ಉಪಾಸನಾ ಕೊನಿಡೆಲಾ ಯಾರು? ರಾಮ್ ಚರಣ್ ಪತ್ನಿ ಪ್ರತಿಷ್ಠಿತ ಆಸ್ಪತ್ರೆ ಮುಖ್ಯಸ್ಥೆ? ಪದೇ ಪದೇ ಟ್ರೋಲ್ ಮಾಡುವವರಿಗೆ ಉತ್ತರ ಕೊಟ್ಟ ಸಿರಿವಂತೆ....
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ರಾಮ್ ಚರಣ್ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಸಿರಿವಂತ ಕುಟುಂಬದಿಂದ ಬಂದ ಉಪಾಸನಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಅಗುತ್ತಾರೆ. ಫ್ಯಾಮಿಲಿ ಮತ್ತು ಕೆಲಸದ ಬಗ್ಗೆ ಉಪಾಸನಾ ಮಾತನಾಡಿದ್ದಾರೆ.
'ನಾನು ಡೈಮೆಂಡ್ ಸ್ಪೂನ್ನಲ್ಲಿ ತಿಂದುಕೊಂಡು ಬೆಳೆದವಳು ಎನ್ನುತ್ತಾರೆ ಆದರೆ ನಾನು ಬೆಳ್ಳಿ, ಚಿನ್ನ, ಡೈಮೆಂಡ್ ಮತ್ತು ಪ್ಲಾಟಿನಂ ಸ್ಪೂನ್ನಲ್ಲಿ ತಿನ್ನುವ ಅವಕಾಶಗಳಿತ್ತು ಆದರೆ ಅದರ ಅಗತ್ಯ ನನಗೆ ಇರಲಿಲ್ಲ. ಮನೆಯಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳಬಹುದಿತ್ತು ಆದರೆ ಈ ಜೀವನಕ್ಕೆ ಅರ್ಥ ಕೊಡಬೇಕು ಎಂದು ಕೆಲಸ ಶುರು ಮಾಡಿದೆ. ಇಷ್ಟು ಒಳ್ಳೆಯ ಹಿನ್ನಲೆ ಹೊಂದಿರುವ ವ್ಯಕ್ತಿ ನಾನಾಗಿ ನನ್ನ ಸುತ್ತಲಿರುವ ಜನರ ಜೀವನದಲ್ಲಿ ಬದಲಾವಣೆ ತರಲಿಲ್ಲ ಅಂದ್ರೆ ಎಷ್ಟು ವ್ಯರ್ಥ ಈ ಜೀವನ ಅನಿಸುತ್ತದೆ. ಒಂದು ಕುಟುಂಬದಿಂದ ಜನರ ಆರೋಗ್ಯದಲ್ಲಿ ಬದಲಾವಣೆ ತರಬಹುದು ಮತ್ತೊಂದು ಕುಟುಂಬದಿಂದ ಜನರಿಗೆ ಒಳ್ಳೆಯ ಸಂದೇಶ ಕಳುಹಿಸಬಹುದು. 5 ವರ್ಷದ ಹುಡುಗಿ ಇದ್ದಾಗಿನಿಂದಲೂ ನಾನು ಅಪೋಲೋ ಆಸ್ಪತ್ರೆಯಲ್ಲಿ ತಾತನ ಕೈ ಹಿಡಿದುಕೊಂಡು ನಡೆದಾಡಿರುವೆ. ಇದು ನನ್ನ ಜೀವನದ ಹಾದಿ ಎಂದು ಅಂದೇ ನಿರ್ಧಾರ ಮಾಡಿದೆ. ನಾನು ಮನುಷ್ಯೆ ಆಗಿರುವ ಕಾರಣ ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡೆ ಆದರೆ ನನ್ನ ಕೈ ಹಿಡಿದಿದ್ದು ನಾನು ಮೊದಲು ಯೋಚನೆ ಮಾಡಿದ ಹಾದಿ' ಎಂದು ಉಪಾಸನಾ ಜೋಶ್ ಟಾಕ್ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕ್ಯಾನ್ಸರ್ ಪೀಡಿತ ಅಭಿಮಾನಿಯನ್ನು ಭೇಟಿ ಮಾಡಿದ ರಾಮ್ ಚರಣ್; 9 ವರ್ಷದ ಹುಡುಗನ ಕೈಗಿಟ್ಟ ಸ್ಪೆಷಲ್ ಗಿಫ್ಟ್ ಏನು??
