ರಣಜಿ ಟೂರ್ನಿಗೆ ಸಜ್ಜಾಗ್ತಿದೆ ಕರ್ನಾಟಕ

By Web DeskFirst Published Dec 4, 2019, 1:15 PM IST
Highlights

ಈಗಾಗಲೇ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿ ಬೀಗುತ್ತಿರುವ ಕರ್ನಾಟಕ ತಂಡ ಇದೀಗ, ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 30 ಆಟಗಾರರನ್ನೊಳಗೊಂಡ ಸಂಭಾವ್ಯ ತಂಡವನ್ನು ಕೆಎಸ್‌ಸಿಎ ಪ್ರಕಟಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಬೆಂಗಳೂರು[ಡಿ.04]: ಡಿ. 9ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಗಾಗಿ ಕರ್ನಾಟಕದ 30 ಆಟಗಾರರ ಸಂಭಾವ್ಯ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ ಪ್ರಕಟಿಸಿದೆ. ಅಂಡರ್‌ 19 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದ ಶುಭಾಂಗ್‌ ಹೆಗ್ಡೆ ಹಾಗೂ ವಿದ್ಯಾಧರ್‌ ಪಾಟೀಲ್‌ಗೆ 30 ಸದ​ಸ್ಯರ ಪಟ್ಟಿ​ಯಲ್ಲಿ ಸ್ಥಾನ ಸಿಕ್ಕಿದೆ. 

ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ಶುಭಾಂಗ್‌ ಕಳೆದ ಋುತು​ವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ​ದ್ದರು. ವಡೋ​ದರಾದಲ್ಲಿ ಬರೋ​ಡಾ ವಿರುದ್ಧ ನಡೆದಿದ್ದ ರಣಜಿ ಪಂದ್ಯ​ದಲ್ಲಿ ಕರ್ನಾ​ಟಕ ಪರ ಆಡಿ, 4 ವಿಕೆಟ್‌ ಕಬ​ಳಿ​ಸಿ​ದ್ದರು. ವಿದ್ಯಾ​ಧರ್‌ ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿಲ್ಲ. ಉಳಿ​ದಂತೆ ಕೆ.ಎಲ್‌.ರಾ​ಹುಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌ ಸೇರಿ​ದಂತೆ ಈ ಋುತು​ವಿ​ನಲ್ಲಿ ವಿಜಯ್‌ ಹಜಾರೆ, ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಆಡಿದ ಬಹು​ತೇಕ ಆಟ​ಗಾ​ರರು ಸ್ಥಾನ ಪಡೆ​ದಿ​ದ್ದಾರೆ. ವಿಜಯ್‌ ಹಜಾರೆ ಏಕ​ದಿನ ಹಾಗೂ ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿದ ಕರ್ನಾ​ಟಕ, ರಣಜಿ ಟ್ರೋಫಿ ಮೇಲೂ ಕಣ್ಣಿ​ಟ್ಟಿದೆ. ‘ಬಿ’ ಗುಂಪಿ​ನ​ಲ್ಲಿ​ರುವ ಕರ್ನಾ​ಟಕ, ಡಿ.9ರಿಂದ ಆರಂಭ​ಗೊ​ಳ್ಳ​ಲಿ​ರುವ ಮೊದಲ ಪಂದ್ಯ​ದಲ್ಲಿ ತಮಿಳುನಾಡು ವಿರುದ್ಧ ಸೆಣ​ಸ​ಲಿದೆ.

30 ಸದಸ್ಯರ ಸಂಭಾವ್ಯರ ಪಟ್ಟಿ: 

Karnataka probables for the Ranji Trophy Season 2019-20. Squad for the first game will be announced officially shortly. pic.twitter.com/1j0MgS3M4u

— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka)

ಮಯಾಂಕ್‌, ದೇವದತ್‌, ರಾಹುಲ್‌, ಕರುಣ್‌, ನಿಶ್ಚಲ್‌, ಮನೀಶ್‌, ಪವನ್‌, ರೋಹನ್‌, ಅಭಿಷೇಕ್‌, ಲಿಯಾನ್‌, ಶರತ್‌ ಬಿ.ಆ​ರ್‌, ಲುವ್ನಿತ್‌, ಶರತ್‌ ಶ್ರೀನಿವಾಸ್‌, ಪ್ರಸಿದ್ಧ್, ಮಿಥುನ್‌, ರೋನಿತ್‌, ಡೇವಿಡ್‌, ಕೌಶಿಕ್‌, ವಿದ್ಯಾಧರ್‌, ಅಭಿಲಾಶ್‌, ಪ್ರತೀಕ್‌, ಶ್ರೇಯಸ್‌, ಗೌತಮ್‌, ಸುಚಿತ್‌, ಪ್ರವೀಣ್‌, ಶುಭಾಂಗ್‌, ಆದಿತ್ಯ, ಸಿದ್ಧಾರ್ಥ್, ಸಮರ್ಥ್, ದೇವಯ್ಯ.
 

 

click me!