ದಳಪತಿ ವಿಜಯ್ 'ಥಲೈವಾ' ಟ್ಯಾಗ್‌ಲೈನ್ ಹಿಂದೆ ಇತ್ತಾ ದೊಡ್ಡ ಸ್ಕೆಚ್? ಆ 'ಟೈಮ್ ಟು ಲೀಡ್' ಟ್ಯಾಗ್‌ಲೈನ್ ಸೇರಿಸಿದ್ದು ಯಾರು ?

Published : Mar 07, 2026, 03:42 PM IST
Thalapathy Vijay

ಸಾರಾಂಶ

"ಥಲೈವಾ ಒಂದು ರಾಜಕೀಯ ಸಿನಿಮಾ ಆಗಿರಲಿಲ್ಲ. ಅದು ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸಮುದಾಯಕ್ಕಾಗಿ ಹೇಗೆ ನಾಯಕನಾಗಿ ಬೆಳೆಯುತ್ತಾನೆ ಎಂಬ ಕಥೆಯಾಗಿತ್ತು. ಸತ್ಯರಾಜ್ ಅವರ ಪಾತ್ರ ಮಾಡುವ ಕೆಲಸವನ್ನು ಮುಂದೆ ಅವರ ಮಗ (ವಿಜಯ್) ಹೇಗೆ ಮುಂದುವರಿಸುತ್ತಾನೆ ಎಂಬುದೇ ಸಿನಿಮಾದ ಸಾರಾಂಶವಾಗಿತ್ತು. ಅದರೆ ಈಗ ಏನಾಯ್ತು?

ದಳಪತಿ ವಿಜಯ್ ನಟನೆಯ 'ಥಲೈವಾ' ಸಿನಿಮಾದ ಆ ವಿವಾದಾತ್ಮಕ ಟ್ಯಾಗ್‌ಲೈನ್ ಹಿಂದೆ ಇತ್ತಾ ದೊಡ್ಡ ಸ್ಕೆಚ್?

ತಮಿಳು ಚಿತ್ರರಂಗದ 'ದಳಪತಿ' ವಿಜಯ್ (Thalapathy Vijay) ಅವರ ಸಿನಿಮಾ ಅಂದ್ರೆ ಸಾಕು, ಅಲ್ಲಿ ಏನಾದರೂ ಒಂದು ದಾಖಲೆ ಅಥವಾ ಸಂಚಲನ ಇದ್ದೇ ಇರುತ್ತದೆ. ಆದರೆ 2013ರಲ್ಲಿ ತೆರೆಕಂಡ 'ಥಲೈವಾ' (Thalaivaa) ಸಿನಿಮಾ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ಆಗಿನ ಕಾಲಕ್ಕೆ ಈ ಸಿನಿಮಾ ತಮಿಳುನಾಡಿನಲ್ಲಿ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅದಕ್ಕೆ ಮುಖ್ಯ ಕಾರಣವಾಗಿದ್ದು ಸಿನಿಮಾದ ಶೀರ್ಷಿಕೆಯ ಕೆಳಗಿದ್ದ 'ಟೈಮ್ ಟು ಲೀಡ್' (Time To Lead) ಎಂಬ ಪುಟ್ಟ ಸಾಲು! ಈಗ ಸುಮಾರು 11 ವರ್ಷಗಳ ನಂತರ, ಆ ಟ್ಯಾಗ್‌ಲೈನ್ ಹಿಂದಿರುವ ಅಸಲಿ ರಹಸ್ಯವನ್ನು ನಿರ್ದೇಶಕ ಎ.ಎಲ್. ವಿಜಯ್ ಬಹಿರಂಗಪಡಿಸಿದ್ದಾರೆ.

ಯಾರು ಸೇರಿಸಿದ್ದು ಆ 'ಟೈಮ್ ಟು ಲೀಡ್' ಟ್ಯಾಗ್‌ಲೈನ್?

