
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೋಡಿ ಬಾಲಿವುಡ್ನ ಜನಪ್ರಿಯ ಜೋಡಿಗಳಲ್ಲಿ ಒಂದು. ದೀರ್ಘಕಾಲದ ಪ್ರೀತಿಯ ನಂತರ ಅವರು ಅಕ್ಟೋಬರ್ 25, 1991 ರಂದು ವಿವಾಹವಾದರು. ಗೌರಿ ಹಿಂದೂ ಮತ್ತು ಶಾರುಖ್ ಮುಸ್ಲಿಂ ಆಗಿರುವುದರಿಂದ ಗೌರಿ ತಮ್ಮ ಪೋಷಕರ ವಿರೋಧದ ನಡುವೆಯೂ ಶಾರುಖ್ ಅವರನ್ನು ವಿವಾಹವಾದರು. ಆದಾಗ್ಯೂ, ಮದುವೆಯಲ್ಲಿ ಗೌರಿಯ ಕುಟುಂಬಸ್ಥರು ಭಾಗವಹಿಸಿದ್ದರು. ಆ ಸಮಯದಲ್ಲಿ ಗೌರಿಯ ತಂದೆ ಶಾರುಖ್ ಖಾನ್ಗೆ ಕಠಾರಿ ಅಥವಾ ಕತ್ತಿಯನ್ನು ನೀಡಿದ್ದರು, ಇದನ್ನು ಸಾಮಾನ್ಯವಾಗಿ ಪಂಜಾಬಿ ಮದುವೆಗಳಲ್ಲಿ ವರನಿಗೆ ನೀಡಲಾಗುತ್ತದೆ.
ಐಶ್ವರ್ಯಾ ರೈ ಅನಾರೋಗ್ಯದ ವದಂತಿಗೆ ಕೆಂಡಾಮಂಡಲವಾದ ಬಿಗ್ಬಿ, ಸೊಸೆಯ ಹೆರಿಗೆಯನ್ನು ಶ್ಲಾಘಿಸಿದ್ದ ಅಮಿತಾಭ್
ಶಾರುಖ್ ಖಾನ್ ಗೌರಿಗಾಗಿ ಹಲ್ಲೆ ನಡೆಸಿದ್ದರು: ಒಂದು ಸಂದರ್ಶನದಲ್ಲಿ ಶಾರುಖ್ ಖಾನ್ ಅವರು ಗೌರಿಯ ತಂದೆ ನೀಡಿದ ಕತ್ತಿಯನ್ನು ಹಿಡಿದು ಪತ್ರಕರ್ತರ ಮನೆಗೆ ಹೋಗಿದ್ದಾಗಿ ಬಹಿರಂಗಪಡಿಸಿದ್ದರು. ಏಕೆಂದರೆ 'ಕಭಿ ಹಾಂ ಕಭಿ ನಾ' ಚಿತ್ರೀಕರಣದ ಸಮಯದಲ್ಲಿ ಓರ್ವ ಪತ್ರಕರ್ತರು ಅವರ ಮತ್ತು ಸಹನಟಿಯ ನಡುವಿನ ಸಂಬಂಧದ ಬಗ್ಗೆ ವರದಿ ಮಾಡಿದ್ದರು. ಈ ವರದಿಯನ್ನು ಓದಿದ ನಂತರ ಗೌರಿ ತುಂಬಾ ಅಸಮಾಧಾನಗೊಂಡಿದ್ದರು. ನಟನನ್ನು ಮದುವೆಯಾಗಿ ತಪ್ಪು ಮಾಡಿದ್ದೇನಾ ಎಂದು ಗೌರಿ ಯೋಚಿಸಲು ಪ್ರಾರಂಭಿಸಿದ್ದರು. ಈ ವಿಷಯ ಶಾರುಖ್ಗೆ ತಿಳಿದಾಗ ಅವರು ಕತ್ತಿಯನ್ನು ಹಿಡಿದು ಪತ್ರಕರ್ತರ ಮನೆಗೆ ಹೋದರು. ಅವರ ಕಾಲಿಗೆ ಹಲ್ಲೆ ಮಾಡಿದರು. ಈ ಘಟನೆಯ ನಂತರ ಮರುದಿನ ಚಿತ್ರದ ಸೆಟ್ಗೆ ಪೊಲೀಸರು ಬಂದು ಶಾರುಖ್ರನ್ನು ಬಂಧಿಸಿದರು.
ಕೀರ್ತಿ ಸುರೇಶ್-ಆಂಟನಿ 15 ವರ್ಷದ ಪ್ರೇಮಕಥೆ ಆರಂಭ ಎಲ್ಲಿ? ನನಗಿಂತ 7 ವರ್ಷ ದೊಡ್ಡ, ನಾನು ಕಣ್ಣು ಹೊಡೆದೆ ಎಂದ ನಟಿ
ಶಾರುಖ್ ಖಾನ್ ಗೌರಿ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದರು: ಶಾರುಖ್ ಖಾನ್ ಮತ್ತು ಗೌರಿ ವಿವಾಹವಾದಾಗ, ಶಾರುಖ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಮದುವೆಯ ನಂತರ ಇಬ್ಬರೂ ದೆಹಲಿಯಿಂದ ಮುಂಬೈಗೆ ಸ್ಥಳಾಂತರಗೊಂಡರು. ಕೆಲವು ಸಂದರ್ಶನಗಳಲ್ಲಿ ಗೌರಿ ಅವರು ಶಾರುಖ್ ತಮ್ಮ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದೆ ಎಂದು ಹೇಳಿದ್ದರು. ಈ ವಿಷಯದ ಬಗ್ಗೆ ಇಬ್ಬರ ನಡುವೆ ಜಗಳವೂ ಆಗುತ್ತಿತ್ತು. ಈ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.