ಅಕ್ಟೋ​ಬರ್‌-ನವೆಂಬರ್‌ನಲ್ಲಿ ಐಪಿ​ಎಲ್‌ ಟಿ20 ಟೂರ್ನಿ, BCCI ಕಸರತ್ತು ಆರಂಭ?

Suvarna News   | Asianet News
Published : May 21, 2020, 03:48 PM ISTUpdated : May 21, 2020, 04:13 PM IST
ಅಕ್ಟೋ​ಬರ್‌-ನವೆಂಬರ್‌ನಲ್ಲಿ ಐಪಿ​ಎಲ್‌ ಟಿ20 ಟೂರ್ನಿ, BCCI ಕಸರತ್ತು ಆರಂಭ?

ಸಾರಾಂಶ

ನಿಗದಿತ ವೇಳಾಪಟ್ಟಿ ಪ್ರಕಾರ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲಾಗಿದೆ. ಕೊರೋನಾ ವೈರಸ್ ಕಾರಣ ಟಿ20 ವಿಶ್ವಕಪ್ ಟೂರ್ನಿ ಅನುಮಾನವಾಗಿದೆ. ಆದರೆ ಇದೇ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.

ನವ​ದೆ​ಹ​ಲಿ(ಮೇ.21) : ಕೊರೋನಾ ವೈರಸ್  ಕಾರಣ ಕ್ರಿಕೆಟ್ ವೇಳಾಪಟ್ಟಿ ಇದೀಗ ಅತ್ಯಂತ ಕಠಿಣವಾಗಿದೆ. ಈಗಾಗಲೇ ಹಲವು ಟೂರ್ನಿಗಳು ರದ್ದಾಗಿದೆ. ಇದರೊಂದಿಗೆ ಮುಂಬರುವ ಟೂರ್ನಿಗಳು ಕೂಡ ರದ್ದಾಗುವು ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಆಯೋಜಿಸಿರುವ ಟಿ20 ವಿಶ್ವಕಪ್ ಟೂರ್ನಿಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಅನುಮಾನವಾಗಿದೆ. ಇದೇ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.

ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌?

ಈ ವರ್ಷ ಅಕ್ಟೋ​ಬರ್‌-ನವೆಂಬರ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ಯ​ಬೇ​ಕಿ​ರುವ ಐಸಿಸಿ ಟಿ20 ವಿಶ್ವ​ಕಪ್‌ ನಡೆ​ಯು​ವುದು ಅನು​ಮಾ​ನ, ಆ ಸಮ​ಯ​ವನ್ನು ಐಪಿ​ಎಲ್‌ ಟಿ20 ಟೂರ್ನಿಗೆ ಬಳ​ಸಿ​ಕೊಳ್ಳುವ ಯೋಜನೆ ಇದೆ ಎಂದು ಬಿಸಿ​ಸಿಐ ಅಪೆಕ್ಸ್‌ ಕೌನ್ಸಿಲ್‌ ಸದಸ್ಯ ಅನ್ಶು​ಮಾನ್‌ ಗಾಯ​ಕ್ವಾಡ್‌ ಹೇಳಿ​ದ್ದಾರೆ. ‘ವಿ​ಶ್ವ​ಕಪ್‌ ರದ್ದಾದರೆ ಇಲ್ಲವೇ ಮುಂದೂ​ಡ​ಲ್ಪ​ಟ್ಟರೆ ಆಗ ಐಪಿ​ಎಲ್‌ ಮಾತ್ರ ನಡೆ​ಯಲು ಸಾಧ್ಯ. ಆದರೆ ಭಾರ​ತ​ದಲ್ಲಿ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರ​ಬೇ​ಕು’ ಎಂದು ಗಾಯ​ಕ್ವಾಡ್‌ ಹೇಳಿ​ದ್ದಾರೆ.

ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ!

ಕನಿಷ್ಠ 10 ದೇಶದ ಆಟಗಾರರು ಟಿ20 ವಿಶ್ವಕಪ್ ಟೂರ್ನಿಗೆ ಲಭ್ಯವಾಗುವುದು ಕಷ್ಟ. ಹೀಗಾಗಿ ಐಪಿಎಲ್ ಟೂರ್ನಿ ಆಯೋಜನೆ ಸಾಧ್ಯ ಅನ್ನೋ ಸಣ್ಣ ಆಸೆಯೊಂದು ಬಿಸಿಸಿಐ ಮನದಲ್ಲಿ ಚಿಗುರೊಡೆದಿದೆ. ಆದರೆ ಐಪಿಎಲ್ ಟೂರ್ನಿಗೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಬೇಕಿದೆ. ಸದ್ಯದ ಪರಿಸ್ಥತಿ ನೋಡಿದರೆ ನಿಯಂತ್ರಣದ ಬದಲು ಹೆಚ್ಚಾಗುತ್ತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!