ನಟ ಅಜಯ್ರಾವ್ ನಾಯಕನಾಗಿ ನಟಿಸಿರುವ, ನಿರ್ಮಾಣ ಮಾಡಿರುವ 'ಯುದ್ಧಕಾಂಡ' ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಅವರುಮಾತನಾಡಿದ್ದು, ಒಳ್ಳೆಯ ಸಿನಿಮಾ ಮಾಡಿದ್ದೇವೆ ಗೆಲ್ಲುವ ನಂಬಿಕೆ ಇದೆ. ಈ ಚಿತ್ರದ ಕುರಿತು ಅವರು, 'ಈ ಚಿತ್ರದ ಪ್ರತಿಯೊಂದು ದೃಶ್ಯ ಮಾಡುವಾಗಲೂ, ನಾನು ಸೋಲಬಾರದು ಅಂತ ಹೆದರಿಕೊಂಡು ಸಿನಿಮಾ ಮಾಡಿದ್ದೇನೆ. ಈ ಚಿತ್ರಕ್ಕೆ ತುಂಬಾ ಸಾಲ ಮಾಡಿದ್ದೇನೆ. ಅಡ ಇಟ್ಟಿದ್ದೇನೆ. ಕನ್ನಡ ಸಿನಿಮಾ ಬೆಳೆಯಲಿ ಎಂಬ ಉದ್ದೇಶದ ಜೊತೆಗೆ ನಾನೂ ಕಲಾವಿದನಾಗಿ ಬೆಳೆಯಬೇಕು ಎಂಬ ಆಶಯದಿಂದ ಸಿನಿಮಾ ಮಾಡಿದ್ದೇನೆ. ಗೆಲ್ಲುತ್ತೇನೆಂಬ ಭರವಸೆ ಇದೆ' ಎಂದು ಹೇಳಿದ್ದಾರೆ. ಈ ಸಿನಿಮಾಗಾಗಿ ಅವರು ತಮ್ಮ ಪುತ್ರಿಯ ನೆಚ್ಚಿನ ಕಾರನ್ನು ಮಾರಿದ್ದರು. ಆಕೆ ಮಾರುವುದು ಬೇಡ ಎಂದು ಅಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರನ್ನು ಭಾವುಕರನ್ನಾಗಿಸಿತ್ತು. ಈ ಸಿನಿಮಾವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ. ಅರ್ಚನಾ ಜೋಯಿಸ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಟಿ.ಎಸ್.ನಾಗಾಭರಣ ತಾರಾಬಳಗದಲ್ಲಿದ್ದಾರೆ.

08:04 PM (IST) Apr 18
ಈ ಮೂರೂವರೆ ದಶಕಗಳ ಅವಧಿಯಲ್ಲಿ ಇಬ್ಬರೂ ತಮ್ಮ ತಮ್ಮ ವೃತ್ತಿಕ್ಷೇತ್ರಗಳಲ್ಲಿ ಬಹಳ ಬ್ಯುಸಿಯಾಗಿದ್ದರು ಮತ್ತು ಬೇರೆ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೂ, ಒಟ್ಟಿಗೆ ಕೆಲಸ ಮಾಡುವ ಆಲೋಚನೆಗಳು ಬರದೇ ಇರಲಿಲ್ಲ, ಆದರೆ..
ಪೂರ್ತಿ ಓದಿ07:32 PM (IST) Apr 18
ನಟಿ ರಂಜನಿ ರಾಘವನ್ ಮೊದಲ ಬಾರಿ ನಿರ್ದೇಶನ ಮಾಡ್ತಿದ್ದಾರೆ. ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಗನಿಗೆ ಅವಕಾಶ ಸಿಕ್ಕಿದೆ.
07:05 PM (IST) Apr 18
ತಮ್ಮ ಇನ್ಸ್ಟಾಗ್ರಾಮ್ ಖಾತೆಯ ನಿಯಂತ್ರಣವನ್ನು ಮರಳಿ ಪಡೆಯಲು ತಾವು ಇನ್ಸ್ಟಾಗ್ರಾಮ್ನ ತಾಂತ್ರಿಕ ಬೆಂಬಲ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿಯೂ ಲಕ್ಷ್ಮಿ ಮಂಚು ತಿಳಿಸಿದ್ದಾರೆ. ಈ ರೀತಿಯ ವೈಯಕ್ತಿಕ ಖಾತೆಯ ಹ್ಯಾಕಿಂಗ್ ಘಟನೆ..
