'ಒಂದ್‌ ಪೈಸೆ ಟ್ಯಾಕ್ಸ್‌ ಕಟ್ಟದೆ ಇರೋ ಹಾಗೆ ಮಾಡ್ತಿದ್ದೆ, ಆದ್ರೆ ಭಾರತದ ಸವಾಲುಗಳೇ ಭಿನ್ನ..' ಎಂದ ನಿರ್ಮಲಾ ಸೀತಾರಾಮನ್‌!

By Santosh NaikFirst Published Aug 13, 2024, 7:17 PM IST
Highlights

Tax And Finance Minister Nirmala Sitharaman ಭಾರತ ಈಗ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌ನಿಂದ ನವೀಕರಿಸಬಹುದಾದ ಶಕ್ತಿಯತ್ತ ಸಾಗುತ್ತಿದೆ. ಇದಕ್ಕಾಗಿ ಹಣ ಬರುವವರೆಗೂ ಕಾಯಲು ಭಾರತ ಸಿದ್ಧವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ನವದೆಹಲಿ (ಆ.13): ಭಾರತದಲ್ಲಿ ಕೆಲವೊಂದು ತೆರಿಗೆಗಳನ್ನು ಬಹುತೇಕ ಶೂನ್ಯಕ್ಕೆ ನಾನು ಖಂಡಿತವಾಗಿ ಇಳಿಸುತ್ತಿದೆ. ಆದರೆ, ಭಾರತದ ಎದುರಿಗೆ ಇರುವ ಸವಾಲುಗಳು ಯಾವ ದೇಶಗಳಿಗೂ ಇರದೇ ಇರುವಂಥದ್ದು. ಆ ಕಾರಣಕ್ಕಾಗಿ ತೆರಿಗೆ ಆದಾಯ ನಮ್ಮ ಪಾಲಿಗೆ ನಿರ್ಣಾಯಕವಾಗಿದೆ ಎಂದು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. "ಭಾರತದ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣ ಒದಗಿಸಲು ತೆರಿಗೆ ಆದಾಯವು ನಿರ್ಣಾಯಕವಾಗಿದೆ. ಜನರಿಗೆ ಹೊರೆಯಾಗದಂತೆ ಆದಾಯ ಗಳಿಸಲು ಸರ್ಕಾರ ಬದ್ಧವಾಗಿದೆ. ಭಾರತದ ತೆರಿಗೆಗಳು ನವೀಕರಿಸಬಹುದಾದ ಇಂಧನ ಮತ್ತು ಸಂಶೋಧನೆಯಂಥ ನಿರ್ಣಾಯಕ ಕ್ಷೇತ್ರಗಳಿಗೆ ನಿಧಿಯನ್ನು ನೀಡುತ್ತವೆ ಮತ್ತು ಸವಾಲುಗಳ ಹೊರತಾಗಿಯೂ, ನವೀಕರಿಸಬಹುದಾದ ಇಂಧನಕ್ಕೆ ಪರಿವರ್ತನೆ ಮಾಡಲು ಭಾರತವು ಹೆಚ್ಚು ಹೂಡಿಕೆ ಮಾಡುತ್ತಿದೆ”ಎಂದು ಅವರು ಭೋಪಾಲ್‌ನಲ್ಲಿ ನಡೆದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ (IISER) ಘಟಿಕೋತ್ಸವದಲ್ಲಿ ತಿಳಿಸಿದ್ದಾರೆ. ಭಾರತ ಈಗ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌ನಿಂದ ನವೀಕರಿಸಬಹುದಾದ ಶಕ್ತಿಯತ್ತ ಸಾಗುತ್ತಿದೆ. ಇದಕ್ಕಾಗಿ ಹಣ ಬರುವವರೆಗೂ ಕಾಯಲು ಭಾರತ ಸಿದ್ಧವಿಲ್ಲ  ಎಂದಿದ್ದಾರೆ.

ಭಾರತವು ತನ್ನ ಸ್ವಂತ ನಿಧಿಯಿಂದ ತನ್ನ ನವೀಕರಿಸಬಹುದಾದ ಇಂಧನ ಬದ್ಧತೆಗಳನ್ನು ಪೂರೈಸುತ್ತಿದೆ ಮತ್ತು ಆದ್ದರಿಂದ, ಸವಾಲುಗಳಿಗೆ ಪ್ರಸ್ತುತ ತೆರಿಗೆ ಮಟ್ಟಗಳು ಅಗತ್ಯವಾಗಿವೆ, "ಆದ್ದರಿಂದ, ಅವುಗಳನ್ನು ಕಡಿಮೆ ಮಾಡುವುದು ಕಷ್ಟ" ಎಂದು ಅವರು ಹೇಳಿದರು. ದೇಶದಲ್ಲಿ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಸಿಸ್ಟಮ್‌ನಲ್ಲಿ ಬದಲಾವಣೆ ಹಾಗೂ ಇಂಡ್ಯಾಕ್ಸೇಷನ್‌ ಲಾಭವನ್ನು ತೆಗೆದುಹಾಕುವ ವಿಚಾರದಲ್ಲಿ ಸರ್ಕಾರ ಎದುರಿಸಿದ ದೊಡ್ಡ ಮಟ್ಟದ ಟೀಕೆ ಬಳಿಕ ಸೀತಾರಾಮನ್‌ ಈ ಹೇಳಿಕೆ ನೀಡಿದ್ದಾರೆ.

