ನಟಿ ಕಂಗನಾಗೆ ‘ವೈ’ ಶ್ರೇಣಿ ಭದ್ರತೆ;ದಿನವಿಡೀ 10 ಸಿಆರ್‌ಪಿಎಫ್‌ ಯೋಧರ ಕಾವಲು!

Kannadaprabha News   | Asianet News
Published : Sep 08, 2020, 09:21 AM IST
ನಟಿ ಕಂಗನಾಗೆ ‘ವೈ’ ಶ್ರೇಣಿ ಭದ್ರತೆ;ದಿನವಿಡೀ 10 ಸಿಆರ್‌ಪಿಎಫ್‌ ಯೋಧರ ಕಾವಲು!

ಸಾರಾಂಶ

ಬಾಲಿವುಡ್‌ ಡ್ರಗ್‌ ಮಾಫಿಯಾ ಹಾಗೂ ಮುಂಬೈ ಪೊಲೀಸರನ್ನು ಟೀಕಿಸಿ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯಿಂದ ಬೆದರಿಕೆ ಎದರಿಸುತ್ತಿರುವ ನಟಿ ಕಂಗನಾ ರಾಣಾವತ್‌ ಅವರಿಗೆ ಕೇಂದ್ರ ಸರ್ಕಾರ ‘ವೈ’ ಶ್ರೇಣಿಯ ಭದ್ರತೆ ನೀಡಿದೆ. ಇದರಿಂದಾಗಿ ಕಂಗನಾ ಅವರಿಗೆ ದಿನದ 24 ಗಂಟೆಯೂ 10 ಸಿಆರ್‌ಪಿಎಫ್‌ ಯೋಧರು ಭದ್ರತೆ ನೀಡಲಿದ್ದಾರೆ. ಸಿಆರ್‌ಪಿಎಫ್‌ ಯೋಧರಿಂದ ಭದ್ರತೆ ಪಡೆದ ಬಾಲಿವುಡ್‌ನ ಮೊದಲ ನಟಿ ಇವರಾಗಿದ್ದಾರೆ.

ಕಂಗನಾ ಅವರಿಗೆ ಭದ್ರತೆ ನೀಡುವ ವಿಷಯವನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿತು. ಇದಕ್ಕೆ ಧನ್ಯವಾದ ಹೇಳಿರುವ ಕಂಗನಾ, ‘ನನ್ನ ದೇಶಭಕ್ತಿಯನ್ನು ಯಾರೂ ಹೊಸಕಿ ಹಾಕಲು ಸಾಧ್ಯವಿಲ್ಲ. ನನಗೆ ಭದ್ರತೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

ಕಂಗನಾ ಅವರು ಈಗ ಹಿಮಾಚಲದ ತವರೂರಿನಲ್ಲಿದ್ದು, ಸೆ.9ರಂದು ಮುಂಬೈಗೆ ಭೇಟಿ ನೀಡುವವರಿದ್ದಾರೆ. ಆದರೆ ಶಿವಸೇನೆಯಿಂದ ಬೆದರಿಕೆ ಇರುವ ಕಾರಣ ಭದ್ರತೆ ಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಿದ್ದರು. ಈ ನಡುವೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಮಾಚಲ ಮುಖ್ಯಮಂತ್ರಿ ಜೈರಾಂ ಠಾಕೂರ್‌, ‘ರಾಜ್ಯವು ಕಂಗನಾ ಅವರ ತವರೂರಿನ ನಿವಾಸ ಹಾಗೂ ಅವರ ತಂದೆ-ತಾಯಿಗೆ 24 ಗಂಟೆಯೂ ಭದ್ರತೆ ನೀಡಲಿದೆ’ ಎಂದಿದ್ದಾರೆ.

 

ಬಿಜೆಪಿ ಮುಖಂಡ ರಾಮ ಕದಂ ಅವರು, ‘ಬಾಲಿವುಡ್‌ ಡ್ರಗ್ಸ್‌ ಮಾಫಿಯಾ ಬಯಲಿಗೆಳೆದಿರುವ ಕಂಗನಾ ಅವರಿಗೆ ಮಹಾರಾಷ್ಟ್ರ ಸರ್ಕಾರ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಕಂಗನಾ ಪ್ರತಿಕ್ರಿಯಿಸಿ, ‘ಮುಂಬೈ ಪೊಲೀಸರು ಮೂವಿ ಮಾಫಿಯಾಗಿಂತ ಮಿಗಿಲು. ನನಗೆ ಹಿಮಾಚಲ ಅಥವಾ ಕೇಂದ್ರದ ಭದ್ರತೆ ಬೇಕು’ ಎಂದಿದ್ದರು.

'ಮುಂಬೈಗೆ ಬಂದಿಳಿಯುತ್ತಿದ್ದೇನೆ, ಧಮ್ ಇದ್ರೆ ತಡೀರಿ'

ಇದರಿಂದ ಕ್ರುದ್ಧರಾಗಿದ್ದ ಶಿವಸೇನೆ ನಾಯಕ ಸಂಜಯ ರಾವುತ್‌, ‘ಕಂಗನಾ ಅವರು ಮುಂಬೈಗೆ ಬರಬಾರದು ಎಂದು ಕೋರುತ್ತೇವೆ. ಅವರ ಹೇಳಿಕೆ ಮುಂಬೈ ಪೊಲೀಸರಿಗೆ ಅವಮಾನ’ ಎಂದಿದ್ದರು. ಇದಕ್ಕೆ ಕಂಗನಾ ಪ್ರತಿಕ್ರಿಯಿಸಿ, ‘ಮುಂಬೈ ಇಂದು ಪಾಕ್‌ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ.’ ಎಂದು ರಾವುತ್‌ಗೆ ತಿರುಗೇಟು ನೀಡಿದ್ದರು. ಅಂದಿನಿಂದ ಕಂಗನಾ ವಿರುದ್ಧ ಶಿವಸೈನಿಕರು ಪ್ರತಿಭಟನೆ ಆರಂಭಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?