ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ!

Published : Nov 20, 2023, 02:36 PM ISTUpdated : Nov 20, 2023, 02:47 PM IST
ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ!

ಸಾರಾಂಶ

ಈಗ ಯಾವುದೇ ಸಿನಿರಂಗದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವೇ ಆಗಿದೆ ಎನ್ನಬಹುದು. ಅದರಲ್ಲೂ ಲೀಡ್ ರೋಲ್ ಪಡೆಯುವುದು ತೀರಾ ಕಷ್ಟ ಎನ್ನಬಹುದು. ಅದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್‌ನಲ್ಲಿ ಈಗ ಮಿಂಚುತ್ತಿರುವ ನಾಯಕನಟನ ತಮ್ಮನೊಬ್ಬನ ರಿಯಲ್ ಸ್ಟೋರಿ ಗಮನಸೆಳೆಯುತ್ತಿದೆ. 

ಬಾಲಿವುಡ್ ಚಿತ್ರರಂಗವೆಂದರೆ ಅದೊಂದು ಸಮುದ್ರದಂತೆ, ಅಲ್ಲಿ ನಟನೆಗೆ ಚಾನ್ಸ್ ಪಡೆಯುವುದು ಕಷ್ಟ ಎಂಬ ಮಾತಿದ್ದ ಕಾಲವಿತ್ತು. ಆದರೆ, ಈಗ ಹಲವು ಚಿತ್ರರಂಗಗಳು ಬಾಲಿವುಡ್‌ ಮೀರಿಯೂ ಬೆಳೆದಿವೆ ಎನ್ನಬಹುದು. ಅದರಲ್ಲೂ ಸದ್ಯ ಕನ್ನಡ, ತೆಲುಗು ಹಾಗು ತಮಿಳು ಚಿತ್ರರಂಗಗಳೂ ಕೂಡ ಬಹಳಷ್ಟು ಬೆಳೆದಿವೆ. ಈಗ ಯಾವುದೇ ಸಿನಿರಂಗದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವೇ ಆಗಿದೆ ಎನ್ನಬಹುದು. ಅದರಲ್ಲೂ ಲೀಡ್ ರೋಲ್ ಪಡೆಯುವುದು ತೀರಾ ಕಷ್ಟ ಎನ್ನಬಹುದು. ಅದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್‌ನಲ್ಲಿ ಈಗ ಮಿಂಚುತ್ತಿರುವ ನಾಯಕನಟನ ತಮ್ಮನೊಬ್ಬನ ರಿಯಲ್ ಸ್ಟೋರಿ ಗಮನಸೆಳೆಯುತ್ತಿದೆ. 

ನಟಿ ಶ್ರೀದೇವಿ ಸಡನ್ನಾಗಿ ನಟನೆ ನಿಲ್ಲಿಸಿದ್ದು ಯಾಕೆ, ಕೆರಿಯರ್‌ಗೆ ಮೇನ್ ವಿಲನ್‌ ಆಗಿದ್ದು ಇವರೇ ನೋಡಿ!

ಹೌದು, ಈ ನಟ, ನಿಜವಾಗಿ ಹೇಳಬೇಕೆಂದರೆ ನಟನ ತಮ್ಮ, 19 ವರ್ಷದೊಳಗಿನ ಹರಿಯಾಣದ ಕ್ರಿಕೆಟ್ ಟೀಮ್‌ನಲ್ಲಿ ಕ್ಯಾಪ್ಟನ್‌ ಆಗಿದ್ದವರು. ಆದರೆ, ಅಣ್ಣ ಬಾಲಿವುಡ್‌ ಸಿನಿಮಾ ನಟನಾಗಿ ಎಂಟ್ರಿ ಕೊಟ್ಟು ಸಕ್ಸಸ್ ಪಡೆಯುತ್ತಿದ್ದಂತೆ, ಈ ತಮ್ಮನಿಗೆ ಕ್ರಿಕೆಟ್ ಬಗೆಗಿನ ಆಸಕ್ತಿ ಹೊರಟೇಹೋಯ್ತು. ಆತ ತಾನು ಕೂಡ ಅಣ್ಣನಂತೆ ಸಿನಿಮಾ ನಟನಾಗಿ ಮಿಂಚಬೇಕೆಂದು ನಿರ್ಧಾರ ಮಾಡಿದ. ನಟನಾಗಲು ಬೇಕಾದ ಸಿದ್ಧತೆ ಶುರುಮಾಡಿಕೊಂಡು '2016'ರಲ್ಲಿ ನಟನೂ ಆದ. ಆದರೆ, ಆತನ ಗುರಿ ನಟನಾಗುವುದಲ್ಲ, ಅಣ್ಣನಂತೆ ನಾಯಕನಟ ಆಗುವುದು. ಆದರೆ, ಅದಿನ್ನೂ ಸಾಧ್ಯವಾಗಿಲ್ಲ. 