ಪೂರ್ತಿ ಓದಿ06:24 PM (IST) Apr 18
ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾ ಮಗುವೊಂದಕ್ಕೆ ಅಮ್ಮನಾಗಿದ್ದಾರೆ. ಆದರೆ ಈ ಬಗ್ಗೆ ಇನ್ನಿಲ್ಲದಂತೆ ಟ್ರೋಲ್ಗೆ ಒಳಗಾಗ್ತಿದ್ದಾರೆ ನಟಿ. ಆಗಿದ್ದೇನು?
06:10 PM (IST) Apr 18
ಬಾಲಿವುಡ್ ನ ಖಿಲಾಡಿ ಕುಮಾರ್ ಅಕ್ಷಯ್ ಕುಮಾರ್ ತಮ್ಮ ವೃತ್ತಿಜೀವನದಲ್ಲಿ ಹಲವು ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವ ರಿಮೇಕ್ ಚಿತ್ರಗಳು ಹಿಟ್ ಆಗಿವೆ ಮತ್ತು ಯಾವುವು ಫ್ಲಾಪ್ ಆಗಿವೆ ಎಂಬುದನ್ನು ತಿಳಿದುಕೊಳ್ಳೋಣ.
ಪೂರ್ತಿ ಓದಿ05:59 PM (IST) Apr 18
ಚೆನ್ನೈನಲ್ಲಿ ನಡೆದ ಶಿವರಾಜ್ ಕುಮಾರ್, ಉಪೇಂದ್ರ ಅವರ ನಟನೆಯ 45 ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಅವರು ತಾವು ಹುಡುಗಿಯಾಗಿ ಹುಟ್ಟಿದ್ದರೆ... ಎನ್ನುತ್ತಲೇ ಕುತೂಹಲದ ಆಸೆ ತೆರೆದಿಟ್ಟಿದ್ದಾರೆ. ಏನದು?
05:47 PM (IST) Apr 18
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ಎಂಗೇಜ್ ಆಗಿದ್ದಾರೆ. ಅದ್ದೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಈಗ ವೈಷ್ಣವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್ಮೆಂಟ್ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ05:42 PM (IST) Apr 18
ದೀಕ್ಷಿತ್ ಶೆಟ್ಟಿ ನಾಯಕರಾಗಿ ಮತ್ತು ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿರುವ, ಅಭಿಷೇಕ್ ಎಂ ನಿರ್ದೇಶನದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದ ‘ಹರ ಓಂ’ ಎಂಬ ಶಿವನ ಹಾಡು ಎಂಆರ್ಟಿ ಮ್ಯೂಸಿಕ್ (ಲಹರಿ) ಮೂಲಕ ಬಿಡುಗಡೆಯಾಗಿದೆ.
ಪೂರ್ತಿ ಓದಿ05:14 PM (IST) Apr 18
ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಹೆಂಡ್ತಿ ಆಲಿಯಾ ಭಟ್ ಲಿಫ್ಟಲ್ಲಿ ಈ ರೀತಿಯಾಗಿ ಸಿಕ್ಕಿಬಿದ್ದಿದ್ದಾರೆ! ಇದರ ವಿಡಿಯೋ ವೈರಲ್ ಆಗ್ತಿದೆ.
04:53 PM (IST) Apr 18
ಮಹಾನಟಿ ಸಾವಿತ್ರಿಯವರ ನಟನಾ ಕೌಶಲ್ಯಕ್ಕೆ ಮುರಳಿ ಮೋಹನ್ ಅವರು ಬೆರಗಾದ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಭಾರತಮ್ಲೋ ಒಂದು ಅಮ್ಮಾಯಿ ಚಿತ್ರದ ಚಿತ್ರೀಕರಣದಲ್ಲಿ ಸಾವಿತ್ರಿಯವರ ಸೂಕ್ಷ್ಮ ಅಭಿನಯದಿಂದ ಮುರಳಿ ಮೋಹನ್ ಪ್ರಭಾವಿತರಾದರು.
ಪೂರ್ತಿ ಓದಿ04:53 PM (IST) Apr 18
ಅಶೋಕ್ ತೇಜ ನಿರ್ದೇಶನದ 'ಒಡೆಲಾ 2' ಸಿನಿಮಾ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಬ್ಜೆಕ್ಟ್ ಆಗಿದೆ. ಈ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಲು ಕಾರಣ ಒಂದು ಹೊಸತನದ ಸಬ್ಜೆಕ್ಟ್, ಇನ್ನೊಂದು ತಮನ್ನಾ ಭಾಟಿಯಾ..
