ಅಪ್ಪನಾಗಿರೋ ರಣವೀರ್ ಸಿಂಗ್​ ಕನ್ನಡ ಮಾತನಾಡಿದಾಗ... ವಿಡಿಯೋ ನೋಡಿ ಕನ್ನಡಿಗರು ಫುಲ್​ ಫಿದಾ

Published : Sep 10, 2024, 12:02 PM IST
ಅಪ್ಪನಾಗಿರೋ ರಣವೀರ್ ಸಿಂಗ್​ ಕನ್ನಡ ಮಾತನಾಡಿದಾಗ... ವಿಡಿಯೋ ನೋಡಿ ಕನ್ನಡಿಗರು ಫುಲ್​ ಫಿದಾ

ಸಾರಾಂಶ

ದಕ್ಷಿಣ ಭಾರತದ ಸಿನಿ ಅವಾರ್ಡ್​ ಫಂಕ್ಷನ್​ನಲ್ಲಿ ರಣವೀರ್​ ಸಿಂಗ್​ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಇದರ ವಿಡಿಯೋ ವೈರಲ್ ಆಗಿದೆ.  

ಸದ್ಯ ಬಾಲಿವುಡ್​ ಕ್ಯೂಟ್​ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರದ್ದೇ ಸುದ್ದಿ. ಮೊನ್ನೆಯಷ್ಟೇ ಈ ಜೋಡಿ ಅಪ್ಪ-ಅಮ್ಮ ಆಗಿದ್ದಾರೆ. ಹೆಣ್ಣುಮಗುವಿಗೆ ದೀಪಿಕಾ ಜನ್ಮ ಕೊಟ್ಟಿದ್ದಾರೆ. ಇದರ ನಡುವೆಯೇ ರಣವೀರ್​ ಸಿಂಗ್​ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಹಳೆಯ ವಿಡಿಯೋ ಇದಾಗಿದ್ದು, ಪುನಃ ಇದು ವೈರಲ್​ ಆಗಿದೆ. ರಣವೀರ್​ ಸಿಂಗ್​ ಅಪ್ಪ ಆದ ಬೆನ್ನಲ್ಲೇ ಇವರ ಹಳೆಯ ವಿಡಿಯೋಗಳೆಲ್ಲಾ ಮತ್ತೆ ಸೋಷಿಯಲ್​ ಮೀಡಿಯಾಗಳಲ್ಲಿ ಮೇಲಕ್ಕೆ ಬರುತ್ತಿದ್ದು, ಅವುಗಳಲ್ಲಿ ಇದು ಕೂಡ ಒಂದು.

ಈ ವಿಡಿಯೋದಲ್ಲಿ ಆ್ಯಂಕರ್​ ಅಕುಲ್​ ಬಾಲಾಜಿ ಅವರು ರಣವೀರ್​ ಸಿಂಗ್​ ಅವರಿಗೆ ಕನ್ನಡ ಹೇಳಿಕೊಡುವುದನ್ನು ನೋಡಬಹುದು. ನಾನು ಕನ್ನಡದಲ್ಲಿ ಹೇಳುತ್ತೇನೆ, ಅದನ್ನೇ ನೀವೂ ಹೇಳಿ ಎಂದು ಅಕುಲ್​ ಹೇಳಿದ್ದಾರೆ. ಮೊದಲಿಗೆ ಅಕುಲ್​ ಓ ನನ್ನ ದೀಪಿಕಾ ಎಂದಿದ್ದಾರೆ, ಅದನ್ನೇ ರಣವೀರ್​ ರಿಪೀಟ್​ ಮಾಡಿದ್ದಾರೆ. ನಂತರ ಓ ನನ್ನ ದೀಪಿಕಾ ಎಂದಿದ್ದಾರೆ. ಆದರೆ ಇದು ಯಾಕೋ ನೆಗೆಟಿವ್​ ರೀತಿ ರಣವೀರ್​ ಅವರಿಗೆ ಅನ್ನಿಸಿರಬೇಕು. ಇದನ್ನು ಹೇಳಲ್ಲ ಹೇಳಲ್ಲ ಎಂದು ಪಟ್ಟು ಹಿಡಿದರು. ನಂತರ ಅಕುಲ್​ ಇದರಲ್ಲಿ ಆ ರೀತಿ ಯಾವುದೂ ಇಲ್ಲ ಎಂದು ಸಮಾಧಾನಪಡಿಸಿದರು. ಅದಕ್ಕೆ ರಣವೀರ್​, ಬ್ರದರ್​ ನಾನು ಮನೆಗೆ ಹೋಗಬೇಕು ಗೊತ್ತಾಯ್ತಾ ಎಂದು ಹೇಳಿದರು. ನಂತರ ಅಕುಲ್​ ಅದರ ಅರ್ಥ ಹೇಳಿದಾಗ,  ರಣವೀರ್​ ಓ ನನ್ನ ದೀಪಿಕಾ ಎಂದು ಸ್ಪಷ್ಟವಾಗಿಯೇ ಕನ್ನಡದಲ್ಲಿ ನುಡಿದರು.

ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

ನಂತರ ದೀಪಿಕಾ, ಓ ನನ್ನ ದೀಪಿಕಾ, ನೀನೇ ನನ್ನ ಜೀವನದ ದೀಪಾ ಎಂದರು. ಇಷ್ಟು ಹೇಳುತ್ತಿದ್ದಂತೆಯೇ ಇದರ ಅರ್ಥವನ್ನು ರಣವೀರ್​ ಸರಿಯಾಗಿ ಗುರುತಿಸಿಬಿಟ್ಟರು, ಇದರ ಅರ್ಥವನ್ನು ಇಂಗ್ಲಿಷ್​ನಲ್ಲಿ ಸರಿಯಾಗಿ ಹೇಳಿದಾಗ, ಎಲ್ಲೆಡೆ ಚಪ್ಪಾಳೆಗಳ ಸುರಿಮಳೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದರೂ ಅದರಲ್ಲಿ ಸ್ಪಷ್ಟತೆ ಇರುವುದನ್ನು ಕಂಡ ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣಗಿಂತಲೂ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ ಎಂದು ಹಲವರು ಕಮೆಂಟ್​  ಮೂಲಕ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಯಶ್​, ಮಾಲಾಶ್ರಿ ಎಲ್ಲರೂ ರಣವೀರ್​ ಕನ್ನಡ ನೋಡಿ ಖುಷಿ ಪಟ್ಟರು. SIIMA ದಕ್ಷಿಣ ಭಾರತದ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಘಟನೆ ನಡೆದಿದೆ. 

ಅಂದಹಾಗೆ ದೀಪಿಕಾ ಪಡುಕೋಣೆಗೂ ಕರ್ನಾಟಕಕ್ಕೂ ನಂಟಿದೆ. ಇವರು ಹುಟ್ಟಿದ್ದು ಡೆನ್ಮಾರ್ಕ್​ ಆದರೂ, ದೀಪಿಕಾ ತಂದೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ ಪಡುಕೋಣೆ ಮಂಗಳೂರಿನವರು. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು ದೀಪಿಕಾ. 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ `ಐಶ್ವರ್ಯ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಅದೇ ವರ್ಷ ಶಾರುಖ್ ಖಾನ್ ಅಭಿನಯದ `ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆಮೇಲೆ ಬಾಲಿವುಡ್​ನಲ್ಲಿಯೇ ನೆಲೆಯೂರಿದ್ದು, ಕಳೆದ ವರ್ಷ ಒಂದರ ಮೇಲೊಂದು ಬ್ಲಾಕ್​ಬಸ್ಟರ್​ ಚಿತ್ರ ಕೊಟ್ಟರು. ದೀಪಿಕಾ   ತುಳು ಕೂಡ ಮಾತನಾಡಬಲ್ಲರು, ಏಕೆಂದರೆ ಅವರ ಮಾತೃಭಾಷೆ ತುಳು. 

ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?