ಹಿಂದೂ ಹೆಸರಿನಲ್ಲಿ ಬಾಲಿವುಡ್‌ನಲ್ಲಿ ಹಣ ಮಾಡಿದ: ದಿಲೀಪ್ ಬಗ್ಗೆ ಬಿಜೆಪಿ ಮುಖಂಡ ಟೀಕೆ

Published : Jul 08, 2021, 01:58 PM IST
ಹಿಂದೂ ಹೆಸರಿನಲ್ಲಿ ಬಾಲಿವುಡ್‌ನಲ್ಲಿ ಹಣ ಮಾಡಿದ: ದಿಲೀಪ್ ಬಗ್ಗೆ ಬಿಜೆಪಿ ಮುಖಂಡ ಟೀಕೆ

ಸಾರಾಂಶ

ಬಾಲಿವುಡ್ ಹಿರಿಯ ನಟನ ಬಗ್ಗೆ ಬಿಜೆಪಿ ಮುಖಂಡ ಟೀಕೆ ಹಿಂದೂ ಹೆಸರಿನಲ್ಲಿ ಬಾಲಿವುಡ್‌ನಲ್ಲಿ ಹಣ ಮಾಡಿದ ಎಂದ ಮುಖಂಡ 

ಮುಂಬೈ(ಜು.08): ಪ್ರಸಿದ್ಧ ನಟ ದಿಲೀಪ್ ಕುಮಾರ್ ತಮ್ಮ 21 ನೇ ವಯಸ್ಸಿನಲ್ಲಿ 2021 ರ ಜುಲೈ 7 ರಂದು ನಿಧನರಾದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳು ದಿವಂಗತ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಬಿಜೆಪಿ ಹರಿಯಾಣದ ಐಟಿ ಮತ್ತು ಸೋಷಿಯಲ್ ಮೀಡಿಯಾದ ರಾಜ್ಯ ಮುಖ್ಯಸ್ಥ ರಾಜಕಾರಣಿ ಅರುಣ್ ಯಾದವ್ ಅವರು ದಿಲೀಪ್ ಕುಮಾರ್ ಸಾವಿನ ಬಗ್ಗೆ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಪಾಕ್‌ ಗ್ರೀನ್‌ ಸಿಗ್ನಲ್ ಕೊಟ್ರೂ ನನಸಾಗಲೇ ಇಲ್ಲ ದಿಲೀಪ್ ಕುಮಾರ್ ಆ ಆಸೆ!...

ಚಲನಚಿತ್ರ ಜಗತ್ತಿನಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಣ ಸಂಪಾದಿಸಿದ ಮೊಹಮ್ಮದ್ ಯೂಸುಫ್ ಖಾನ್ (ದಿಲೀಪ್ ಕುಮಾರ್) ಅವರ ಸಾವು ಭಾರತೀಯ ಚಲನಚಿತ್ರೋದ್ಯಮಕ್ಕೆ ಭರಿಸಲಾಗದ ನಷ್ಟ! ದುಃಖಿತ ಕುಟುಂಬಕ್ಕೆ ಆಳವಾದ ಸಂತಾಪ! ಎಂದು ಟೀಕಿಸಿದ್ದಾರೆ.

ನರೇಂದ್ರ ಮೋದಿ ಅವರು ದಿಲೀಪ್ ಕುಮಾರ್ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ, ದಿಲೀಪ್ ಕುಮಾರ್ ಜಿ ಅವರನ್ನು ಸಿನಿಮೀಯ ದಂತಕಥೆ ಎಂದು ನೆನಪಿಸಿಕೊಳ್ಳಲಾಗುವುದು. ತಲೆಮಾರುಗಳ ಪ್ರೇಕ್ಷಕರು ಅವರ ನಟನೆ ಮೆಚ್ಚಿದರು. ಅವರ ನಿಧನ ನಮ್ಮ ಸಾಂಸ್ಕೃತಿಕ ಜಗತ್ತಿಗೆ ನಷ್ಟವಾಗಿದೆ ಎಂದು ಟ್ವೀಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?