
ಮುಂದಿನ ವಿಚಾರಣೆಗೆ ಗೈರಾದರೆ ನಿಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗುತ್ತದೆ ಎಂದು ಕೋರ್ಟ್ ಕಂಗನಾ ರಣಾವತ್ಗೆ ಎಚ್ಚರಿಸಿದೆ. ಸಾಹಿತಿ, ಕವಿ ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ದಾಖಲಿಸಿದ ಮಾನನಷ್ಟ ಕೇಸ್ ವಿಚಾರಣೆ ಮಾಡಿದ ಕೋರ್ಟ್ ನಟಿಗೆ ಬಂಧನದ ಬಗ್ಗೆ ಎಚ್ಚರಿಕೆ ನೀಡಿದೆ. ಕಂಗನಾ ರಣಾವತ್ಗೆ ಕೊರೋನಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು ಆಕೆಯ ಆರೋಗ್ಯ ಚೆನ್ನಾಗಿಲ್ಲ ಎಂದಿರುವ ನಟಿಯ ವಕೀಲ ರಿಝ್ವಾನ್ ಸಿದ್ಧಿಕಿ ಅವರು ಇದಕ್ಕೆ ಸಂಬಂಧಿಸಿದ ಡಾಕ್ಟರ್ ಸರ್ಟಿಫಿಕೇಟ್ಗಳನ್ನು ಸಲ್ಲಿಸಿದ್ದಾರೆ.
ನಟಿ ತನ್ನ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಪ್ರಯಾಣಿಸುತ್ತಿದ್ದರು. ಬಹಳಷ್ಟು ಜನರನ್ನು ಭೇಟಿ ಮಾಡುತ್ತಿದ್ದರು. ಆದ್ದರಿಂದ ಅವರು ಬಹುಶಃ ಕೋವಿಡ್ಗೆ ತುತ್ತಾಗಿದ್ದಾರೆ. ಅವರು ಪರೀಕ್ಷೆಗೆ ಒಳಗಾಗಬೇಕು. ನಾನು ಬೇರೆ ದಿನಾಂಕವನ್ನು ಬಯಸುತ್ತಿದ್ದೇನೆ ಎಂದು ಸಿದ್ದಿಕಿ ನ್ಯಾಯಾಲಯಕ್ಕೆ ಬೇಡಿಕೆ ಇಟ್ಟಿದ್ದಾರೆ.
ಟ್ವಿಟರ್ನಲ್ಲಿದ್ದಾಗ ಪ್ರತಿ ದಿನ ಕಂಗನಾ ವಿರುದ್ಧ 200 FIR ದಾಖಲು
ನ್ಯಾಯವಾದಿ ಜಯ್ ಭಾನುಶಾಲಿ, ಪತ್ನಿ ಶಬಾನಾ ಅಜ್ಮಿ ಜೊತೆಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಅಖ್ತರ್ ಪರವಾಗಿ ವಾದ ಮಂಡಿಸಿದ್ದಾರೆ. ರಣಾವತ್ ಮನವಿಯನ್ನು ವಿರೋಧಿಸಿ, ಅವರು ಪ್ರಕರಣವನ್ನು ವಿನಾಕಾರಣ ವಿಸ್ತರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಖ್ತರ್ ಬಹುತೇಕ ಎಲ್ಲಾ ವಿಚಾರಣೆಗೆ ಹಾಜರಾಗಿದ್ದಾಗ, ಕಂಗನಾ ರಣಾವತ್ ಎಂಟು ಬಾರಿ ವಿಚಾರಣೆಗಳನ್ನು ತಪ್ಪಿಸಿಕೊಂಡಿದ್ದಾರೆ.
ಭಾನುಶಾಲಿ ಅವರು ರಣಾವತ್ ಅವರಿಗೆ ಉನ್ನತ ನ್ಯಾಯಾಲಯಗಳಿಂದ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಸಲ್ಲಿಸಿದ್ದಾರೆ. ಆ ಮೂರು-ನಾಲ್ಕು ವಿಚಾರಣೆಗಳಿಗಾಗಿ ನ್ಯಾಯಾಲಯವು ಕಾರ್ಯನಿರ್ವಹಿಸಿಲ್ಲ ಎಂದು ಸಿದ್ದಿಕಿ ಹೇಳಿದ್ದಾರೆ. ಕಂಗನಾ ರಣಾವತ್ ಕೋವಿಡ್ -19 ಪರೀಕ್ಷಾ ಫಲಿತಾಂಶವು ಪಾಸಿಟಿವ್ ಇರದಿದ್ದರೆ ಮುಂದಿನ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20 ಕ್ಕೆ ನಿಗದಿಪಡಿಸಿದೆ.
ರಣಾವತ್ ವಿರುದ್ಧ ವಾರೆಂಟ್ ಹೊರಡಿಸುವಂತೆ ಕೋರಿ ಭಾನುಶಾಲಿ ಸಲ್ಲಿಸಿದ್ದ ಅರ್ಜಿಯನ್ನು ಇಟ್ಟುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಅವರು ಹಾಜರಾಗಲು ವಿಫಲವಾದರೆ, ಅರೆಸ್ಟ್ ವಾರಂಟ್ ಹೊರಡಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.