ನಿರ್ದೇಶಕ ಎ.ಎಲ್. ವಿಜಯ್ ಸದ್ಯ ತಮ್ಮ ಹೊಸ ಸಿನಿಮಾ 'ಕಾದಲ್ ರಿಸೆಟ್ ರಿಪೀಟ್' ಪ್ರಚಾರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ಥಲೈವಾ' ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ಸಿನಿಮಾದ ಟೈಟಲ್ ಕೆಳಗೆ 'Time To Lead' ಎಂದು ಸೇರಿಸಿದ್ದು ನಾನಲ್ಲ" ಎನ್ನುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ನಿರ್ದೇಶಕರ ಪ್ರಕಾರ, ಚಿತ್ರಕ್ಕೆ ಕೇವಲ 'ಥಲೈವಾ' ಎಂದು ಹೆಸರಿಡಲಾಗಿತ್ತು. ಆದರೆ ಚಿತ್ರದ ನಿರ್ಮಾಪಕರಾದ ಚಂದ್ರಪ್ರಕಾಶ್ ಜೈನ್ ಅವರು, ಈ ಟ್ಯಾಗ್‌ಲೈನ್ ಸಿನಿಮಾಗೆ ಒಂದು ತೂಕ ತರುತ್ತದೆ ಮತ್ತು ಪ್ರಚಾರಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸಿ ಅದನ್ನು ಸೇರಿಸಿದರಂತೆ. ಈ ವಿಷಯದಲ್ಲಿ ನಿರ್ದೇಶಕರ ಪಾತ್ರವೇ ಇರಲಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಆದರೆ ಅಂದು ಈ ಒಂದು ಸಾಲು ವಿಜಯ್ ಅವರನ್ನು ರಾಜಕೀಯಕ್ಕೆ ಎಳೆದು ತಂದಿತ್ತು ಮತ್ತು ಸಿನಿಮಾ ಬಿಡುಗಡೆಗೆ ಸಾಕಷ್ಟು ಅಡ್ಡಿಪಡಿಸಿತ್ತು.

'ಥಲೈವಾ' ರಾಜಕೀಯ ಸಿನಿಮಾವೇ ಅಲ್ಲ!

ಅಂದು ಈ ಸಿನಿಮಾ ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ನಾಂದಿ ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿಜಯ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಥಲೈವಾ ಒಂದು ರಾಜಕೀಯ ಸಿನಿಮಾ ಆಗಿರಲಿಲ್ಲ. ಅದು ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸಮುದಾಯಕ್ಕಾಗಿ ಹೇಗೆ ನಾಯಕನಾಗಿ ಬೆಳೆಯುತ್ತಾನೆ ಎಂಬ ಕಥೆಯಾಗಿತ್ತು. ಸತ್ಯರಾಜ್ ಅವರ ಪಾತ್ರ ಮಾಡುವ ಕೆಲಸವನ್ನು ಮುಂದೆ ಅವರ ಮಗ (ವಿಜಯ್) ಹೇಗೆ ಮುಂದುವರಿಸುತ್ತಾನೆ ಎಂಬುದೇ ಸಿನಿಮಾದ ಸಾರಾಂಶವಾಗಿತ್ತು. ಇದು ಬಾಂಧವ್ಯ ಮತ್ತು ಜವಾಬ್ದಾರಿಯ ಕುರಿತಾದ ಚಿತ್ರವಾಗಿತ್ತೇ ಹೊರತು ರಾಜಕೀಯ ಹೇಳಿಕೆಯಾಗಿರಲಿಲ್ಲ" ಎಂದು ಅವರು ವಿವರಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಹೇಗಿತ್ತು ಕಲೆಕ್ಷನ್?

ಅಮಲಾ ಪೌಲ್ ನಾಯಕಿಯಾಗಿ ನಟಿಸಿದ್ದ ಈ ಚಿತ್ರದಲ್ಲಿ ಸತ್ಯರಾಜ್, ಸಂತಾನಂ, ನಾಸರ್ ಮತ್ತು ಪೊನ್ವಣ್ಣನ್ ಪ್ರಮುಖ ಪಾತ್ರಗಳಲ್ಲಿದ್ದರು. ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿತ್ತು. ಅಂದು ಸಾಕಷ್ಟು ವಿರೋಧ ಮತ್ತು ವಿಳಂಬದ ನಂತರ ತೆರೆಕಂಡ 'ಥಲೈವಾ', ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ವಿವಾದಗಳ ನಡುವೆಯೂ 80 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು.

ಸದ್ಯ ಎ.ಎಲ್. ವಿಜಯ್ ಅವರು ಹ್ಯಾರಿಸ್ ಜಯರಾಜ್ ಸಂಗೀತವಿರುವ ತಮ್ಮ ಹೊಸ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ದಶಕಗಳ ಹಿಂದಿನ ಈ ಸತ್ಯ ಈಗ ಅಭಿಮಾನಿಗಳ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊಸ ಲುಕ್​ನಲ್ಲಿ ಪತ್ನಿ ಜೊತೆ ಮುಂಬೈ ಸುತ್ತಿದ ಯಶ್​: ಕಾರು ಇಳಿಯುತ್ತಿದ್ದಂತೆಯೇ ಫ್ಯಾನ್ಸ್​ ಗದ್ದಲ ನೋಡಿ!
ತೆಲುಗುನಾಡಿನ ಸೊಸೆ ಆದ್ಮೇಲೆ ರಶ್ಮಿಕಾಗೆ ಫಿದಾ ಆದ ಕನ್ನಡಿಗರು; ಕಾರಣ ಗೊತ್ತಾದ್ರೆ 'ಹೀಗೂ ಆಗೋಯ್ತಾ' ಅನ್ನೋದು ಪಕ್ಕಾ!