ಪೂರ್ತಿ ಓದಿ04:11 PM (IST) Apr 18
ಕಳೆದ 6 ವರ್ಷಗಳಿಂದ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಮಾಡಿಕೊಂಡಿಲ್ಲ. ಜತೆಗೆ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ ಎಂದರು ನೆನಪಿರಲಿ ಪ್ರೇಮ್.
ಪೂರ್ತಿ ಓದಿ03:55 PM (IST) Apr 18
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರು ಶೂಟಿಂಗ್ ವೇಳೆ ತೆರಳುತ್ತಿದ್ದಾಗ ತೆಪ್ಪ ಮುಗುಚಿ ಎಲ್ಲರೂ ನೀರಿಗೆ ಬಿದ್ದಿರೋ ಘಟನೆ ನಡೆದಿತ್ತು. ಏನದು?
02:39 PM (IST) Apr 18
ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದಲ್ಲಿ ಸ್ವಂತವಾಗಿ ಬೆಳೆದವರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಸ್ವಪ್ರಯತ್ನದಿಂದ ಹೀರೋ ಆದರು. ಸಣ್ಣ ಪಾತ್ರಗಳಿಂದ ಶುರು ಮಾಡಿ, ಹೀರೋ, ಸುಪ್ರೀಂ ಹೀರೋ, ಮೆಗಾಸ್ಟಾರ್ ಆಗಿ ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಈಗ ತೆಲುಗು ಚಿತ್ರರಂಗಕ್ಕೆ ದೊಡ್ಡಣ್ಣನಂತೆ ಎಲ್ಲದರಲ್ಲೂ ಬೆಂಬಲವಾಗಿ ನಿಂತಿದ್ದಾರೆ. ಆದರೆ, ಆರಂಭದಲ್ಲಿ ಕಷ್ಟಗಳನ್ನು ಎದುರಿಸಿದ್ದಾರೆ.
ಪೂರ್ತಿ ಓದಿ01:13 PM (IST) Apr 18
ಸದ್ಯ ಸಿನಿಮಾದ ಜೊತೆ ನಿರ್ಮಾಣಕ್ಕೂ ಕೈಹಾಕಿರುವ ನಟಿ ಸಮಂತಾ ರುತ್ ಪ್ರಭು ಮಹಿಳೆಯರ ಮುಟ್ಟಿನ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
01:10 PM (IST) Apr 18
ರವಿಚಂದ್ರನ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಸ್ವಮೇಕ್, ರೀಮೇಕ್ ಎಲ್ಲವನ್ನೂ ಮಾಡಿ ಗೆದ್ದಿದ್ದಾರೆ, ಸೋತಿದ್ದಾರೆ. ಅವರಿಗೆ ಅವರೇ ಸಾಟಿ ಎಂಬಂತೆ ಬದುಕಿದ್ದಾರೆ. ಹುಚ್ಚು ಸಾಹಸಗಳನ್ನು ಮಾಡಿ ಕ್ರೇಜಿ ಸ್ಟಾರ್ ಎಂಬ ಬಿರುದನ್ನೂ ಸಹ ಪಡೆದಿದ್ದಾರೆ. ಇಂಥ ರವಿಚಂದ್ರನ್..
ಪೂರ್ತಿ ಓದಿ12:52 PM (IST) Apr 18
ರಕ್ಷಿತ್ ಶೆಟ್ಟಿ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ್ರೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿಯೇ ಹೇಗೆ ನುಣುಚಿಕೊಂಡ್ರು ನೋಡಿ. ವಿಡಿಯೋ ವೈರಲ್ ಆಗಿದೆ.
11:39 AM (IST) Apr 18
ಅಮಿತಾಬ್ ಬಚ್ಚನ್ ಎಕ್ಸ್ ಖಾತೆಯಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿಲ್ಲ. ಅದನ್ನು ಹೇಗೆ ಹೆಚ್ಚಿಸಿಕೊಳ್ಳೋದು ಎನ್ನುವ ಅಮಿತಾಬ್ ಪ್ರಶ್ನೆಗೆ ಫಾಲೋವರ್ಸ್ ಏನೆಲ್ಲ ಉತ್ತರ ನೀಡಿದ್ದಾರೆ ಗೊತ್ತಾ?
ಪೂರ್ತಿ ಓದಿ09:50 AM (IST) Apr 18
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ಗೆ ಈಗಾಗಲೇ ಮದುವೆ ಆಗಿದೆ, ಈಗ ಭಾಗ್ಯ ಇನ್ನೊಂದು ಮದುವೆ ಆದರೆ ತಪ್ಪೇನು?
ಪೂರ್ತಿ ಓದಿ