
ಒಂದು ಸಂದರ್ಶನದಲ್ಲಿ ಪಿ. ವಾಸು, ತಮ್ಮ ವೃತ್ತಿಜೀವನದ ಆರಂಭದಲ್ಲಿ ಶಿವಾಜಿ ಗಣೇಶನ್ಗೆ ಕಥೆ ಹೇಳಲು ಹೋದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಶಿವಾಜಿ ಅವರಿಗೆ ಕಥೆ ಹೇಳುವುದೇ ದೊಡ್ಡ ಅವಕಾಶ ಎಂದುಕೊಂಡು ಬಹಳ ನಿರೀಕ್ಷೆಯಿಂದ ಹೋಗಿದ್ದರಂತೆ. ಆದರೆ ಆ ಭೇಟಿ ತಮಗೆ ಮುಜುಗರ ಉಂಟು ಮಾಡಿತ್ತು ಎಂದು ಹೇಳಿದ್ದಾರೆ.
ಶಿವಾಜಿ ಅವರು ಪಿ. ವಾಸು ಅವರನ್ನು ಮಧ್ಯಾಹ್ನದ ಊಟದ ಸಮಯದಲ್ಲಿ ಕಥೆ ಹೇಳಲು ಕರೆದಿದ್ದರು. ಶಿವಾಜಿ ಊಟ ಮಾಡುತ್ತಿದ್ದಾಗ ವಾಸು ಅಲ್ಲೇ ಇದ್ದರು. ಆಗ ಶಿವಾಜಿ, “ನನಗೆ ಮಾತ್ರ ಊಟ ಬಂದಿದೆ, ನಿನಗೆ ಊಟ ಇಲ್ಲ... ನೀನು ಹೊರಗೆ ಹೋಗಿ ತಿಂದು ಬಾ” ಎಂದು ಹೇಳಿದರಂತೆ.
ಆದರೆ, ಕಥೆ ಹೇಳುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ವಾಸು, “ನನಗೆ ಊಟ ಬೇಡ ಸರ್... ನಾನು ನಿಮಗೆ ಕಥೆ ಹೇಳಿ ನಂತರ ಹೋಗಿ ತಿನ್ನುತ್ತೇನೆ” ಎಂದಿದ್ದಾರೆ. ಶಿವಾಜಿ ಅವರು ತಾಳ್ಮೆಯಿಂದ ಊಟ ಮುಗಿಸಿ, ಒಂದು ಬನಿಯನ್ ಹಾಕಿಕೊಂಡು ಕಥೆ ಕೇಳಲು ಸಿದ್ಧರಾದರು.
ಶಿವಾಜಿ ಕಥೆ ಕೇಳುವಾಗ, ಆ ಕೋಣೆಯಲ್ಲಿ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ರಿಮೋಟ್ ಕೂಡ ಕೆಲಸ ಮಾಡದ ಕಾರಣ ಶಿವಾಜಿ ಟೆನ್ಶನ್ ಆಗಿ ಸಿಗರೇಟ್ ಸೇದಲು ಶುರುಮಾಡಿದರಂತೆ. ಇದರಿಂದ ವಾಸು ಅವರ ಗಮನ ಬೇರೆಡೆ ಹೋಯಿತು. ಆಗ ವಾಸು, “ಕ್ಷಮಿಸಿ ಸರ್, ನೀವು ಟಿವಿ ನೋಡುವುದು ಮತ್ತು ಸಿಗರೇಟ್ ಸೇದುತ್ತಿರುವುದರಿಂದ ನಿಮ್ಮ ಗಮನ ಕಥೆಯ ಮೇಲೆ ಇಲ್ಲ” ಎಂದಿದ್ದಾರೆ.
ಇದನ್ನು ಕೇಳಿದ ಶಿವಾಜಿ, “ಯಾರನ್ನು ನೋಡಿ ಏನು ಮಾತನಾಡುತ್ತಿದ್ದೀಯಾ” ಎಂಬಂತೆ ತೀವ್ರವಾಗಿ ಕೋಪಗೊಂಡರು ಎಂದು ಪಿ. ವಾಸು ಹೇಳಿದ್ದಾರೆ. ಇದು ಕಹಿ ಅನುಭವವಾದರೂ, ದೊಡ್ಡ ನಟರೊಂದಿಗೆ ಕೆಲಸ ಮಾಡುವಾಗ ಎದುರಾಗುವ ಆರಂಭಿಕ ಸವಾಲುಗಳನ್ನು ತನಗೆ ಅರ್ಥ ಮಾಡಿಸಿತು ಎಂದು ಪಿ. ವಾಸು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.