
ಮೆಲ್ಬರ್ನ್(ಮೇ.21) : ಚೆಂಡಿನ ಹೊಳಪು ಕಡಿಮೆಯಾದಂತೆ ನೋಡಿಕೊಳ್ಳು ಪರಿಣಾಮಕಾರಿಯಾಗಿ ವೇಗದ ಬೌಲಿಂಗ್ ಹಾಗೂ ಸ್ವಿಂಗ್ ಬೌಲಿಂಗ್ ಮಾಡಲು ಆಟಗಾರರು ಎಂಜಲು ಬಳಸಿ ಜರ್ಸಿ ಮೇಲೆ ಉಜ್ಜುತ್ತಾರೆ. ಆದರೆ ಕೊರೋನಾ ವೈರಸ್ ಕಾರಣ ಎಂಜಲೂ ಮಾತ್ರವಲ್ಲ, ಸನಿಹ ನಿಲ್ಲುವುದೇ ಅಪಾಯ. ಇತ್ತ ಐಸಿಸಿ ಟೆಕ್ನಿಕಲ್ ಕಮಿಟಿ ಎಂಜಲು ಬಳಕೆ ಬೇಡ ಎಂದಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸವು ಯತ್ನದಲ್ಲಿದೆ.
ಖಾಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಟೌಟ್ ಹಾಕಿ ಫುಟ್ಬಾಲ್ ಆರಂಭ!..
ಕೊರೋನಾ ಸೋಂಕು ತಗುಲದಂತೆ ತಡೆಯಲು ಪಂದ್ಯದ ವೇಳೆ ಚೆಂಡಿನ ಮೇಲೆ ಸೋಂಕುನಿವಾರಕ ಸಿಂಪಡಿಸಲು ಕ್ರಿಕೆಟ್ ಆಸ್ಪ್ರೇಲಿಯಾ ಚಿಂತನೆ ನಡೆಸುತ್ತಿದೆ. ಪ್ರಯೋಗ ನಡೆಸಲು ಶೀಘ್ರದಲ್ಲೇ ಐಸಿಸಿ ಬಳಿ ಅನುಮತಿ ಕೋರುವುದಾಗಿ ಕ್ರಿಕೆಟ್ ಆಸ್ಪ್ರೇಲಿಯಾದ ಕ್ರೀಡಾ ವಿಜ್ಞಾನ ವ್ಯವಸ್ಥಾಪಕ ಅಲೆಕ್ಸ್ ಕೌಂಟುರಿಸ್ ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್ನಲ್ಲಿ ಐಪಿಎಲ್ ಟಿ20 ಟೂರ್ನಿ, BCCI ಕಸರತ್ತು ಆರಂಭ?.
‘ಚೆಂಡಿನ ಮೇಲೆ ಎಷ್ಟುಪ್ರಮಾಣದಲ್ಲಿ ವೈರಾಣು ದಟ್ಟಣೆ ಆಗಲಿದೆ ಎನ್ನುವುದು ತಿಳಿದಿಲ್ಲ. ಸೋಂಕು ನಿವಾರಕ ಸಿಂಪಡಿಸುವುದು ಎಷ್ಟುಪರಿಣಾಮಕಾರಿ ಎಂಬುದು ಗೊತ್ತಿಲ್ಲ. ಅದೇ ರೀತಿ ಆಟಗಾರರ ಆರೋಗ್ಯಕ್ಕೆ ಹಾನಿ ಆಗುವುದಿಲ್ಲವೇ ಎನ್ನುವುದನ್ನು ಸಹ ತಿಳಿದುಕೊಳ್ಳಬೇಕಿದೆ’ ಎಂದು ಅಲೆಕ್ಸ್, ಕ್ರಿಕೆಟ್ ಆಸ್ಪ್ರೇಲಿಯಾದ ವೆಬ್ಸೈಟ್ಗೆ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.