ಕೆಬಿಸಿಯಲ್ಲಿ ಶಿವಾಜಿಗೆ ಅವಮಾನ: ಕ್ಷಮೆಯಾಚಿಸಿದ ಅಮಿತಾಬ್, ಸೋನಿ ಟಿವಿ!

Published : Nov 09, 2019, 12:56 PM ISTUpdated : Nov 09, 2019, 04:25 PM IST
ಕೆಬಿಸಿಯಲ್ಲಿ ಶಿವಾಜಿಗೆ ಅವಮಾನ: ಕ್ಷಮೆಯಾಚಿಸಿದ ಅಮಿತಾಬ್, ಸೋನಿ ಟಿವಿ!

ಸಾರಾಂಶ

ಕೆಬಿಸಿಯಲ್ಲಿ ಶಿವಾಜಿಗೆ ಅವಮಾನ | ಅಮಿತಾಬ್, ಸೋನಿ ಟಿವಿ ವಿರುದ್ಧ ಮರಾಠಿಗರ ಆಕ್ರೋಶ | #Boycott_KBC_SonyTV ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. 

ಮುಂಬೈ (ನ.09): ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ‌್ಯಕ್ರ ಮದ ವಿರುದ್ಧ ಮಹಾರಾಷ್ಟ್ರದಲ್ಲಿ ಭಾರೀ ಟೀಕೆ ಕೇಳಿ ಬಂದಿದೆ. 

ಇತ್ತೀಚೆಗೆ ಕಾರ‌್ಯಕ್ರಮದ ವೇಳೆ ಬಚ್ಚನ್ ಅವರು ಸ್ಪರ್ಧಿಯೊಬ್ಬರಿಗೆ ಸಾಮ್ರಾಟ್ ಔರಂಗಜೇಬ್‌ರ ಸಮಕಾಲೀನ ಅರಸರು ಯಾರು ಎಂಬ ಪ್ರಶ್ನೆಗೆ ಆಯ್ಕೆಗಳಾಗಿ ಮಹಾರಾಣಾ ಪ್ರತಾಪ್, ರಾಣಾ ಸಂಗಾ, ಮಹಾರಾಜ ರಣಜೀತ್ ಸಿಂಗ್ ಮತ್ತು ಶಿವಾಜಿ ಎಂದು ನೀಡಿದ್ದರು. ಇತಿಹಾಸದಲ್ಲಿ ಕ್ರೂರಿ ಎಂದೇ ಖ್ಯಾತನಾದ ಔರಂಗಜೇಬ್‌ನನ್ನು ಸಾಮ್ರಾಟ್ ಎಂದು, ಮರಾಠ ದೊರೆಯನ್ನು ಕೇವಲ ‘ಶಿವಾಜಿ’ ಎಂದು ಕರೆದಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

#Boycott_KBC_SonyTV ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. 

ಕೆಬಿಸಿ ರನ್ನರ್ ಸಿದ್ಧಾರ್ಥ್ ಬಸು ಟ್ವೀಟನ್ನು ರೀ ಟ್ವೀಟ್ ಮಾಡಿ, ಯಾರಿಗೂ ಅಗೌರವ ತೋರುವುದು ನಮ್ಮ ಉದ್ದೇಶವಾಗಿರಲಿಲ್ಲ. ಅದಾಗ್ಯೂ ಯಾರ ಭಾವನೆಗಾದ್ರೂ ಧಕ್ಕೆ ಆಗಿದ್ರೆ ಕ್ಷಮೆಯಾಚಿಸುತ್ತೇನೆ' ಎಂದು ಅಮಿತಾಬ್ ಹೇಳಿದ್ದಾರೆ. 

 

ಸೋನಿ ಟಿವಿಯೂ ಕೂಡಾ ಕ್ಷಮೆಯಾಚಿಸಿದೆ. ಛತ್ರಪತಿ ಶಿವಾಜಿಯವರ ರೆಫರೆನ್ಸ್ ಕೊಟ್ಟಿದ್ದು ಸರಿಯಾಗಿರಲಿಲ್ಲ. ಅಜಾಗರೂಕತೆಯಿಂದ ಹೀಗಾಗಿದೆ. ಈ ಅಚಾತುರ್ಯಕ್ಕಾಗಿ ವಿಷಾದಿಸುತ್ತೇವೆ. ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ. 

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!