ಭಾರತ-ಪಾಕ್ ಏಷ್ಯಾಕಪ್ ಸೂಪರ್ 4 ಪಂದ್ಯ ರದ್ದು, ಮೀಸಲು ದಿನದಲ್ಲಿ ಪಂದ್ಯ ಪುನರ್ ಆರಂಭ!

Published : Sep 10, 2023, 08:57 PM ISTUpdated : Sep 10, 2023, 09:00 PM IST
ಭಾರತ-ಪಾಕ್ ಏಷ್ಯಾಕಪ್ ಸೂಪರ್ 4 ಪಂದ್ಯ ರದ್ದು, ಮೀಸಲು ದಿನದಲ್ಲಿ ಪಂದ್ಯ ಪುನರ್ ಆರಂಭ!

ಸಾರಾಂಶ

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಎರಡನೇ ಬಾರಿಗೆ ರದ್ದಾಗಿದೆ.  ಸೂಪರ್ 4 ಪಂದ್ಯದಲ್ಲಿ 2ನೇ ಬಾರಿಗೆ ಮುಖಾಮುಖಿಯಲ್ಲೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಇಂದು ಪಂದ್ಯ ರದ್ದು ಮಾಡಲಾಗಿದ್ದು, ಮೀಸಲು ದಿನವಾದ ನಾಳೆ ಪಂದ್ಯ ಪುನರ್ ಆರಂಭಗೊಳ್ಳಲಿದೆ.

ಕೊಲೊಂಬೊ(ಸೆ.10) ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಂಟಕ ಎದುರಾಗಿದೆ. ಲೀಗ್ ಹಂತದಲ್ಲಿ ಪಂದ್ಯ ಮಳೆಯಿಂದ ಸಂಪೂರ್ಣ ರದ್ದಾಗಿತ್ತು. ಇದೀಗ ಸೂಪರ್ 4 ಹಂತದ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಎರಡನೇ ಬಾರಿಗೆ ಇಂಡೋ-ಪಾಕ್ ಪಂದ್ಯ ಮಳೆಯಿಂದ ರದ್ದಾಗಿದೆ.  ಆದರೆ ಈ ಬಾರಿ ಅಭಿಮಾನಿಗಳು ನಿರಾಸೆ ಪಡಬೇಕಿಲ್ಲ. ಮೀಸಲು ದಿನವಾದ ನಾಳೆ(ಸೆ.12) ಪಂದ್ಯ ಪುನರ್ ಆರಂಭಗೊಳ್ಳಲಿದೆ. ಯಾವುದೇ ಓವರ್ ಕಡಿತ ಇಲ್ಲ. ಟೀಂ ಇಂಡಿಯಾ 24.1 ಓವರ್ ಇಂದು ಆಡಿದೆ. ಈ ಮೂಲಕ 2 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿದೆ. ನಾಳೆ 24.1 ಓವರ್‌ನಿಂದಲೇ ಪಂದ್ಯ ಪುನರ್ ಆರಂಭಗೊಳ್ಳಲಿದೆ.

ಸೆಪ್ಟೆಂಬರ್ 12ರಂದು ಭಾರತ ಪಾಕಿಸ್ತಾನ ಸೂಪರ್ ಪಂದ್ಯ ಪುನರ್ ಆರಂಭಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ನಾಳೆಯೂ ಮಳೆಗೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಸಂಕಷ್ಟ ಎದುರಾಗಲಿದೆ.  ಪಲ್ಲಕೆಲೆಯಲ್ಲಿ ಆಯೋಜಿಸಿದ್ದ ಭಾರತ ಹಾಗೂ ಪಾಕಿಸ್ತಾನ ಲೀಗ್ ಹಂತದ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಸೂಪರ್ 4 ಹಂತದ ಪಂದ್ಯಗಳನ್ನು ಪಲ್ಲಕೆಲೆಯಿಂದ ಕೊಲೊಂಬೊಗೆ ಸ್ಥಳಾಂತರಿಸಲಾಗಿತ್ತು.  ಇದೀಗ ಕೊಲೊಂಬೊದಲ್ಲೂ ಮಳೆ ಅಡ್ಡಿಯಾಗಿದೆ. 

"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಇಂದು ಪಂದ್ಯ ಆರಂಭಗೊಂಡಾಗ ಪಾಕಿಸ್ತಾನ ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಳೆ ಮುನ್ಸೂಚನೆ ಇದ್ದ ಕಾರಣ ಟೀಂ ಇಂಡಿಯಾ ಕೂಡ ದಿಟ್ಟ ಆರಂಭಕ್ಕೆ ಸಜ್ಜಾಗಿತ್ತು. ಇದರಂತೆ ನಾಯಕ ರೋಹಿತ್ ಶರ್ಮಾ  ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಟೀಂ ಇಂಡಿಯಾಗೆ ನೆರವಾಯಿತು. ರೋಹಿತ್ ಹಾಗೂ ಗಿಲ್ ಶತಕದ ಜೊತೆಯಾಟ ನೀಡಿದರು. ಆರಂಭಿಕರು ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 

ರೋಹಿತ್ ಹಾಗೂ ಶುಭಮನ್ ಗಿಲ್ ಬೌಂಡರಿ ಸಿಕ್ಸರ್ ಆಟಕ್ಕೆ ಪಾಕಿಸ್ತಾನ ತಂಡವನ್ನು ಬೆಚ್ಚಿ ಬೀಳಿಸಿತ್ತು.  ರೋಹಿತ್ ಶರ್ಮಾ 49 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 56 ರನ್ ಚಚ್ಚಿದರು.  ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ  ಗಿಲ್ ಪೆವಿಲಿಯನ್ ಸೇರಿದರು.  ಗಿಲ್ 52 ಎಸೆತದಲ್ಲಿ 10 ಬೌಂಡರಿ ಮೂಲಕ 58 ರನ್ ಸಿಡಿಸಿ ಔಟಾದರು.

ನಾಲಿಗೆಯಿಂದ ವಿರಾಟ್ ಕೊಹ್ಲಿ ಚಿತ್ರ ಬರೆದ ಅಪ್ಪಟ ಅಭಿಮಾನಿ..! ವಿಡಿಯೋ ವೈರಲ್

ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಆಟ ಆರಂಭಗೊಂಡಿತು. ಅಷ್ಟರಲ್ಲೇ ಮಳೆ ವಕ್ಕರಿಸಿತು. 24.1 ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತ್ತು. ಆದರೆ ನಿರಂತರ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿ: ಇಂದು ಭಾರತ vs ಹಾಂಕಾಂಗ್‌ ಫೈಟ್; ಯಾವ ಚಾನೆಲ್‌ನಲ್ಲಿ ನೇರಪ್ರಸಾರ? ಎಷ್ಟು ಗಂಟೆಗೆ ಆರಂಭ?
ಸಚಿನ್ ಜತೆ ಬೆಸ್ಟ್ ಕ್ರಿಕೆಟರ್ ಪ್ರಶಸ್ತಿ, 16 ಎಸೆತಗಳಲ್ಲಿ ಫಿಫ್ಟಿ; ಬಿಸಿಸಿಐ ಸೆಲೆಕ್ಟರ್ಸ್‌ಗೆ ಲಂಚ ನೀಡಲು ಹೋಗಿ ಬ್ಯಾನ್ ಆದ ಪ್ರತಿಭಾನ್ವಿತ ಕ್ರಿಕೆಟಿಗ..!