PFI ಸಂಘಟನೆಗೆ ನೀಡಿದ್ದ ಸೌಲಭ್ಯ ರದ್ದು; ಆದಾಯ ತೆರಿಗೆ ಇಲಾಖೆ ಮಹತ್ವದ ನಿರ್ಧಾರ!

Published : Jun 15, 2021, 06:10 PM IST
PFI ಸಂಘಟನೆಗೆ ನೀಡಿದ್ದ ಸೌಲಭ್ಯ ರದ್ದು; ಆದಾಯ ತೆರಿಗೆ ಇಲಾಖೆ ಮಹತ್ವದ ನಿರ್ಧಾರ!

ಸಾರಾಂಶ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ನೀಡಿದ್ದ ಸೌಲಭ್ಯ ರದ್ದು ಮಹತ್ವದ ನಿರ್ಧಾರ ತೆಗೆದುಕೊಂಡ ಆದಾಯ ತೆರಿಗೆ ಇಲಾಖೆ ವಿದೇಶದಿಂದ ದೇಣಿಗೆ ಸಂಗ್ರಹಕ್ಕೆ ಬಿತ್ತು ಬ್ರೇಕ್  

ನವದೆಹಲಿ(ಜೂ.15): ಭಾರತೀಯ ಆದಾಯ ತೆರಿಗೆ ಇಲಾಖೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಗೆ ನೀಡಿದ್ದ ಕೆಲ ಸೌಲಭ್ಯಗಳನ್ನು ಆದಾಯ ತೆರಿಗೆ ಇಲಾಖೆ ರದ್ದು ಪಡಿಸಿದೆ.

ಹಿಂದೂ ನಾಯಕರ ಹತ್ಯೆಗೆ PFI ಸದಸ್ಯರ ಸಂಚು!..

ನಿಗದಿತ ಸಮುದಾಯದ ನಿಯಮ ಉಲ್ಲಂಘನೆ ಸೆಕ್ಷನ್ 13(1)(b) ನಿಯಮ ಉಲ್ಲಂಘನೆ, ಭಯೋತ್ಪಾದನೆ ಚುಟವಟಿಕೆಯಲ್ಲಿ ಭಾಗಿ, ಮನಿ ಲಾಂಡರಿಂಗ್ ಸೇರಿದಂತೆ ಹಲವು ನಿಯಮಗಳನ್ನು PFI ಸಂಘಟನೆ ಉಲ್ಲಂಘಿಸಿದೆ. PFI ಟ್ರಸ್ಟ್ ಹೇಳಿರುವ ದ್ಯೇಯೋದ್ದೇಶದಲ್ಲಿ ನಡೆಯುತ್ತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸೆಕ್ಷನ್ 12AA(3) ಅಡಿಯಲ್ಲಿ ಸೌಲಭ್ಯವನ್ನು ರದ್ದು ಮಾಡಿದೆ. 

PFI ಸಂಘಟನೆಗೆ ನೀಡಲಾಗಿದ್ದ 80G ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ರದ್ದು ಮಾಡಿದೆ. ಇದರಿಂದ PFI ಸಂಘಟನೆ ವಿದೇಶಗಳಿಂದ ದೇಣಿಗೆ ಸಂಗ್ರಹ ಮಾಡುವಂತಿಲ್ಲ.  ಇದರ ಜೊತೆಗೆ ಸಂಘಟನೆಗೆ ನೀಡಿದ್ದ ಕೆಲ ಆದಾಯ ತೆರಿಗೆ ಸೌಲಭ್ಯಗಳು ರದ್ದಾಗಿದೆ.  

ಸಿಎಎ ಗದ್ದಲಕ್ಕೆ ಹಣ ಪೂರೈಕೆ: ಪಿಎಫ್‌ಐಗೆ ಇ.ಡಿ ದಾಳಿ ಬಿಸಿ

ಪಿಎಫ್ಐ ಸಂಧಟನೆ  ವಿದೇಶದಿಂದ ಹಣ ಸಂಗ್ರಹಿಸಿ ಭಾರತದಲ್ಲಿ ಭಯೋತ್ಪಾದನಾ ಚಟುವಟಿಗೆ ಬಳಸಿದ ಪ್ರಕರಣ ತನಿಖೆ ನಡೆಯತ್ತಿದೆ. ಇದರ ಜೊತೆಗೆ ಜಾರಿ ನಿರ್ದೇಶನಾಲಯ ಈಗಾಗಲೇ ವಿಶೇಷ ನ್ಯಾಯಾಲಯಕಕ್ಕೆ ಪಿಎಫ್ಐ ಸಂಘಟನೆಯ ಮನಿ ಲಾಂಡರಿಂಗ್ ಕೇಸ್ ಕುರಿತು ವರದಿ ಸಲ್ಲಿಸಿದೆ. ಈ ಪ್ರಕರಣ ಪಿಎಫ್ಐ ಸಂಘಟನೆಗೆ ತೀವ್ರ ಹಿನ್ನಡೆ ತಂದಿದೆ.

ವಿದೇಶದಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ ಹಾಗೂ ಅದನ್ನು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ 2013ರಲ್ಲಿ ವಿಶೇಷ NIA ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ PFI ಹಾಗೂ SDPI ತಮ್ಮ ಕಾರ್ಯಕರ್ತರಿಗೆ ಸ್ಫೋಟಕ ಹಾಗೂ ಶಸ್ತಾಸ್ತ್ರಗಳ ತರಬೇತಿ ನೀಡಲು ಹಾಗೂ ಭಯೋತ್ಪಾದನಾ ಚಟುವಟಿಕೆಗೆಗಾಗಿ ಶಿಬಿರ ಆಯೋಜಿಸಿದೆ ಎಂದು ಉಲ್ಲೇಖಿಸಿದೆ. ಧರ್ಮಗಳ ನಡುವೆ ದ್ವೇಷ ಉತ್ತೇಜಿಸುವ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಶಿಬಿರ ಆಯೋಜಿಸಿದೆ ಎಂದು ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..