ಸಕ್ಸಸ್ ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಬಾಲಿವುಡ್ ಬಿಟ್ಟ ಕಾರಣ ಬಹಿರಂಗ!

ಅಮಿರ್ ಖಾನ್ ನಟನೆಯ 'ದಂಗಲ್' ಚಿತ್ರದಲ್ಲಿ ಈ ನಟ ಚಿಕ್ಕದೊಂದು ಪಾತ್ರವನ್ನು ತುಂಬಾ ಚೊಕ್ಕವಾಗಿ ನಿರ್ವಹಿಸಿದ್ದ. ಅಮೀರ್ ಖಾನ್ ಸೋದರಳಿಯ ಪಾತ್ರದಲ್ಲಿ ನಟಿಸಿದ್ದ ಈ ನಟ, ತನ್ನ ಅಮೋಘ ನಟನೆಗೆ ಹಲವರಿಂದ ಮೆಚ್ಚುಗೆ ಕೂಡ ಪಡೆದಿದ್ದ. ಆದರೆ, ಆ ಸಿನಿಮಾ ಬಳಿಕ ನಾಯಕನಾಗಲು ವಿಫಲನಾದ. ಬಳಿಕ ಆತ 'ಬದ್ರಿನಾಥ್‌ ಕೀ ದುಲ್ಹನಿಯಾ' ಚಿತ್ರದಲ್ಲಿ ಮತ್ತೊಂದು ಪಾತ್ರ ಮಾಡಿದ, ಆದರೆ ನಾಯಕನಾಗಲು ಮಾತ್ರ ಸಾಧ್ಯವಾಗಲಿಲ್ಲ. ಅದಾದ ಬಳಿಕ 'ಹಾರರ್-ಕಾಮಿಡಿ' ಚಿತ್ರ 'ಸ್ರೀ'ದಲ್ಲಿ ಗಮನಸೆಳೆಯುವ ಪಾತ್ರವೊಂದರಲ್ಲಿ ನಟಿಸಿದ್ದಾನೆ.

ಅಣ್ಣ ಆಯುಷ್ಮಾನ್ ಖುರಾನಾರ ತಮ್ಮ ಅಪರಶಕ್ತಿ ಖುರಾನಾ ಕಥೆಯಿದು. ಆಯುಷ್ಮಾನ್ ಖುರಾನಾ ಅವರು ಸದ್ಯ ಬಾಲಿವುಡ್‌ನಲ್ಲಿ ಓಡುತ್ತಿರುವ ಕುದುರೆ. ಅವರು ಈಗಾಗಲೇ ತಾವೊಬ್ಬರು ಸಮರ್ಥ ನಟ ಎಂದು ಪ್ರೂವ್ ಮಾಡಿಕೊಂಡಿದ್ದಾರೆ, ಕೈ ಖಾಲಿಯಾಗದಂತೆ ಹಲವು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಆದರೆ, ಅವರ ಸಹೋದರನಾಗಿ ಬಂದ ಅಪರಶಕ್ತಿ ಖುರಾನಾಗೆ ಮಾತ್ರ ಇನ್ನೂ 'ಹೀರೋ' ಆಗಿ ಚಾನ್ಸ್ ಗಿಟ್ಟಿಸಲು ಸಾಧ್ಯವಾಗಿಲ್ಲ. ಆದರೆ, 'ಮತ್ತೆ ಮತ್ತೆ ಪ್ರಯತ್ನಿಸು' ಎಂಬ ಮಾತಿನಂತೆ 'ಅಪರಶಕ್ತಿ' ತಮ್ಮ ಪ್ರಯತ್ನ ಕಂಟಿನ್ಯೂ ಮಾಡಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕು. 

ನಾನು ಮನೆಗೆ ಬಂದಾಗ ವಿಕ್ಕಿ ಹೊರ ಹೋಗ್ತಾನೆ, ಒಟ್ಟಿಗೆ ರಾತ್ರಿ ಕಳೆಯೋಲ್ಲ: ಕತ್ರೀನಾ ಹಿಂಗಾದ್ರೆ ಮಗು ಆಗೋದ್ಹೇಗೆ ಕೇಳಿದ ಫ್ಯಾನ್ಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?