
'ಅಸುರನ್' ಚಿತ್ರದಲ್ಲಿ ಧನುಷ್ ಅವರ ಮಗನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಕೆನ್ ಕರುಣಾಸ್. ಈಗ ಕೆನ್ ಕರುಣಾಸ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ಯೂತ್' ಸಿನಿಮಾ ಥಿಯೇಟರ್ಗೆ ಬರಲು ಸಿದ್ಧವಾಗಿದೆ. ಮಾರ್ಚ್ 19 ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಇದೀಗ, ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಟ ಧನುಷ್, ಕೆನ್ ಬಗ್ಗೆ ಹೇಳಿದ ಮಾತುಗಳು ಚರ್ಚೆಯಾಗುತ್ತಿವೆ.
"'ಅಸುರನ್' ಸಿನಿಮಾದ ಫೋಟೋಶೂಟ್ನಲ್ಲಿ ನಾನು ಕೆನ್ನನ್ನು ಮೊದಲ ಬಾರಿಗೆ ನೋಡಿದೆ. ನೋಡಿದಾಗ ನನಗೆ ಆತ ಇಷ್ಟವಾಗಲಿಲ್ಲ. ನಾನು ವೆಟ್ರಿಮಾರನ್ರನ್ನು ಕ್ಯಾರವಾನ್ಗೆ ಕರೆದು, 'ಈ ಹುಡುಗ ಬೇಡ, ಬೇರೆ ಯಾರನ್ನಾದರೂ ನೋಡೋಣ' ಅಂತ ಹೇಳಿದೆ. ನನ್ನ ಪಾತ್ರಕ್ಕೆ ಆತ ಹೊಂದಿಕೆಯಾಗುವುದಿಲ್ಲ ಅನ್ನೋ ಕಾರಣಕ್ಕೆ ಬೇಡ ಅಂದಿದ್ದೆ. ಅದಕ್ಕೆ ವೆಟ್ರಿಮಾರನ್, 'ಸ್ವಲ್ಪ ಟೈಮ್ ಕೊಡಿ, ಅವನು ಸರಿ ಹೋಗ್ತಾನೆ' ಅಂದ್ರು.
ನಾನೂ ಸರಿ ಅಂತ ಸುಮ್ಮನಾದೆ. ಆಮೇಲೆ ನಾನು ಕೆನ್ನನ್ನು ನೋಡಲೇ ಇಲ್ಲ. ಶೂಟಿಂಗ್ ಶುರುವಾದ ಮೊದಲ ದಿನವೇ ಅವನ ನಟನೆ ನೋಡಿದ ತಕ್ಷಣ, ನಾನು ವೆಟ್ರಿಮಾರನ್ಗೆ 'ನಿಮ್ಮ ಆಯ್ಕೆ ಸರಿ ಇದೆ' ಅಂತ ಹೇಳಿದೆ. ಚಿಕ್ಕ ಹುಡುಗನಾದರೂ ಇಷ್ಟೊಂದು ಜನರ ಮಧ್ಯೆ ಆತ್ಮವಿಶ್ವಾಸದಿಂದ ನಟಿಸುತ್ತಿದ್ದ. ಕೆನ್ನನ್ನು ಹುಡುಕಿದ್ದೇ ವೆಟ್ರಿಮಾರನ್, ಅವನ ಮೇಲೆ ನಂಬಿಕೆ ಇಟ್ಟಿದ್ದೂ ಅವರೇ" ಎಂದು ಧನುಷ್ ಆ ದಿನಗಳನ್ನು ನೆನಪಿಸಿಕೊಂಡರು.
"ಅದಾದ ಮೇಲೆ ಕೆನ್ ನನ್ನ ಪಬ್ಜಿ ಫ್ರೆಂಡ್ ಆದ. ಅವನ ಜೊತೆ ಹೇಗಾದರೂ ಕ್ಲೋಸ್ ಆಗಬೇಕಿತ್ತು, ಅದಕ್ಕೆ ನಾವು ಗೇಮ್ ಆಡಲು ಶುರು ಮಾಡಿದೆವು. ನನ್ನ ಪಬ್ಜಿ ಟೀಮ್ ಲೀಡರ್ ಕೆನ್. ಹೀಗೆ ಒಂದು ಸಿನಿಮಾ ಮಾಡ್ತಿದ್ದೀನಿ ಅಂತ ಕೆನ್ ಹೇಳಿದಾಗ ನನಗೆ ಶಾಕ್ ಆಯ್ತು. ಇಷ್ಟು ಚಿಕ್ಕ ವಯಸ್ಸಲ್ಲಿ ಯಾಕೆ ಸಿನಿಮಾ ಮಾಡ್ತೀಯಾ?
ಒಂದು ಎರಡು-ಮೂರು ವರ್ಷ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡು, ಆಮೇಲೆ ಮಾಡಬಹುದು ಅಂತ ಹೇಳಿದೆ. ಅವಸರ ಬೇಡ ಅಂತ ಬುದ್ಧಿವಾದ ಹೇಳಿದ್ದೆ. ಆದರೆ ಅವನು, 'ಇಲ್ಲ ಸರ್, ನಾನು ಮಾಡೇ ಮಾಡ್ತೀನಿ' ಅಂದ. ಹಾಗಂದಾಗ ನಾನು ಅವನನ್ನು ನಿರುತ್ಸಾಹಗೊಳಿಸಲಿಲ್ಲ. ಆದರೆ, ಸಿನಿಮಾ ಮಾಡಿ ನನ್ನನ್ನು ಹೀಗೆ ವೇದಿಕೆ ಮೇಲೆ ನಿಲ್ಲಿಸ್ತಾನೆ ಅಂತ ನಾನು ಅಂದುಕೊಂಡಿರಲಿಲ್ಲ. ಕೆನ್ ನನ್ನನ್ನು ಸುಳ್ಳುಗಾರನನ್ನಾಗಿ ಮಾಡಿದ" ಎಂದು ಧನುಷ್ ಮಾತು ಮುಗಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.