ದೊಡ್ಡ ಮಟ್ಟದ ಟೀಕೆ ಎದುರಾದ ಬಳಿಕ ಸರ್ಕಾರವು ಸ್ಥಿರ ಆಸ್ತಿಯ ಮೇಲಿನ ತೆರಿಗೆಯ ಮೇಲೆ ಸ್ವಲ್ಪ ಪರಿಹಾರವನ್ನು ಘೋಷಿಸಿತು ಮತ್ತು 2024ರ ಜುಲೈ 23ರ ಮೊದಲು ಆಸ್ತಿಯನ್ನು ಖರೀದಿ ಮಾಡಿದ್ದರೆ, ಇಂಡ್ಯಾಕ್ಸೇಷನ್‌ ಇಲ್ಲದೆ 12.5% ​​ಟ್ಯಾಕ್ಸ್ ಹಾಗೂ ಇಂಡ್ಯಾಕ್ಸೇಷನ್‌ ಜೊತೆ ಶೇ. 20ರಷ್ಟು ತೆರಿಗೆ ವಿಧಿಸಲು ಅವಕಾಶ ಮಾಡಿಕೊಟ್ಟಿತು. ಸಾಂಪ್ರದಾಯಿಕ ಇಂಧನಗಳಿಂದ ನವೀಕರಿಸಬಹುದಾದ ಶಕ್ತಿಗೆ ಪರಿವರ್ತನೆಯು ರಾಷ್ಟ್ರೀಯ ಆದ್ಯತೆಯಾಗಿದೆ ಮತ್ತು ನವೀಕರಿಸಬಹುದಾದ ಇಂಧನ ಪರಿಹಾರಗಳಿಗಾಗಿ ಸರ್ಕಾರವು R&D ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ ಎಂದು ಒತ್ತಿ ಹೇಳಿದರು.

ಸೀತಾರಾಮನ್ ಅವರು ಸೌರ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬ್ಯಾಟರಿ ಸಂಗ್ರಹಣೆಯಲ್ಲಿ ನಾವೀನ್ಯತೆಗಳ ಅಗತ್ಯವನ್ನು ತಿಳಿಸಿದ್ದಾರೆ. IISER ಪದವೀಧರರು ಸ್ಕೇಲೆಬಲ್ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಪರಿಹಾರಗಳ ಮೇಲೆ ಕೇಂದ್ರೀಕರಿಸಲು ಒತ್ತಾಯಿಸಿದರು.

ಸಹಕಾರ ಬ್ಯಾಂಕ್‌ ನಿರ್ದೇಶಕರ ಅವಧಿ 8 ರಿಂದ 10 ವರ್ಷಕ್ಕೆ ಏರಿಕೆ, ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿ!

ವೈಜ್ಞಾನಿಕ ಸಂಶೋಧನೆಗಾಗಿ ನೇಚರ್ ಇಂಡೆಕ್ಸ್‌ನಲ್ಲಿ ಭಾರತ ಒಂಬತ್ತನೇ ಸ್ಥಾನಕ್ಕೆ ಏರಿದೆ ಎಂದು ಸೀತಾರಾಮನ್ ತಿಳಿಸಿದರು. ನಾಲ್ಕು ವರ್ಷಗಳಲ್ಲಿ ಉತ್ತಮ ಗುಣಮಟ್ಟದ ಸಂಶೋಧನಾ ಲೇಖನಗಳ ರಾಷ್ಟ್ರದ ಪಾಲು 44% ಹೆಚ್ಚಾಗಿದೆ ಎಂದು ಅವರು ಹೇಳಿದರು. AI ಮಿಷನ್‌ಗಾಗಿ ಭಾರತವು ₹10,300 ಕೋಟಿ ಬಜೆಟ್ ಅನ್ನು ಅನುಮೋದಿಸಿದೆ ಮತ್ತು ಗ್ರೀನ್ ಹೈಡ್ರೋಜನ್ ಮಿಷನ್ 2047 ರ ವೇಳೆಗೆ ಇಂಧನ ಸ್ವಾತಂತ್ರ್ಯದ ಗುರಿಯನ್ನು ಹೊಂದಿದೆ ಎಂದು ಅವರು ಹೈಲೈಟ್ ಮಾಡಿದರು. ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ಹಂಚಿಕೊಂಡ ಅವರು, ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳು ಈಗ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

Latest Videos

ಭೂಕುಸಿತ ಬಾಧಿತರ ವಿಮಾ ಹಣ ತಕ್ಷಣ ವಿತರಿಸಿ ; ಬ್ಯಾಂಕ್‌ಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ

ಇತರ ವಲಯಗಳ ಬಗ್ಗೆ ತಿಳಿಸಿದ ಅವರು,  ಭಾರತದ ಬಾಹ್ಯಾಕಾಶ ಕ್ಷೇತ್ರವು ಈಗ ಗಮನಾರ್ಹವಾದ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ ಮತ್ತು 5G ತಂತ್ರಜ್ಞಾನವನ್ನು ಸಂಪೂರ್ಣವಾಗಿ ಸ್ಥಳೀಯ ಪ್ರಯತ್ನಗಳೊಂದಿಗೆ ಪ್ರಾರಂಭಿಸಲಾಗಿದೆ ಎಂದರು.

click me!