ತಿರುಪತಿ ತಿಮ್ಮಪ್ಪನಿಗೆ 1.23 ಕೋಟಿ ರೂಪಾಯಿ ದಾನ ನೀಡಿದ ಬಳ್ಳಾರಿ ಕಂಪನಿ!

Published : Mar 19, 2025, 01:13 PM ISTUpdated : Mar 19, 2025, 01:14 PM IST
ತಿರುಪತಿ ತಿಮ್ಮಪ್ಪನಿಗೆ 1.23 ಕೋಟಿ ರೂಪಾಯಿ ದಾನ ನೀಡಿದ ಬಳ್ಳಾರಿ ಕಂಪನಿ!

ಸಾರಾಂಶ

ಬಳ್ಳಾರಿ ಮೂಲದ ಶ್ರೀನಿವಾಸ ಕನ್‌ಸ್ಟ್ರಕ್ಷನ್ ಕಂಪನಿಯು ತಿರುಪತಿ ತಿಮ್ಮಪ್ಪನಿಗೆ 1.23 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಹಣವನ್ನು ಅನ್ನಪ್ರಸಾದಂ, ಪ್ರಾಣದಾನ ಮತ್ತು ವಿದ್ಯಾದಾನಂ ಟ್ರಸ್ಟ್‌ಗಳಿಗೆ ಬಳಸಲು ಕಂಪನಿ ಮನವಿ ಮಾಡಿದೆ.

ಬೆಂಗಳೂರು (ಮಾ.19): ಬಳ್ಳಾರಿ ಮೂಲದ ಕಂಪನಿಯೊಂದು ಮಂಗಳವಾರ ತಿರುಪತಿ ತಿಮ್ಮಪ್ಪನಿಗೆ ದಾಖಲೆಯ 1.23 ಕೋಟಿ ರೂಪಾಯಿ ಹಣವನ್ನು ದಾನವಾಗಿ ನೀಡಿದೆ. ಈ ಬಗ್ಗೆ ಟಿಟಿಡಿ ಕೂಡ ಮಾಹಿತಿ ಹಂಚಿಕೊಂಡಿದೆ. ದಾನವಾಗಿ ದೊಡ್ಡ ಮೊತ್ತವನ್ನು ನೀಡಿರುವ ಕಂಪನಿ, ಈ ಹಣವನ್ನು ಯಾವುದಕ್ಕೆ ವಿನಿಯೋಗ ಮಾಡಿಕೊಳ್ಳಬೇಕು ಅನ್ನೋ ಮಾಹಿತಿಯನ್ನೂ ನೀಡಿದೆ. ಪ್ರತಿ ವರ್ಷ ದತ್ತ- ದಾನಗಳಿಂದಲೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕೋಟ್ಯಂತರ ರೂಪಾಯಿ ಹಣ ಸಂಗ್ರಹಣೆ ಮಾಡುತ್ತದೆ. ಅದರೊಂದಿಗೆ ಕಾಣಿಕೆ ಹಣ ಕೂಡ ಭರಪೂರವಾಗಿ ಬರುವ ಕಾರಣ ವಿಶ್ವದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ.

ಮಂಗಳವಾರ ಕರ್ನಾಟಕದ ಬಳ್ಳಾರಿಯ ಶ್ರೀನಿವಾಸ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ₹1.23 ಕೋಟಿಗೂ ಹೆಚ್ಚು ದೇಣಿಗೆ ನೀಡಿದೆ. ಕಂಪನಿಯ ಪ್ರತಿನಿಧಿಗಳು ಟಿಟಿಡಿ ಹೆಚ್ಚುವರಿ ಇಒ ಚಿ. ವೆಂಕಯ್ಯ ಚೌಧರಿ ಅವರಿಗೆ ಅವರ ಶಿಬಿರ ಕಚೇರಿಯಲ್ಲಿ ಔಪಚಾರಿಕವಾಗಿ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಹಸ್ತಾಂತರಿಸಿದರು ಮತ್ತು ಎಸ್‌ವಿ ಅನ್ನಪ್ರಸಾದಂ ಟ್ರಸ್ಟ್ ಚಟುವಟಿಕೆಗಳಿಗೆ ₹1,01,11,111 ಮತ್ತು ಎಸ್‌ವಿ ಪ್ರಾಣದಾನ ಮತ್ತು ವಿದ್ಯಾದಾನಂ ಟ್ರಸ್ಟ್‌ಗಳ ಚಟುವಟಿಕೆಗಳಿಗೆ ತಲಾ ₹11,11,111 ಬಳಸುವಂತೆ ವಿನಂತಿ ಮಾಡಿದ್ದಾರೆ.

ತಿರುಪತಿಯಲ್ಲಿ ಹೊಸ ನಿಯಮ: ಇನ್ಮುಂದೆ ದರ್ಶನ, ಸೇವೆ, ಟಿಕೆಟ್ ಬುಕ್ಕಿಂಗ್‌ಗೆ ಈ ದೃಢೀಕರಣ ಕಡ್ಡಾಯ!

2009ರಲ್ಲಿ ಈ ಕಂಪನಿ ಆರಂಭವಾಗಿದ್ದು ಯಾರ್ಲಗಡ್ಡ ವೆಂಕಟಶಿವ ರಾಮಕೃಷ್ಣ ಹಾಗೂ ಯಾರ್ಲಗುಡ್ಡ ಪಿಚ್ಚೇಶ್ವರ ರಾವ್‌ ಕಂಪನಿಯ ನಿರ್ದೇಶಕರಾಗಿದ್ದಾರೆ. ಬಳ್ಳಾರಿಯ ತಾಲೂರ್‌ ರಸ್ತೆಯಲ್ಲಿ ಕಂಪನಿ ಪ್ರಧಾನ ಕಚೇರಿ ಹೊಂದಿದೆ.

ತಿರುಪತಿ ದರ್ಶನಕ್ಕೆ ತೆರಳುವ ಭಕ್ತರೇ ಗಮನಿಸಿ, ದರ್ಶನ ಟಿಕೆಟ್, ರೂಂ ನಿಯಮದಲ್ಲಿ ಬದಲಾವಣೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್