ವಿದೇಶದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟ ಪುತ್ರ; ಸುರಕ್ಷತೆಯ ಚಿಂತೆಯಲ್ಲಿ ದಳಪತಿ!

Published : Apr 16, 2020, 02:06 PM ISTUpdated : Apr 18, 2020, 03:03 PM IST
ವಿದೇಶದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟ ಪುತ್ರ; ಸುರಕ್ಷತೆಯ ಚಿಂತೆಯಲ್ಲಿ ದಳಪತಿ!

ಸಾರಾಂಶ

ಕೆನಡಾ ಕೊರೋನಾ ಅಟ್ಟಹಾಸದಲ್ಲಿ ಸಿಲುಕಿಕೊಂಡಿರುವ ಕಾಲಿವುಡ್‌ ಸ್ಟಾರ್‌ ದಳಪತಿ ವಿಜಯ್  ಪುತ್ರ ಸಂಜಯ್, ಈ ಬಗ್ಗೆ ವಿಜಯ್ ಅವರು ಅತಂಕ ವ್ಯಕ್ತಪಡಿಸಿದ್ದಾರೆ . 

ಕಾಲಿವುಡ್‌ ಮಾಸ್ಟರ್‌ ವಿಜಯ್ ದಳಪತಿ ಏಕೈಕ ಪುತ್ರ ಜಾಸನ್ ಸಂಜಯ್ ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗದೆ ಸಿಲುಕಿಕೊಂಡಿರುವ ಸಂತೋಷ್ ಆರೋಗ್ಯ ಬಗ್ಗೆ ವಿಜಯ್ ಚಿಂತಿಸುತ್ತಿದ್ದಾರೆ.

ಕೊರೋನಾಗೂ ಕ್ಯಾರೆ ಅನ್ನದ ಫ್ಯಾನ್ಸ್ ಶುರು ಮಾಡ್ಕೊಂಡ್ರು ಸ್ಟಾರ್ ವಾರ್!

ತಂದೆಯಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು ಸಂಜಯ್ ಕೆನಡಾದಲ್ಲಿ ಫಿಲ್ಮ್‌ ಮೇಕಿಂಗ್ ಬಗ್ಗೆ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಂಜಯ್ ಸಿನಿಮಾ ಮಾಡುತ್ತಾರೆ ಎಂಬ  ಗಾಳಿ ಮಾತುಗಳು ಹರಿದಾಡುತ್ತಿದ್ದವು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಜಯ್  ಪುತ್ರನಿಗೆ ಈ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮುಖ್ಯ ಅಷ್ಟೇ ಅಲ್ಲದೆ ಆತ ಬ್ಯಾಡ್ಮಿಂಟನ್‌ ಪ್ಲೇಯರ್‌ ಹಾಗಾಗಿ ಅವರಿಗೆ ಇಚ್ಚೆ ಇರುವ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು ಎಂದು ವಿಜಯ್ ಹೇಳಿದ್ದರು.

ವಿಜಯ್ ದಳಪತಿ 'ಮಾಸ್ಟರ್‌' ಹಾಡಿನಲ್ಲಿ ವಿಜಯ್‌ ಸೇತುಪತಿ; ವಿಡಿಯೋ ವೈರಲ್‌!

ಇನ್ನಿತ್ತರ ದೇಶಗಳಿಗೆ ಹೊಲಿಸಿದರೆ  ಕೆನಡಾದಲ್ಲಿ ಕೊರೋನಾ ವೈರಸ್‌ ಪ್ರಮಾಣ ಬಹಳ ಕಡಿಮೆ ಆದರೂ ಕೆನಡಾ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಸಂಜಯ್ ಭಾರತಕ್ಕೆ ಬರಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿದ್ದಾರೆ. ಮನೆಯಿಂದ ದೂರವಿರುವ ಪುತ್ರನ ಆರೋಗ್ಯ ಬಗ್ಗೆ ಚಿಂತಿಸುತ್ತಿರುವ ವಿಜಯ್ ಮನೆಯಿಂದ ಹೊರ ಬಾರದಂತೆ ಪುತ್ರನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನಗಿಂತ 20 ವರ್ಷ ಚಿಕ್ಕವಳು, ಅವಳನ್ನು ದೂರ ತಳ್ಳಲು ಯತ್ನಿಸಿದ್ದೆ': ನಿರ್ದೇಶಕ ಅನುರಾಗ್ ಕಶ್ಯಪ್
ತೆಲುಗು ಓದಲು ಬರಲ್ಲ.. ಆದರೂ ಡೈಲಾಗ್ ಹೇಳುವುದರಲ್ಲಿ ಎಕ್ಸ್‌ಪರ್ಟ್: ಮಹೇಶ್ ಬಾಬು ಸೀಕ್ರೆಟ್ ರಿವೀಲ್!