ಉಪ್ಪು ತಿಂದ ಮನೆಗೆ ದ್ರೋಹ: ಉದ್ಯೋಗಿ ಮಾಡಿದ್ದೇನು ಗೊತ್ತಾ?

Published : Aug 21, 2018, 04:39 PM ISTUpdated : Sep 09, 2018, 08:44 PM IST
ಉಪ್ಪು ತಿಂದ ಮನೆಗೆ ದ್ರೋಹ: ಉದ್ಯೋಗಿ ಮಾಡಿದ್ದೇನು ಗೊತ್ತಾ?

ಸಾರಾಂಶ

ಕಂಪನಿ ಮಹತ್ವದ ಮಾಹಿತಿ ಕದ್ದ ಉದ್ಯೋಗಿ! 50 ಸಾವಿರ ಡಾಲರ್ ಗೆ ಬೇಡಿಕೆ ಇಟ್ಟ ಭೂಪ! ಬೇರೆ ಕಂಪನಿಗಳಿಗೆ ಮಾಹಿತಿ ಮಾರಾಟದ ಬೆದರಿಕೆ! ಪೊಲೀಸರ ವಶದಲ್ಲಿ ಆರೋಪಿ ಅರವಿಂದ್ ಈಶ್ವರ್‌ಲಾಲ್‌

ಬೆಂಗಳೂರು(ಆ.21): ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಹತ್ವದ ಮಾಹಿತಿಗೆ ಕನ್ನ ಹಾಕಿರುವ ಮಾಜಿ ಸಿಬ್ಬಂದಿಯೋರ್ವ, ದಾಖಲೆ ಬಿಡುಗಡೆ ಮಾಡದಿರಲು 50 ಸಾವಿರ ಡಾಲರ್ ಬೇಡಿಕೆ ಇಟ್ಟಿರುವುದಾಗಿ ಹೇಳಲಾಗಿದೆ.

ಅರವಿಂದ್ ಈಶ್ವರ್‌ಲಾಲ್‌ ಎಂಬ ಆರೋಪಿ ತಾನು ಕೆಲಸ ಮಾಡುತ್ತಿದ್ದ ಪಿಲ್ವೋ ಕಮ್ಯೂನಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷ ವೇಣುಮಾಧವ್ ಇಂದ್ರುತಿ ಅವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ತನ್ನ ಬಳಿ ಕಂಪನಿಯ ಹಲವು ರಹಸ್ಯ ಮಾಹಿತಿಗಳಿದ್ದು, ಅವುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುವುದಾಗಿ ಅರವಿಂದ್ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.


ಕಂಪನಿಯ ಸಿಬ್ಬಂದಿಗೆ ಇ-ಮೇಲ್ ಮಾಡಿ ಕಂಪನಿಗೆ ಸಂಬಂಧಪಟ್ಟ ಕೆಲ ವಿಚಾರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದ ಅರವಿಂದ್, ಹೀಗೆ ಮಾಡದಿರಲು ತನಗೆ 35 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಳಿಕ ಕಂಪನಿ ಸಿಇಒ ವೆಂಕಟೇಶ್ ಅವರಿಗೂ ಮೇಲ್ ಮಾಡಿ ಬೆದರಿಕೆ ಹಾಕಿದ್ದ ಅರವಿಂದ್, ತನಗೆ ಹಣ ಕೊಡದಿದ್ದರೆ ಈ ರಹಸ್ಯ ಮಾಹಿತಿಗಳನ್ನು ಗ್ರಾಹಕರಿಗೆ ಮತ್ತು ಇತರ ಕಂಪನಿಗಳಿಗೆ ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ.

ಸದ್ಯ ಆರೋಪಿ ಅರವಿಂದ್ ಈಶ್ವರ್‌ಲಾಲ್‌ ನನ್ನು ವಶಕ್ಕೆ ಪಡೆದಿರುವ ಸೈಬರ್ ಪೊಲೀಸರು, ಆತನಿಂದ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!