ್ಧ ಕೇಸ್ ಹೂಡಿದೆ. ಇದೀಗ ಡ್ರೀಮ್ 11 ಕೂಡ ಹಿಂದೆ ಸರಿದಿದೆ. ಇದು ಬಿಸಿಸಿಐ ತಲೆನೋವು ಹೆಚ್ಚುವಂತೆ ಮಾಡಿದೆ.
ಕ್ರಿಕೆಟ್ ಸೇರಿದಂತೆ ದೇಶದ ನಾನಾ ಕ್ರೀಡೆಗಳಲ್ಲಿ ವಿವಿಧ ಹಂತದಲ್ಲಿ ಯಥೇಚ್ಛವಾಗಿ ಬೆಟ್ಟಿಂಗ್ ಆ್ಯಪ್ಗಳ ಪ್ರಚಾರ ನಡೆಯುತ್ತಿದೆ. ಹಲವು ಆ್ಯಪ್ಗಳು ಟೂರ್ನಿಗಳ ಪ್ರಾಯೋಜತ್ವವನ್ನೂ ನಿರ್ವಹಿಸುತ್ತಿವೆ. ಟೀಂ ಇಂಡಿಯಾದ ಆಟಗಾರರು, ಐಪಿಎಲ್, ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್, ಪ್ರೊ ಕಬಡ್ಡಿ ಲೀಗ್ನಂಥ ಪ್ರತಿಷ್ಟಿತ ಟೂರ್ನಿಗಳಲ್ಲಿ ಆಟಗಾರರ ಜೆರ್ಸಿ ಗಳಲ್ಲಿ ಆ್ಯಪ್ಗಳ ಲೋಗೋ ಹಾಕಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಗೇಮಿಂಗ್, ಬೆಟ್ಟಿಂಗ್ ಆ್ಯಪ್ಗಳ ಮೂಲಕ ಅಕ್ರಮ ಹಣ ಸಾಗಣೆ, ತೆರಿಗೆ ವಂಚನೆ ಹಾಗೂ ಭಯೋತ್ಪಾದಕ ಕೃತಗಳಿಗೂ ಹಣ ಬಳಕೆಯಾಗುತ್ತಿರುವುದು ಕಂಡು ಬಂದಿರುವ ಕಾರಣ ಆ್ಯಪ್ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.