ನಟಿ ಭೂಮಿ ಪಡ್ನೆಕರ್‌, ನಟ ವಿಕ್ಕಿ ಕೌಶಲ್‌ಗೆ ಕೊರೋನಾ ಪಾಸಿಟಿವ್!

Suvarna News   | Asianet News
Published : Apr 05, 2021, 04:26 PM IST
ನಟಿ ಭೂಮಿ ಪಡ್ನೆಕರ್‌, ನಟ ವಿಕ್ಕಿ ಕೌಶಲ್‌ಗೆ ಕೊರೋನಾ ಪಾಸಿಟಿವ್!

ಸಾರಾಂಶ

ಬಾಲಿವುಡ್‌ ನಟ ಭೂಮಿ ಪಡ್ನೆಕರ್‌ ಹಾಗೂ ನಟ ವಿಕ್ಕಿ ಕೌಶಲ್‌ಗೆ ಕೊರೋನಾ ಸೋಂಕು ತಗುಲಿದೆ. ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದ ಕಾರಣ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 

ಬಾಲಿವುಡ್‌ ಅಂಗಳದಲ್ಲಿ ಕೊರೋನಾ ವೈರಸ್‌ ದೊಡ್ಡ ಅಲೆ ಎಬ್ಬಿಸಿದೆ. ಸಿನಿಮಾ ಸ್ಟಾರ್ಸ್ ಹಾಗೂ ಸೆಲೆಬ್ರಿಟಿಗಳನ್ನೇ ಟಾರ್ಗೇಟ್ ಮಾಡುತ್ತಿರುವ ಕೊರೋನಾಗೆ ಬ್ರೇಕ್ ಹಾಕಲೇ ಬೇಕೆಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ಕಠಿಣ ಮಾರ್ಗ ಸೂಚನೆಗಳನ್ನು ಜಾರಿಗೊಳಿಸಿದೆ. 

'ವಕೀಲ್ ಸಾಬ್‌' ಚಿತ್ರದ ನಟಿ ನಿವೇತಾ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಕೊರೋನಾ ಪಾಸಿಟಿವ್ 

ನಟಿ ಭೂಮಿ ಪಡ್ನೆಕರ್‌ ಕೊರೋನಾ ಸೋಂಕು ತಗುಲಿರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದು ಕೊಂಡಿದ್ದಾರೆ. 'ಇಂದು ನನಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಐಸೋಲೇಟ್‌ ಆಗುತ್ತಿರುವೆ. ನನ್ನ ವೈದ್ಯರು ಹೇಳಿರುವುದನ್ನು ಪಾಲಿಸುತ್ತಿರುವೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಿ. ಬಿಸಿ ಹಬೆ, ವಿಟಮಿನ್ ಸಿ ಸೇವಿಸಿ. ಸದಾ ಖುಷಿಯಾಗಿದ್ದು, ಒಳ್ಳೆಯ ಮೂಡ್‌ನಲ್ಲಿದ್ದರೆ ಏನು ಬೇಕಾದರೂ ಎದುರಿಸಬಹುದು. ಸದ್ಯದ ಪರಿಸ್ಥತಿಯನ್ನು ನಿರ್ಲಕ್ಷ್ಯಿಸಬೇಡಿ.  ಮುಜಾಗೃತ ಕ್ರಮ ಅಗತ್ಯವಿದೆ,' ಎಂದಿದ್ದಾರೆ. 

ಬಿ-ಟೌನ್‌ ಹ್ಯಾಂಡ್ಸಮ್ ವಿಕ್ಕಿ ಕೌಶಲ್‌ಗೆ ಕೂಡ ಕೋವಿಡ್‌19 ಪಾಸಿಟಿವ್‌ ಬಂದಿದೆ. 'ಚಾಚೂ ತಪ್ಪದೇ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡರೂ ಕೋವಿಡ್‌19 ಪಾಸಿಟಿವ್ ಆಗಿದ್ದೀನಿ.  ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದು, ನನ್ನ ಡಾಕ್ಟರ್ ಸಲಹೆ ಪಡೆಯುತ್ತಿರುವೆ. ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಂಬ್ಬರೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ,' ಎಂದಿದ್ದಾರೆ ವಿಕ್ಕಿ.

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್! 

ಕೆಲವು ದಿನಗಳ ಹಿಂದೆ ರಣಬೀರ್ ಕಪೂರ್, ಆಲಿಯಾ ಭಟ್, ಅಕ್ಷಯ್ ಕುಮಾರ್, ಗೋವಿಂದ್ ಸೇರಿದಂತೆ ರಾಮಸೇತು ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದ 35 ಮಂದಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?