'ಸೀತೆ' ಆಗಲು ಮಾಂಸಾಹಾರ ತ್ಯಜಿಸಿದ ನಯನತಾರಾ!

Published : Nov 21, 2019, 11:57 AM IST
'ಸೀತೆ' ಆಗಲು ಮಾಂಸಾಹಾರ ತ್ಯಜಿಸಿದ ನಯನತಾರಾ!

ಸಾರಾಂಶ

  'ಸೈರಾ ನರಸಿಂಹ ರೆಡ್ಡಿ' ಹಾಗೂ 'ಬಿಗಿಲ್' ಚಿತ್ರದಲ್ಲಿ ಮಿಂಚಿದ ಹಿಟ್ ನಟಿ ನಯನತಾರಾ 40 ದಿನಗಳ ಕಾಲ ಮಾಂಸಾಹಾರವನ್ನು ತ್ಯಜಿಸಿ 'ಸೀತೆ' ಆಗಲು ಸಜ್ಜಾಗಿದ್ದಾರೆ.

 

ಕಾಲಿವುಡ್‌ ಲೋಕದ ಬ್ಯೂಟಿ ನಯನತಾರಾ ಆರ್‌ಜೆ ಬಾಲಾಜಿ ನಿರ್ದೇಶಕದ 'ಮೂಕುತಿ ಅಮ್ಮನ್' ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಕಾರಣಕ್ಕೆ 40 ದಿನಗಳ ಕಾಲ ಮಾಂಸಾಹಾರವನ್ನು ತ್ಯಜಿಸಿದ್ದಾರೆ ಎಂದು ಕೆಲ ಮೂಲಗಳಿಂದ ಕೇಳಿ ಬಂದಿದೆ.

'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?

 

'ಮೂಕುತಿ ಅಮ್ಮನ್' ಚಿತ್ರದ ಇಡೀ ತಂಡ ಮಾಂಸಾಹಾರವನ್ನು ತ್ಯಜಿಸುವ ನಿರ್ಧಾರ ಮಾಡಿದೆ. ನಯನತಾರಾ ಸೀತಾ ಆಗಿ ನಟಿಸುತ್ತಿದ್ದು ನಿರ್ದೇಶಕ ಬಾಲಾಜಿ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಇಶಾರಿ ಕೆ ಗಣೇಶ್ ನಿರ್ಮಾಣ ಮಾಡುತ್ತಿದ್ದಾರೆ.

ವಿಭಿನ್ನ ಪಾತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ನಯನತಾರಾಳಿಗೆ ಇದೊಂದು ಚಾಲೆಂಜಿಂಗ್ ಪಾತ್ರವಾಗಲಿದೆ. ಈ ಹಿಂದೆ ತೆರೆ ಕಂಡಂತ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಒಂದು ಬಗೆಯಾದರೆ 'ಬಿಗಿಲ್' ಮತ್ತೊಂದು ರೀತಿಯ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 2011 ರಲ್ಲಿ 'ಶ್ರೀ ರಾಮ ರಾಜ್ಯಂ' ಚಿತ್ರದಲ್ಲಿ ನಟಿಸುವಾಗಲು ನಯನತಾರಾ ಮಾಂಸವನ್ನು ತ್ಯಜಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?