Amitabh, Jaya Bacchan ದಾಂಪತ್ಯಕ್ಕೆ 50 ವರ್ಷ: ಬಿಗ್​-ಬಿ ಸಾವಿನ ಸಮೀಪವಿದ್ದಾಗ ಡಾನ್​ ಬಳಿ ಹೋಗಿದ್ದ ಜಯಾ!

By Suvarna NewsFirst Published Jun 3, 2023, 2:40 PM IST
Highlights

40 ವರ್ಷಗಳ ಹಿಂದೆ  ಕೂಲಿ ಚಿತ್ರದ ಸಂದರ್ಭದಲ್ಲಿ ಸಾವಿನ ಮನೆಯ ಬಾಗಿಲು ತಟ್ಟಿದ್ದರು ಅಮಿತಾಭ್​. ಆ ಸಂದರ್ಭದಲ್ಲಿ  ಅವರನ್ನು ಉಳಿಸಿಕೊಳ್ಳಲು ಪತ್ನಿ ಜಯಾ ಬಚ್ಚನ್​ ಮಾಡಿದ್ದೇನು? ವಿವಾಹದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಘಟನೆ ಮೆಲುಕು ಹಾಕಲಾಗಿದೆ. 
 

ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ (Amitabh Bachchan ) ಮತ್ತು ಮೋಹಕ ತಾರೆ ಎನಿಸಿಕೊಂಡಿದ್ದ ಜಯಾ ಬಾಧುರಿಯ ಸುಖಿ ದಾಂಪತ್ಯಕ್ಕೆ  ಇಂದು 50 ವರ್ಷ, ಅರ್ಥಾತ್​ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ದಿನವಿದು. 1973ರ ಇದೇ ದಿನ ಅಂದರೆ ಜೂನ್​ 3ರಂದು ಇವರ ಮದುವೆಯಾಗಿದೆ.  ಅಮಿತಾಭ್ ಮತ್ತು ಜಯಾ ಜೋಡಿಯನ್ನು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಜೋಡಿ ಎಂದು ಪರಿಗಣಿಸಲಾಗಿದೆ. ಈ ಜೋಡಿಯ  ಪ್ರೇಮಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ಬಿಗ್ ಬಿ ಮೊದಲ ಬಾರಿಗೆ ಜಯಾ ಅವರನ್ನು ಮ್ಯಾಗಜೀನ್‌ನ ಕವರ್ ಪೇಜ್‌ನಲ್ಲಿ ನೋಡಿದ್ದರು ಮತ್ತು ಜಯಾ ಅವರನ್ನು ನೋಡಿದ ಅಮಿತಾಭ್​ ಸಾಕಷ್ಟು ಪ್ರಭಾವಿತರಾಗಿದ್ದರು. ಗೆಳತಿ, ಹೆಂಡತಿಯ ಚಿತ್ರ ಅಮಿತಾಭ್ ಮನದಲ್ಲಿ ಇದ್ದುದರಿಂದ ಜಯಾ ಅದರಲ್ಲಿ ಪರ್ಫೆಕ್ಟ್ ಆಗಿ ಫಿಟ್ ಆಗಿದ್ದರು. ಇದೇ ಕಾರಣಕ್ಕೆ ಅಮಿತಾಭ್ ಹೃದಯದಲ್ಲಿ ಜಯಾ ಅವರನ್ನು ಇಷ್ಟಪಡತೊಡಗಿದರು. ಬಹಳ ದಿನಗಳ ನಂತರ ಹೃಷಿಕೇಶ್ ಮುಖರ್ಜಿ ಅವರು ಅಮಿತಾಭ್ ಬಳಿ ‘ಗುಡ್ಡಿ’ ಚಿತ್ರದ ಸ್ಕ್ರಿಪ್ಟ್ ಬಂದರು. 'ಗುಡ್ಡಿ' ನಂತರ ಇಬ್ಬರೂ 'ಏಕ್ ನಜರ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರದ ಮೂಲಕ ಇಬ್ಬರ ಪ್ರೇಮಕಥೆ ಶುರುವಾಗಿತ್ತು. 1973ರಂದು ಜೋಡಿ ಹಸೆಮಣೆ ಏರಿತು. ಸುವರ್ಣ ಮಹೋತ್ಸವದ ಭಾವುಕ ನುಡಿಗಳನ್ನು ಅಮಿತಾಭ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಹಲವಾರು ಮಂದಿ ಈ ಜೋಡಿಗೆ ಶುಭ ಕೋರುತ್ತಿದ್ದು, ನೂರಾರು ವರ್ಷ ಬಾಳಿ ಬದುಕಿ ಎನ್ನುತ್ತಿದ್ದಾರೆ. ಮಗಳು ಶ್ವೇತಾ ಬಚ್ಚನ್​ (Shwetha Bacchan) ಕೂಡ ಅಪ್ಪ-ಅಮ್ಮನ ಕಪ್ಪು ಬಿಳುಪಿನ ಫೋಟೋ ಶೇರ್​ ಮಾಡಿಕೊಂಡು ಶುಭ ಹಾರೈಸಿದ್ದಾರೆ. 

