ರಜನಿ ಪುತ್ರಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ನೆರವು, ನಟ ಅಜಿತ್‌ನಿಂದ 25 ಲಕ್ಷ

By Suvarna NewsFirst Published May 14, 2021, 5:36 PM IST
Highlights
  • ರಜನಿ ಮಗಳಿಂದ ಕೊರೋನಾ ಹೋರಾಟಕ್ಕೆ ಬೆಂಬಲ
  • ಸಿಎಂ ಪರಿಹಾರ ನಿಧಿಗೆ 1 ಕೋಟಿ ದೇಣಿಗೆ, ನಟ ಅಜಿತ್ 25 ಲಕ್ಷ ದೇಣಿಗೆ

ತಾನು ಮತ್ತು ತನ್ನ ಕುಟುಂಬ ಸದಸ್ಯರು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದೇವೆ ಎಂದು ತಲೈವಾ ಪುತ್ರಿ ಸೌಂದರ್ಯ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ತನ್ನ ಟ್ವೀಟ್‌ನಲ್ಲಿ ತನ್ನ ಮಾವನ ಕೊಡುಗೆ ಅವರ ಫಾರ್ಮಾ ಕಂಪನಿಯಾದ ಅಪೆಕ್ಸ್ ಲ್ಯಾಬೊರೇಟರೀಸ್‌ನಿಂದ ಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಸೌಂದರ್ಯ, ಅವರ ಪತಿ ವಿಶಾಗನ್, ಅತ್ತೆ ವನಂಗಮುಡಿ ಮತ್ತು ಅವರ ಅತ್ತಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಇಂದು ಮೇ 14 ರಂದು ಭೇಟಿ ಮಾಡಿದ್ದಾರೆ.

ಸೂರ್ಯ, ಕಾರ್ತಿಯಿಂದ ಸಿಎಂ ನಿಧಿಗೆ 1 ಕೋಟಿ ರೂ. ನೆರವು

ಇದನ್ನು ಪ್ರಕಟಿಸಿದ ಸೌಂದರ್ಯ, ನನ್ನ ಮಾವ ಶ್ರೀ ಎಸ್.ಎಸ್.ವನಂಗಮುಡಿ, ಪತಿ ವಿಶಾಗನ್, ಅವರ ಸಹೋದರಿ ಮತ್ತು ನಾನು ಇಂದು ಬೆಳಗ್ಗೆ ಗೌರವಾನ್ವಿತ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಿಎಂ ನಿಧಿಗೆ 1 ಕೋಟಿ ಕೊಡುಗೆಯನ್ನು ಹಸ್ತಾಂತರಿಸಿದ್ದೇವೆ ಎಂದಿದ್ದಾರೆ.

My father-in-law Mr. S.S.Vanangamudi, husband Vishagan, his sister and I visited the honorable Chief minister sir this morning to hand over our contribution of 1cr for the chief ministers from our pharma company Apex laboratories, Makers of pic.twitter.com/jXDEIXaM3V

— soundarya rajnikanth (@soundaryaarajni)

ತಲ ಅಜಿತ್ ಅವರೂ 25 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಇತ್ತೀಚೆಗಷ್ಟೇ ಕಾಲಿವುಡ್ ನಟರಾದ ಸೂರ್ಯ, ಕಾರ್ತಿ 2 ಕೋಟಿ ರೂಪಾಯಿ ನೆರವು ನೀಡಿದ್ದರು. ಈ ಹಿಂದೆ ತಮಿಳುನಾಡು ಸಿಎಂ ಕೊರೋನಾ ಹೋರಾಟಕ್ಕೆ ಜನ ನೆರವಾಗಬೇಕೆಂದು ಕೇಳಿಕೊಂಡಿದ್ದರು.

click me!