ಕ್ರಿಕೆಟ್ ಆರಂಭಿಸಲು ಹಲವು ವಿಘ್ನ; ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸಲು ಚಿಂತನೆ!

Published : May 21, 2020, 06:51 PM IST
ಕ್ರಿಕೆಟ್ ಆರಂಭಿಸಲು ಹಲವು ವಿಘ್ನ; ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸಲು ಚಿಂತನೆ!

ಸಾರಾಂಶ

ಕ್ರಿಕೆಟ್ ಪಂದ್ಯದಲ್ಲಿ ಬಾಲ್ ಶೈನ್ ಉಳಿಸಿಕೊಳ್ಳಲು ಆಟಗಾರರು ಎಂಜಲು ಬಳಲಿ ಜರ್ಸಿ ಮೇಲೆ ಉಜ್ಜುವುದನ್ನು ಗಮನಿಸಿರುತ್ತೇವೆ. ಈ ಮೂಲಕ ಚೆಂಡು ಹೊಳಪು ಕಳೆದುಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ಇದೀಗ ಎಂಜಲು ಬಳಕೆ ಐಸಿಸಿ ನಿಷೇಧಿಸಿದೆ. ಆದರೆ ಎಂಜಲು ಬಳಕೆ ಮಾಡಿ, ಕೊರೋನಾ ಬರದಂತೆ ತಡೆಯಲು ಆಸ್ಟ್ರೇಲಿಯಾ ಮುಂದಾಗಿದೆ. 

ಮೆಲ್ಬರ್ನ್‌(ಮೇ.21) : ಚೆಂಡಿನ ಹೊಳಪು ಕಡಿಮೆಯಾದಂತೆ ನೋಡಿಕೊಳ್ಳು ಪರಿಣಾಮಕಾರಿಯಾಗಿ ವೇಗದ ಬೌಲಿಂಗ್ ಹಾಗೂ ಸ್ವಿಂಗ್ ಬೌಲಿಂಗ್ ಮಾಡಲು ಆಟಗಾರರು ಎಂಜಲು ಬಳಸಿ ಜರ್ಸಿ ಮೇಲೆ ಉಜ್ಜುತ್ತಾರೆ. ಆದರೆ ಕೊರೋನಾ ವೈರಸ್ ಕಾರಣ ಎಂಜಲೂ ಮಾತ್ರವಲ್ಲ, ಸನಿಹ ನಿಲ್ಲುವುದೇ ಅಪಾಯ. ಇತ್ತ ಐಸಿಸಿ ಟೆಕ್ನಿಕಲ್ ಕಮಿಟಿ ಎಂಜಲು ಬಳಕೆ ಬೇಡ ಎಂದಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸವು ಯತ್ನದಲ್ಲಿದೆ.

ಖಾಲಿ ಕ್ರೀಡಾಂಗಣದಲ್ಲಿ ಅಭಿ​ಮಾ​ನಿ​ಗಳ ಕಟೌಟ್‌ ಹಾಕಿ ಫುಟ್ಬಾಲ್ ಆರಂಭ!..

ಕೊರೋನಾ ಸೋಂಕು ತಗು​ಲ​ದಂತೆ ತಡೆ​ಯಲು ಪಂದ್ಯದ ವೇಳೆ ಚೆಂಡಿನ ಮೇಲೆ ಸೋಂಕುನಿವಾ​ರಕ ಸಿಂಪ​ಡಿ​ಸಲು ಕ್ರಿಕೆಟ್‌ ಆಸ್ಪ್ರೇ​ಲಿಯಾ ಚಿಂತ​ನೆ ನಡೆ​ಸು​ತ್ತಿದೆ. ಪ್ರಯೋಗ ನಡೆ​ಸಲು ಶೀಘ್ರದಲ್ಲೇ ಐಸಿಸಿ ಬಳಿ ಅನು​ಮತಿ ಕೋರುವು​ದಾಗಿ ಕ್ರಿಕೆಟ್‌ ಆಸ್ಪ್ರೇ​ಲಿ​ಯಾದ ಕ್ರೀಡಾ ವಿಜ್ಞಾನ ವ್ಯವ​ಸ್ಥಾ​ಪಕ ಅಲೆಕ್ಸ್‌ ಕೌಂಟು​ರಿಸ್‌ ಹೇಳಿ​ದ್ದಾರೆ. 

ಅಕ್ಟೋ​ಬರ್‌-ನವೆಂಬರ್‌ನಲ್ಲಿ ಐಪಿ​ಎಲ್‌ ಟಿ20 ಟೂರ್ನಿ, BCCI ಕಸರತ್ತು ಆರಂಭ?.

‘ಚೆಂಡಿನ ಮೇಲೆ ಎಷ್ಟುಪ್ರಮಾಣದಲ್ಲಿ ವೈರಾಣು ದಟ್ಟಣೆ ಆಗ​ಲಿದೆ ಎನ್ನು​ವುದು ತಿಳಿ​ದಿಲ್ಲ. ಸೋಂಕು ನಿವಾ​ರಕ ಸಿಂಪ​ಡಿ​ಸು​ವು​ದು ಎಷ್ಟುಪರಿ​ಣಾ​ಮ​ಕಾರಿ ಎಂಬುದು ಗೊತ್ತಿಲ್ಲ. ಅದೇ ರೀತಿ ಆಟ​ಗಾ​ರರ ಆರೋ​ಗ್ಯಕ್ಕೆ ಹಾನಿ ಆಗು​ವು​ದಿ​ಲ್ಲವೇ ಎನ್ನು​ವು​ದನ್ನು ಸಹ ತಿಳಿ​ದು​ಕೊ​ಳ್ಳ​ಬೇ​ಕಿದೆ’ ಎಂದು ಅಲೆಕ್ಸ್‌, ಕ್ರಿಕೆಟ್‌ ಆಸ್ಪ್ರೇ​ಲಿ​ಯಾದ ವೆಬ್‌ಸೈಟ್‌ಗೆ ತಿಳಿ​ಸಿ​ದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿವೃತ್ತಿ ನಂತರ ಕೊಹ್ಲಿ, ರೋಹಿತ್ ಏನ್ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಅಶ್ವಿನ್
ind vs sl 1st test : ಸರ್ಪರಾಜ್‌ಗೆ ಇಲ್ಲ ಸ್ಥಾನ, ಮೂವರು ಕನ್ನಡಿಗರಿಗೆ ಪ್ಲೇಯಿಂಗ್-11ನಲ್ಲಿ ಸ್ಥಾನ ಕೊಟ್ಟ ಚೋಪ್ರಾ