ಈ 50 ವರ್ಷಗಳಲ್ಲಿ ಜೋಡಿ ಹಲವು ಏರಿಳಿತಗಳನ್ನು ಕಂಡಿದೆ. ಅವುಗಳಲ್ಲಿ ಒಂದು ಅಮಿತಾಭ್​ ಸಾವಿನ ಸಮೀಪ ಹೋಗಿದ್ದ ಕರಾಳ ಘಟನೆ ಹಾಗೂ ಜಯಾ (Jaya Bachchan ) ಅವರು ಅಂದು ಪಟ್ಟ ನೋವಿನ ಘಟನೆಯನ್ನು ಇಲ್ಲಿ ಹೇಳುತ್ತಿದ್ದೇವೆ.  ಈ ಘಟನೆ 4 ದಶಕಗಳಷ್ಟು ಹಳೆಯದು. ಇದು  ಬ್ಲಾಕ್‌ಬಸ್ಟರ್ ಚಿತ್ರ 'ಕೂಲಿ'ಗೆ ಸಂಬಂಧಿಸಿದೆ. ಇಂದಿಗೆ ಈ ಚಿತ್ರ ಬಿಡುಗಡೆಯಾಗಿ 40 ವರ್ಷಗಳು ಕಳೆದಿವೆ. ನಾಲ್ಕು ದಶಕಗಳ ಹಿಂದೆ, ಈ ಚಿತ್ರದ ಶೂಟಿಂಗ್ ಸಮಯದಲ್ಲಿ, ಅಮಿತಾಭ್​ ಅವರ ಜೀವನದಲ್ಲಿ ದೊಡ್ಡ ಆಘಾತವಾಗಿತ್ತು.  ಈ ಅಪಘಾತದ ನಂತರ, ಕುಟುಂಬ ಮಾತ್ರವಲ್ಲ, ಅವರ ಅಭಿಮಾನಿಗಳು ನಟನ ಪ್ರತಿ ಉಸಿರಿಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದ್ದರು.   ವಾಸ್ತವವಾಗಿ, ಅಮಿತಾಭ್​ ಬಚ್ಚನ್, ಖಾದರ್ ಖಾನ್, ವಹೀದಾ ರೆಹಮಾನ್, ಪುನೀತ್ ಇಸ್ಸಾರ್ ಮತ್ತು ರಿಷಿ ಕಪೂರ್ ಒಳಗೊಂಡಿರುವ 'ಕೂಲಿ' (Coolie) ಚಿತ್ರದಲ್ಲಿನ ದೃಶ್ಯವನ್ನು ಚಿತ್ರಿಸುವಾಗ ಅಮಿತಾಭ್​ ಬಚ್ಚನ್ ಅವರಿಗೆ ಪುನೀತ್ ಇಸ್ಸಾರ್​ ಅವರು ಚಾಕು ಇರಿಯುವ ದೃಶ್ಯವಿತ್ತು. ಆದರೆ ಚಾಕು ನಿಜವಾಗಿಯೂ ಚುಚ್ಚಿ ಅಮಿತಾಭ್​  ಅವರ ಹೊಟ್ಟೆ ಮತ್ತು ಕರುಳಿಗೆ ಗಂಭೀರ ಗಾಯವಾಗಿತ್ತು. ಇದಾದ ಬಳಿಕ ಬಿಗ್ ಬಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​? ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ ಇನ್​ಸ್ಟಾಗ್ರಾಮ್​ ಪೋಸ್ಟ್​!
 
