
ಮುಂಬೈ(ಆ.11): ನಟಿ ಶಿಲ್ಪಾ ಶೆಟ್ಟಿಪತಿ ರಾಜ್ಕುಂದ್ರಾ ನೀಲಿ ಚಿತ್ರ ಪ್ರಕರಣದಲ್ಲಿ ಬಂಧನವಾದ ನಂತರ ಶಿಲ್ಪಾ ಶೆಟ್ಟಿಮುಖ್ಯವಾಹಿನಿ ಇಂದ ದೂರ ಆಗಿದ್ದರು. ಆಗಸ್ಟ್ 15ರಂದು ಕೋವಿಡ್ ಸಂತ್ರಸ್ತರಿಗಾಗಿ ಬಾಲಿವುಡ್ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೋವಿಡ್ನಿಂದಾಗಿ ತೊಂದರೆಗೊಳಗಾದವರಿಗೆ ವೆಂಟಿಲೇಟರ್, ಆಕ್ಸಿಜಿನ್ ಸಿಲಿಂಡರ್, ಔಷಧ, ಐಸಿಯು ಒದಗಿಸಲು ನಿಧಿ ಸಂಗ್ರಹಣೆಗೆಗಾಗಿ ಈ ವರ್ಚುವಲ್ ಕಾರ್ಯಕ್ರಮವನ್ನು ರಾಜ್ಕುಮಾರ್ ರಾವ್ ಆಯೋಜಿಸುತ್ತಿದ್ದಾರೆ. ಬಾಲಿವುಡ್ ತಾರೆಗಳ ಜೊತೆಗೆ ನಟಿ ಶಿಲ್ಪಾ ಶೆಟ್ಟಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪತಿಯ ಬಂಧನದ ನಂತರ ಅವರು ಸಾರ್ವಜನಿಕ ಬದುಕಿನಿಂದ ದೂರವಾಗಿದ್ದರು. ಅವರು ಜಡ್ಜ್ ಆಗಿದ್ದ ಸೂಪರ್ ಡಾನ್ಸರ್4 ಕಾರ್ಯಕ್ರಮವನ್ನು ಸಹ ಅರ್ಧಕ್ಕೆ ಬಿಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.