ಕೊರೋನಾದಿಂದ ಆರ್ಥಿಕತೆ ರಕ್ಷಿಸುವ ಹೊಣೆ ಇದೀಗ ಕನ್ನಡಿಗ ಸೇಠ್‌ ಹೆಗಲಿಗೆ!

Published : Apr 17, 2021, 01:20 PM ISTUpdated : Apr 17, 2021, 01:45 PM IST
ಕೊರೋನಾದಿಂದ ಆರ್ಥಿಕತೆ ರಕ್ಷಿಸುವ ಹೊಣೆ ಇದೀಗ ಕನ್ನಡಿಗ ಸೇಠ್‌ ಹೆಗಲಿಗೆ!

ಸಾರಾಂಶ

ಕೊರೋನಾದಿಂದ ಆರ್ಥಿಕತೆ ರಕ್ಷಿಸುವ ಹೊಣೆ ಇದೀಗ ಕನ್ನಡಿಗ ಸೇಠ್‌ ಹೆಗಲಿಗೆ| ಆರ್ಥಿಕ ಸಚಿವಾಲಯ ಮುಖ್ಯ ಕಾರ್ಯದರ್ಶಿಯಾಗಿ ಪದಗ್ರಹಣ

ನವದೆಹಲಿ(ಏ.17): ಕರ್ನಾಟಕ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಅಜಯ್‌ ಸೇಠ್‌ ಅವರು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಕೊರೋನಾದ ಮೊದಲ ಅಲೆಯಿಂದ ಸುಧಾರಿಸಿಕೊಳ್ಳುತ್ತಿರುವ ಆರ್ಥಿಕತೆಗೆ 2ನೇ ಅಲೆಯ ಸೋಂಕಿನ ತೀವ್ರತೆಯಿಂದ ಕುಸಿತದ ಭೀತಿ ಎದುರಾಗಿರುವಾಗಲೇ ಅಜಯ್‌ ಸೇಠ್‌ ಪದಗ್ರಹಣ ಮಾಡಿದ್ದಾರೆ. ತನ್ಮೂಲಕ ಆರ್ಥಿಕ ಸಚಿವಾಲಯದ ಕಂದಾಯ ಕಾರ್ಯದರ್ಶಿಯಾಗಿ ವರ್ಗಾವಣೆಯಾದ ತರುಣ್‌ ಬಜಾಜ್‌ ಅವರಿಂದ ತೆರವಾದ ಸ್ಥಾನವನ್ನು ಸೇಠ್‌ ಅಲಂಕರಿಸಿದಂತಾಗಿದೆ.

1987ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸೇಠ್‌ ಅವರು ಈ ಹಿಂದೆ ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕಾಗಿಯೂ ಸೇವೆ ಸಲ್ಲಿಸಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!