ಈ ಅವಧಿಯಲ್ಲಿ ಗಂಭೀರವಾಗಿ ಗಾಯಗೊಂಡ ಬಿಗ್ ಬಿ ಸುಮಾರು 8 ಗಂಟೆಗಳ ಕಾಲ ಆಪರೇಷನ್ ಮಾಡಿ ನಂತರ ಬಹಳ ದೀರ್ಘ ಚಿಕಿತ್ಸೆ ನೀಡಿದ್ದರು. ಅಮಿತಾಭ್​ ಅವರ ಸ್ಥಿತಿ ಎಷ್ಟು ಗಂಭೀರವಾಗಿತ್ತು  ಎಂದರೆ ಸಾವಿನ ಸಮೀಪ ಹೋಗಿದ್ದರು. ದೇಶಾದ್ಯಂತ ಅವರ ಸಾವಿರಾರು ಅಭಿಮಾನಿಗಳು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರು ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಹೋಗಿದ್ದರು. ನೋವಿನ ಅಪಘಾತದ ನಂತರ, ಅವರು ತನ್ನ ಗಂಡನ ಜೀವಕ್ಕಾಗಿ ಹಗಲಿರುಳು ದೇವರನ್ನು ಪ್ರಾರ್ಥಿಸಿದರು.  

ಜಯಾ ಬಚ್ಚನ್ ತಮ್ಮ ಗಂಡನ ಸುರಕ್ಷತೆಗಾಗಿ ಮುಂಬೈನ ಪ್ರಬಲ ಡಾನ್‌ಗಳಲ್ಲಿ ಒಬ್ಬರಾದ ವರದಾ ರಾಜನ್ (Varada Rajan) ಬಳಿ ಹೋಗಿದ್ದರು. ಖ್ಯಾತ ಲೇಖಕ ಎಸ್ ಹುಸೇನ್ ಜೈದಿ ಅವರ 'ಡೋಂಗ್ರಿ ಸೆ ದುಬೈ ತಕ್: ಸಿಕ್ಸ್ ಡಿಕೇಡ್ಸ್ ಆಫ್ ದಿ ಮುಂಬೈ ಮಾಫಿಯಾ' ಪುಸ್ತಕದ ಪ್ರಕಾರ, ಡಾನ್ ವರದ ರಾಜನ್ ಅವರು ಧಾರ್ಮಿಕ ವ್ಯಕ್ತಿಯಾಗಿದ್ದು, ಮಾಟುಂಗಾ ನಿಲ್ದಾಣದ ಹೊರಗೆ ಗಣೇಶ ಚತುರ್ಥಿಯಂದು (Ganesh Chaturthi) ಗಣೇಶ ಮಂಟಪಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದರು. ಆದರೆ ಅನೇಕ ನಟಿಯರು ಬರುತ್ತಿದ್ದರು. ಜಯಾ ಕೂಡ ಈ ಪಂಗಡದಲ್ಲಿ ದೇವರನ್ನು ಪ್ರಾರ್ಥಿಸಲು ಹೋಗುತ್ತಿದ್ದರು ಮತ್ತು ಗಂಟೆಗಟ್ಟಲೆ ಪ್ರಾರ್ಥಿಸುತ್ತಿದ್ದರು. ಒಟ್ಟಿನಲ್ಲಿ ಜಯಾ ಮತ್ತು ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಫಲಿಸಿ ಬಿಗ್​ ಬಿ ಸುರಕ್ಷಿತವಾಗಿ ಬಂದಿದ್ದಾರೆ. 

ಅಮಿತಾಭ್​ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ

 

 
 
 
 
 
 
 
 
 
 
 
 
 
 
 

A post shared by S (@shwetabachchan)

click me!