ನವ​ದೆ​ಹ​ಲಿಗೆ ಬಂದಿ​ಳಿದ ಬಾಂಗ್ಲಾಕ್ರಿಕೆಟ್‌ ತಂಡಕ್ಕೆ ಧೂಳಿನ ಸ್ವಾಗತ!

Published : Oct 31, 2019, 11:21 AM IST
ನವ​ದೆ​ಹ​ಲಿಗೆ ಬಂದಿ​ಳಿದ ಬಾಂಗ್ಲಾಕ್ರಿಕೆಟ್‌ ತಂಡಕ್ಕೆ ಧೂಳಿನ ಸ್ವಾಗತ!

ಸಾರಾಂಶ

ಭಾರತ ವಿರುದ್ಧದ ಸರಣಿಗಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮಿಸಿದೆ. ನವದೆಹಲಿಗೆ ಬಂದಿಳಿದ ಬಾಂಗ್ಲಾ ತಂಡಕ್ಕೆ ದೆಹಲಿ ವಾಯು ಮಾಲಿನ್ಯದ ಬಿಸಿ ತಟ್ಟಿದೆ. ಹೀಗಾಗಿ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿದೆ.  

ನವದೆಹಲಿ(ಅ.31): ಭಾರತ ವಿರುದ್ಧ ಟಿ20 ಸರಣಿಗಾಗಿ 15 ಸದಸ್ಯರ ಬಾಂಗ್ಲಾದೇಶ ತಂಡ ಬುಧವಾರ ನವದೆಹಲಿಗೆ ಬಂದಿಳಿಯಿತು. ಭಾರತ ಹಾಗೂ ಬಾಂಗ್ಲಾದೇಶ ನಡು​ವಿನ 3 ಪಂದ್ಯ​ಗಳ ಟಿ20 ಸರಣಿ ನ.3ರಿಂದ ಆರಂಭ​ಗೊ​ಳ್ಳ​ಲಿದ್ದು, ಮೊದ​ಲ ಪಂದ್ಯ​ಕ್ಕೆ ದೆಹ​ಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

ದೆಹಲಿಯಲ್ಲಿ ಪಂದ್ಯ ಆಯೋಜಿಸುವುದು ಬಿಸಿಸಿಐಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಯು ಮಾಲಿನ್ಯದಿಂದಾಗಿ ನವದೆಹಲಿ ಸಂಪೂರ್ಣ ಧೂಳು ಮಿಶ್ರಿತ ಮಂಜಿನಿಂದ ಮುಸುಕಿ ಹೋಗಿದೆ. ಹಲವರಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ದೆಹಲಿ ಟಿ20 ಪಂದ್ಯವನ್ನು ಸ್ಥಳಾಂತರಗೊಳಿಸುವ ಕೂಗು ಕೇಳಿ ಬರುತ್ತಿದೆ. ಆದರೆ ಹಗಲು-ರಾತ್ರಿ ಪಂದ್ಯ ನಡೆಯುವುದರಿದಂ ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಎಂದು ಬಿಸಿಸಿಐ ನಂಬಿಕೊಂಡಿದೆ.

ಇದನ್ನೂ ಓದಿ: ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್‌ ಬಾಲ್‌!

ದೆಹಲಿ ಪಂದ್ಯದ ಬಳಿಕ 2ನೇ ಟಿ20 ಪಂದ್ಯ ನ.7ರಂದು ರಾಜ್‌ಕೋಟ್‌ ಹಾಗೂ 3ನೇ ಪಂದ್ಯ ನ.10ರಂದು ನಾಗ್ಪುರದಲ್ಲಿ ನಡೆ​ಯ​ಲಿದೆ. ಟಿ20 ಬಳಿಕ 2 ಪಂದ್ಯ​ಗಳ ಟೆಸ್ಟ್‌ ಸರಣಿ ನಡೆ​ಯ​ಲಿದೆ. ಗುರುವಾರ ಭಾರತ ತಂಡ ದೆಹಲಿ ತಲು​ಪ​ಲಿದೆ. ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಉಭಯ ತಂಡ​ಗಳು ಒಳಾಂಗಣ ಅಭ್ಯಾಸಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?