ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

Published : Dec 04, 2019, 02:34 PM IST
ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

ಸಾರಾಂಶ

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಅಭೂತಪೂರ್ವ ಯಶಸ್ಸು ಗಳಿಸಿದ ಬೆನ್ನಲ್ಲೇ, ಇದೀಗ ಟೀಂ ಇಂಡಿಯಾ ಆಡುವ ಎಲ್ಲಾ ಟೆಸ್ಟ್ ಸರಣಿಯ ಒಂದು ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಚಿಂತನೆ ನಡೆಸುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವ​ದೆ​ಹ​ಲಿ[ಡಿ.04]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯ ಬೆಂಬ​ಲ​ದೊಂದಿಗೆ ತಂಡ ಆಡುವ ಪ್ರತಿ ಸರ​ಣಿ​ಯ​ಲ್ಲೂ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜಿ​ಸುವ ಇಂಗಿತವನ್ನು ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ವ್ಯಕ್ತ​ಪ​ಡಿ​ಸಿದ್ದಾರೆ. 

ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

ಬಾಂಗ್ಲಾ​ದೇಶ ವಿರುದ್ಧ ಇತ್ತೀ​ಚೆ​ಗಷ್ಟೇ ಭಾರತ ತನ್ನ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ​ವನ್ನು ಆಡಿತ್ತು. ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆ​ದಿದ್ದ ಪಂದ್ಯ ಅಭೂತಪೂರ್ವ ಯಶಸ್ಸು ಗಳಿ​ಸಿತ್ತು. ‘ಹ​ಗ​ಲು-ರಾತ್ರಿ ಪಂದ್ಯಕ್ಕೆ ಸಿಕ್ಕ ಪ್ರತಿ​ಕ್ರಿಯೆ ಗಮ​ನಿ​ಸಿದ ಬಳಿಕ ಟೀಂ ಇಂಡಿಯಾ ಆಡು​ವ ಪ್ರತಿ ಸರ​ಣಿ​ಯಲ್ಲೂ ಪಿಂಕ್‌ ಬಾಲ್‌ ಟೆಸ್ಟ್‌ ಇರ​ಬೇಕು. ಪ್ರತಿ ಪಂದ್ಯ​ವನ್ನು ಹಗ​ಲು​-ರಾತ್ರಿ ಮಾದ​ರಿ​ಯಲ್ಲಿ ನಡೆ​ಸು​ವುದು ಕಷ್ಟ. ಆದರೆ ಸರ​ಣಿ​ಯಲ್ಲಿ ಒಂದು ಪಂದ್ಯವನ್ನು ಹಗ​ಲು​-ರಾತ್ರಿ ಮಾದ​ರಿ​ಯಲ್ಲಿ ಆಯೋ​ಜಿ​ಸ​ಬೇ​ಕಿದೆ. ಟೆಸ್ಟ್‌ ಕ್ರಿಕೆಟ್‌ ಜನ​ಪ್ರಿ​ಯ​ಗೊ​ಳಿ​ಸಲು ಅಂತಹ ಪ್ರಯೋ​ಗಗಳ ಅಗ​ತ್ಯ​ವಿದೆ’ ಎಂದು ಗಂಗೂಲಿ ಅಭಿಪ್ರಾಯಿ​ಸಿ​ದ್ದಾರೆ.

ನನಗೇನಾದರೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಂದಿದ್ದರೆ..? ಹೃದಯಗೆದ್ದ ವಿರಾಟ್ ಮಾತು

ಈಡನ್‌ ಗಾರ್ಡನ್ಸ್‌ನಲ್ಲಿ ಪಿಂಕ್‌ ಬಾಲ್‌ ಪಂದ್ಯ ಆಯೋ​ಜಿ​ಸಿದ ಅನು​ಭ​ವವನ್ನು ಭಾರ​ತದ ಇತರ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳೊಂದಿಗೆ ಹಂಚಿ​ಕೊ​ಳ್ಳು​ವು​ದಾಗಿ ಗಂಗೂಲಿ ಹೇಳಿ​ದ್ದಾರೆ. ‘ಎಲ್ಲಾ ಕ್ರಿಕೆಟ್‌ ಸಂಸ್ಥೆ ಅಧಿ​ಕಾ​ರಿ​ಗ​ಳೊಂದಿಗೆ ನಾನು ಮಾತ​ನಾಡಿ, ಅನು​ಭವ ತಿಳಿ​ಸು​ತ್ತೇನೆ. ಯಾರಿಗೂ ಸಹ ಕೇವಲ 5000 ಪ್ರೇಕ್ಷ​ಕರ ಎದುರು ಟೆಸ್ಟ್‌ ಕ್ರಿಕೆಟ್‌ ಆಡು​ವುದು ಇಷ್ಟವಿಲ್ಲ’ ಎಂದು ಗಂಗೂಲಿ ಹೇಳಿ​ದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!