Ashes 2023: ಆಸಿಸ್ ಸ್ಪಿನ್ನರ್ ಲಯನ್​ ಕೆಚ್ಚೆದೆಯ ಹೋರಾಟಕ್ಕೆ ಕ್ರಿಕೆಟ್ ಜಗತ್ತು ಫಿದಾ..!

By Suvarna NewsFirst Published Jul 3, 2023, 4:02 PM IST
Highlights

ಆ್ಯಷಸ್ ಟೆಸ್ಟ್ ಸರಣಿಯಲ್ಲಿ ನೋವಿನ ನಡುವೆಯೂ ಬ್ಯಾಟಿಂಗ್ ಮಾಡಲಿಳಿದ ನೇಥನ್ ಲಯನ್
ನೇಥನ್ ಲಯನ್ ಆಸ್ಟ್ರೇಲಿಯಾದ ಅನುಭವಿ ಆಫ್‌ ಸ್ಪಿನ್ನರ್
ಲಯನ್ ದೇಶ ಪ್ರೇಮಕ್ಕೆ ಕ್ರಿಕೆಟ್ ಜಗತ್ತು ಫಿದಾ

ಬೆಂಗಳೂರು(ಜು.03) ಕ್ರಿಕೆಟ್ ಜಗತ್ತಿನಲ್ಲಿ ಆ್ಯಷಸ್ ಟೆಸ್ಟ್ ಸರಣಿಗಿರೋ ಕ್ರೇಝೇ ಬೇರೆ. ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಈ ಸರಣಿ ಪ್ರತಿಷ್ಠೆಯ ಕಣ. ಗೆಲುವಿಗಾಗಿ ಎರಡೂ ತಂಡಗಳು ಆಟಗಾರರು ಜಿದ್ದಿಗೆ ಬಿದ್ದವರಂತೆ ಕಾದಾಡ್ತಾರೆ. ನೋವಿನಲ್ಲೂ ತಂಡದ ಗೆಲುವಿಗಾಗಿ ಹೋರಾಡ್ತಾರೆ. ಅದರಂತೆ ಈ ಬಾರಿಯ ಆ್ಯಷಸ್​ ಸರಣಿಯಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್​ ನೇಥನ್ ಲಯನ್ ಇಂಜುರಿ ನಡುವೆ ಫೀಲ್ಡ್​ಗಿಳಿದು ಬ್ಯಾಟಿಂಗ್ ಮಾಡಿದ್ದಾರೆ. ಲಯನ್​ರ ಈ ಕೆಚ್ಚೆದೆಯ ಆಟಕ್ಕೆ ಅಭಿಮಾನಿಗಳ ಫಿದಾ ಆಗಿದ್ದಾರೆ. 

ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ನಡೆದ ಸರಣಿಯ 2ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ ವೇಳೆ ಲೈಯನ್ ಇಂಜುರಿಗೊಳಗಾಗಿದ್ರು. ಇದರಿಂದ ಅರ್ಧದಲ್ಲೇ ಮೈದಾದಿಂದ ಹೊರನಡೆದಿದ್ರು. ನಡೆಯೋಕು ಸಾಧ್ಯವಾಗದೇ ಸ್ಟಿಕ್ ಸಹಾಯದಿಂದ ಹೆಜ್ಜೆ ಹಾಕಿದ್ರು.  ಇದರಿಂದ ಲಯನ್ ಮತ್ತೆ ಗ್ರೌಂಡ್​ಗಿಳಿಯಲ್ಲ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಆಸಿಸ್ 2ನೇ ಇನ್ನಿಂಗ್ಸ್ ವೇಳೆ 9ನೇ ವಿಕೆಟ್ ಬಿದ್ದಾಗ ಪಂದ್ಯ ವೀಕ್ಷಿಸುತ್ತಿದ್ದವರಿಗೆ ಶಾಕ್ ಕಾದಿತ್ತು. ಲಯನ್ ನೋವಿನಲ್ಲೂ ಹಿಡಿದು ಬಂದ್ರು. 

Gautam Gambhir was right, Aussie play for their nation, they are not individual obessed team ,Hats off to this guy👏 pic.twitter.com/TDgiqS3BYh

— 𝗚𝗔𝗨𝗥𝗔𝗩 𝗥𝗔𝗝 (@Gaurav59147864)

Ashes 2023: ಲಾರ್ಡ್ಸ್‌ ಟೆಸ್ಟ್‌ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಶಾಕ್‌; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್..!

ತೀವ್ರ ನೋವಿನಲ್ಲೂ ನೇಥನ್ ಲಯನ್​ ರನ್​ಗಾಗಿ ಓಡಿದ್ರು. ಸ್ಟುವರ್ಟ್ ಬ್ರಾಡ್ ಬೌಲಿಂಗ್​ನಲ್ಲಿ ಒಂದು ಫೋರ್ ಕೂಡ ಬಾರಿಸಿದ್ರು. ಲಯನ್ ಕಮಿಟ್ಮೆಂಟ್ ಕಂಡು ತಂಡದ ಆಟಗಾರರು, ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ರು. 13 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿ ಲಯನ್ ಔಟಾದ್ರು. ಲಯನ್ ಪೆವಿಲಿಯನ್​ಗೆ ತೆರಳುವಾಗ ಅಭಿಮಾನಿಗಳು ಸ್ಟ್ಯಾಂಡಿಂಗ್ ಓವೇಷನ್ ನೀಡಿದ್ರು. 

Gautam Gambhir was right, Aussie play for their nation, they are not individual obessed team ,Hats off to this guy👏 pic.twitter.com/TDgiqS3BYh

— 𝗚𝗔𝗨𝗥𝗔𝗩 𝗥𝗔𝗝 (@Gaurav59147864)

ನೋವಿನಲ್ಲೂ ದೇಶಕ್ಕಾಗಿ ಹೋರಾಡಿದ್ದ ಭಾರತದ ಕ್ರಿಕೆಟರ್ಸ್..!

ಯೆಸ್, ಭಾರತದ ಹಲವು ಕ್ರಿಕೆಟರ್ಸ್​  ಸಹ ತಂಡದ ಗೆಲುವಿಗಾಗಿ ನೋವಿನಲ್ಲೂ ಮೈದಾನದಲ್ಲಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್​ ಮಹಾಮಾರಿಯನ್ನು ಲೆಕ್ಕಿಸದೇ ಟೂರ್ನಿಯುದ್ಧಕ್ಕೂ  ಆಡಿದ್ರು. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ರು. ಆ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು. 

BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!

ಇನ್ನು ಅನಿಲ್​ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರೂ, ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ್ರು. ಇದೇ ವರ್ಷ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೈ ಬೆರಳಿನ ಗಾಯದ ನಡುವೆಯು ಬ್ಯಾಟ್ ಬೀಸಿದ್ರು. ಅದೇನೆ ಇರಲಿ, ಈ ಎಲ್ಲಾ ಕ್ರಿಕೆಟರ್​ಗಳ ಬದ್ಧತೆಗೆ ಸಲಾಂ ಹೇಳಲೇಬೇಕು

click me!