'ನನ್ನ ಪತಿ ರಾಮ್ ಚರಣ್ ಮತ್ತು ನಾನು ಒಟ್ಟಿಗೆ ಕೆಲಸ ಮತ್ತು ಜೀವನದ ಬಗ್ಗೆ ಪ್ಲ್ಯಾನ್ ಮಾಡುತ್ತೀವಿ. ರಾಮ್ನ ಮದುವೆ ಆದ ಮೇಲೆ ನಾನು ತುಂಬಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವೆ ಹೀಗಾಗಿ ನನ್ನ ಗುರಿಗಳ ಬಗ್ಗೆ ನನಗೆ ಕ್ಲಾರಿಟಿ ಇದೆ ಅದರ ಪ್ರಕಾರ ಮುಂದುವರೆಯುತ್ತಿರುವೆ. ನನ್ನ ಕೆಲಸವನ್ನು ರಾಮ್ ಶೆಡ್ಯೂಲ್ ಜೊತೆ ಮ್ಯಾಚ್ ಮಾಡಿಕೊಳ್ಳುವೆ ಇದರಿಂದ ನಮಗೆ ಒಟ್ಟಿಗೆ ಸಮಯ ಕಳೆಯುವುದಕ್ಕೆ ಅವಕಾಶ ಸಿಗುತ್ತದೆ ಎಂದು. ಚರಣ್ ಸದಾ ಈ ಒಂದು ಸಾಲನ್ನು ತುಂಬಾ ನಂಬುತ್ತಾರೆ 'You should grow in love not fall in love' ಎಂದು...ಅದೇ ಪ್ರೀತಿ ಮತ್ತು ಗೌರವದಲ್ಲಿ ನಮಗೆ ಸಮಯ ಸಿಗುತ್ತದೆ. ಸಂಬಂಧದಲ್ಲಿ ಒಳ್ಳೆಯ ಡಿಸಿಪ್ಲಿನ್ ಇದ್ದು ಅದನ್ನು ಆಗಾಗ ರಿವ್ಯೂ ಮಾಡಿದರೆ ಜೀವನದ ಪ್ರತಿಯೊಂದು ವಿಚಾರದಲ್ಲೂ ಬೆಳೆಯುವುದಕ್ಕೆ ಶುರು ಮಾಡುತ್ತೀವಿ' ಎಂದು ಉಪಾಸನಾ ಹೇಳಿದ್ದಾರೆ.
ಕೊನೆಗೂ ಕ್ಯಾಮೆರಾಗೆ ಬೇಬಿ ಬಂಪ್ ತೋರಿಸಿದ ಚಿರಂಜೀವಿ ಸೊಸೆ ಉಪಾಸನಾ; ನೆಟ್ಟಿಗರು ಫುಲ್ ಕನ್ಫ್ಯೂಸ್
'ಪಬ್ಲಿಕ್ನಲ್ಲಿ ನಾವು ಒಮ್ಮೆ ಗುರುತಿಸಿಕೊಂಡರೆ ಒಂದೊಳ್ಳೆ ಉದ್ದೇಶಕ್ಕೆ ನಾವು ಇದ್ದೀವಿ ಅಂದುಕೊಳ್ಳಬೇಕು. ನಾವು ಆಯ್ಕೆ ಮಾಡಿಕೊಂಡರುವ ಕಾರಣ ಜನರು ಏನೇ ಹೇಳಿದ್ದರೂ ಕೇಳಿಸಿಕೊಳ್ಳುವಷ್ಟು ಧೈರ್ಯ ಇರಬೇಕು. ಜನರು ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದಾಗ ಅದನ್ನು ಪಾಸಿಟಿವ್ ಆಗಿ ಸ್ವೀಕರಿಸುವೆ ಹಾಗೂ ಅದರಿಂದ ಒಳ್ಳೆಯದನ್ನು ಕಲಿಯುವ ಪ್ರಯತ್ನ ಮಾಡುವೆ. ನನ್ನ ಬಗ್ಗೆ ಕಾಮೆಂಟ್ ಮಾಡಬೇಕು ಅನಿಸಿದರೆ ಮೊದಲು ನಾನು ಬರೆದಿರುವ ಸಾಲುಗಳನ್ನು ಓದಿ. ನನ್ನ ಬಗ್ಗೆ ನೀವು ನೆಗೆಟಿವ್ ಬರೆಯಬಾರದು ಏಕೆಂದರೆ ನೆಗೆಟಿವ್ ಬರೆಯುವುದರಿಂದ ನಿಮ್ಮಲ್ಲಿ ನೆಗೆಟಿವ್ ಶಕ್ತಿ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ' ಎಂದಿದ್ದಾರೆ ಉಪಾಸನಾ.