Aryan Drugs Case: ಅ.30ರ ತನಕ ಆರ್ಯನ್‌ಗೆ ಜೈಲು, ಬಾಂಬೆ ಹೈಕೋರ್ಟ್‌ಗೆ ಅರ್ಜಿ

By Suvarna NewsFirst Published Oct 22, 2021, 9:33 AM IST
Highlights
  • ಶಾರೂಖ್ ಖಾನ್ ಮಗನಿಗಿಲ್ಲ ಬಿಡುಗಡೆ ಭಾಗ್ಯ
  • ಮತ್ತೊಮ್ಮೆ ಸ್ಟಾರ್ ಕಿಡ್‌ ಆರ್ಯನ್‌ಗೆ ಜಾಮೀನು ನಿರಾಕರಣೆ
  • ತೀರ್ಪು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಮುಂಬೈ(ಅ.22): ಮುಂಬೈ ಸ್ಪೆಷಲ್ ಕೋರ್ಟ್ ಬಾಲಿವುಡ್(Bollywood) ನಟ ಶಾರೂಖ್ ಖಾನ್(Shah Rukh Khan) ಮಗ ಆರ್ಯನ್ ಖಾನ್ ಹಾಗೂ ಇನ್ನಿಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿ ಎನ್‌ಸಿಬಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್‌ಗೆ ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಪ್ರತಿ ಬಾರಿಯೂ ರಿಜೆಕ್ಟ್ ಆಗುತ್ತಲೇ ಇದೆ.

ಎನ್‌ಸಿಬಿ ಕೇಸ್‌ಗಳ ತೀರ್ಪು ನೀಡುವ ವಿಶೇಷ ನ್ಯಾಯಾಲಯದ ಜಡ್ಜ್ ವಿವಿ ಪಾಟೀಲ್ ಆರ್ಯನ್ ಖಾನ್(Aryan Khan) ಜಾಮೀನು ಅರ್ಜಿ ರಿಜೆಕ್ಟ್ ಮಾಡಿದ್ದಾರೆ. ಹಾಗೆಯೇ ಆರ್ಯನ್ ಗೆಳೆಯ ಅರ್ಬಾಝ್ ಮರ್ಚೆಂಟ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾಗೂ ಜಾಮೀನು ನಿರಾಕರಿಸಲಾಗಿದೆ. ಆರ್ಯನ್ ಖಾನ್ ಲಾಯರ್ ಅಮಿತ್ ದೇಸಾಯಿ ತೀರ್ಪನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಮಗನ ಭೇಟಿ ನಂತರ ಫ್ಯಾನ್ಸ್‌ಗೆ ಕೈಮುಗಿದು ವಿಶ್ ಮಾಡಿದ ಶಾರೂಖ್

ನಾವು ಮೊದಲು ಆದೇಶವನ್ನು ಓದಬೇಕು. ನಮಗೆ ಇನ್ನೂ ಆದೇಶ ಸಿಕ್ಕಿಲ್ಲ. ನಾವು ಆರ್ಡರ್ ಪಡೆದ ನಂತರ ನಾವು ಬಾಂಬೆ ಹೈಕೋರ್ಟ್‌ಗೆ ಹೋಗುತ್ತೇವೆ ಎಂದು ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ದೇಸಾಯಿ ಹೇಳಿದ್ದಾರೆ. ಒಂದು ಗಂಟೆಯೊಳಗೆ ಆರ್ಯನ್ ಅವರ ವಕೀಲರು ಬಾಂಬೆ ಹೈಕೋರ್ಟ್‌ಗೆ(Bombay Highcourt) ಹೋದರು. ಆದರೆ ನ್ಯಾಯಾಂಗ ಮಂಡಳಿಯು ಡಿಸ್ಚಾರ್ಜ್ ಆಗಿದ್ದರಿಂದ ಬಹುತೇಕ ಇದು ಮತ್ತೊಂದು ದಿನಕ್ಕೆ ಮುಂದೂಡಲ್ಪಡುತ್ತದೆ.

ಎನ್‌ಸಿಬಿಯ(NCB) ವಲಯ ಮುಖ್ಯಸ್ಥ ಸಮೀರ್ ವಾಂಖೇಡೆ(Sameer Wankhede) ಪ್ರಕರಣದ ಮುಂದಾಳತ್ವ ವಹಿಸುವುದು ಮಾತ್ರವಲ್ಲದೆ ತನಿಖೆಗೆ ಸಂಬಂಧಿಸಿದ ವಿವಿಧ ಆರೋಪಗಳಿಗೆ ಗುರಿಯಾಗಿದ್ದರು. ಈ ಸುದ್ದಿಗೆ ಪ್ರತಿಕ್ರಿಯಿಸಿದ ಅವರು ಸತ್ಯಮೇವ್ ಜಯತೆ. ನನ್ನ ವಿರೋಧಿಗಳು ಏನನ್ನಾದರೂ ಹೇಳಲಿ. ನಾನು ಸುಮ್ಮನೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

Aryan Drug Case: ವಿಚಾರಣೆಗೆ NCB ಮುಂದೆ ಹಾಜರಾದ ನಟಿ ಅನನ್ಯಾ

ಆರ್ಯನ್ ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದು, ಆತನ 14 ದಿನಗಳ ನ್ಯಾಯಾಂಗ ಬಂಧನ ಗುರುವಾರ ಕೊನೆಗೊಳ್ಳಲಿತ್ತು. ಆರ್ಯನ್ ಖಾನ್, ಮರ್ಚೆಂಟ್ ಮತ್ತು ಧಮೇಚಾ ಅವರನ್ನು ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB) ಅಕ್ಟೋಬರ್ 3 ರಂದು ಬಂಧಿಸಿದೆ. ಸದ್ಯ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರ್ಯನ್ ಖಾನ್ ಮತ್ತು ಮರ್ಚೆಂಟ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ, ಧಮೇಚಾ ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿದ್ದಾರೆ.

ಆರ್ಯನ್ ಜಾಮೀನಿಗಾಗಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಬುಧವಾರ ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಅವರ ವಕೀಲ ಸತೀಶ್ ಮಾನ್‌ಶಿಂಧೆ ಅವರು ಶುಕ್ರವಾರದ ತುರ್ತು ವಿಚಾರಣೆಗೆ ಕೋರಿ ನ್ಯಾಯಮೂರ್ತಿ ಎನ್ ಡಬ್ಲ್ಯು ಸಾಂಬ್ರೆ ಅವರ ಏಕೈಕ ಪೀಠದ ಮುಂದೆ ಮನವಿಯನ್ನು ಪ್ರಸ್ತಾಪಿಸಿದ್ದಾರೆ. ಆರ್ಯನ್ ಅವರ ಜಾಮೀನು ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಗುರುವಾರ ಅಕ್ಟೋಬರ್ 26 ರವರೆಗೆ ಮುಂದೂಡಿದೆ.

click me!