Suvarna News   | Asianet News
Published : Jan 31, 2022, 08:52 PM ISTUpdated : May 26, 2025, 11:25 AM IST

Budget 2022 LIVE: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು? ಹೀಗಿದೆ ನಿರ್ಮಲಾ, ಮೋದಿ ಲೆಕ್ಕಾಚಾರ

ಸಾರಾಂಶ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ನಾಲ್ಕನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ.ಈ ವರ್ಷ 39.45 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ರಿಲೀಫ್ ಸಿಕ್ಕಿದ್ದು, ಐಟಿ ದಾಳಿ ವೇಳೆ ಸಿಕ್ಕಾಕೊಳ್ಳೋರ ಹೃದಯ ಬಡಿತ ಹೆಚ್ಚಿದೆ. ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಸಹಕಾರಿ ಸಂಘಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೂ ಹೊಸ ನೀತಿ ಜಾರಿಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳನ್ನು ಪರಿಚಯಿಸಿದ್ದು, ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ ಜೊತೆಗೆ ಸಾವಯವ ಕೃಷಿಗೂ ಆದ್ಯತೆ ನೀಡಲಾಗಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತಾರಾಖಾಂಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಪಂಚ ರಾಜ್ಯಗಳಿಗೆ ಬಜೆಟ್‌ನಲ್ಲಿ ಮಣೆ ಹಾಕಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ನಿರ್ಮಲಾ, ಮೋದಿ ಲೆಕ್ಕಾಚಾರದ ಕ್ಷಣ ಕ್ಷಣದ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Budget 2022 LIVE: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು? ಹೀಗಿದೆ ನಿರ್ಮಲಾ, ಮೋದಿ ಲೆಕ್ಕಾಚಾರ

06:51 PM (IST) Feb 01

Union Budget 2022: ಕ್ರೀಡೆಗೆ ಸಿಕ್ಕಿದ್ದಿಷ್ಟು

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್(Nirmala Sitharaman), ಮಂಗಳವಾರ(ಫೆ.01)ದಂದು 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget) ಮಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೂ (Sports Sector) ತನ್ನ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಿದೆ. 2021-22ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ಹಣವನ್ನು ನೀಡಲಾಗಿದೆ. ಇದರ ಹೊರತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕ್ರೀಡೆ ಎನ್ನುವ ಶಬ್ದವನ್ನು ಬಳಸಿಲ್ಲ, ಇದರ ಬದಲಾಗಿ ಗೇಮಿಂಗ್ ಎನ್ನುವ ಪದ ಬಳಕೆ ಮಾಡಿದ್ದಾರೆ. 

ಕ್ರೀಡೆಗೂ ಹೆಚ್ಚು ಅನುದಾನ ಮೀಸಲಿಟ್ಟ ನಿರ್ಮಲಾ ಸೀತರಾಮನ್

 

 

05:55 PM (IST) Feb 01

Union Budget 2022 ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಜೊತೆ ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!

ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಲ್ಲಿ ಮಾನಸಿಕ ಆರೋಗ್ಯ(mental health) ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ(Coronavirus) ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ(Union Budget 2022) ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್(NIMHANS) ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. 

Union Budget 2022 ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಜೊತೆ ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!

 

 

05:40 PM (IST) Feb 01

Union Budget 2022: 2023ನೇ ಆರ್ಥಿಕ ಸಾಲಿಗೆ ದಾಖಲೆಯ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಣೆ

ಕಳೆದ ವರ್ಷ ಕೋವಿಡ್‌ ಕಾರಣದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಬೃಹತ್ ಬಂಡವಾಳ ವೆಚ್ಚವನ್ನು(Capital Expenditure) ಘೋಷಿಸಿತ್ತು. ಇಂದು (ಫೆ.1) ಮಂಡಿಸಿದ 2022ನೇ ಸಾಲಿನ ಬಜೆಟ್ ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ ಘೋಷಿಸಿದೆ.

Union Budget 2022: 2023ನೇ ಆರ್ಥಿಕ ಸಾಲಿಗೆ ದಾಖಲೆಯ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಣೆ

05:38 PM (IST) Feb 01

Union Budget 2022: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು?

ಕೊರೋನಾ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಹೇಗಿತ್ತು? 

"

05:36 PM (IST) Feb 01

Union Budget 2022: ಆರ್ಥಿಕತೆಗೆ ಬೂಸ್ಟರ್ ಕೊಡುವ ಬಜೆಟ್: ಸಿಎಂ ಬೊಮ್ಮಾಯಿ

 2 ವರ್ಷ ಕೋವಿಡ್‌ನಿಂದ ಆರ್ಥಿಕತೆ ಹಿಂಜರಿತವಾಗಿತ್ತು. ಈ ಬಾರಿ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಉದ್ದೇಶವನ್ನಿಟ್ಟುಕೊಂಡು, ಬಜೆಟ್ ಮಂಡಿಸಲಾಗಿದೆ. ಇದೊಂದು ಆರ್ಥಿಕತೆಯನ್ನು ಉತ್ತೇಜಿಸುವ ಬಜೆಟ್ ಇದಾಗಿದೆ. ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು. 

"

05:13 PM (IST) Feb 01

ಬಜೆಟ್ ‌ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ: ಸಿದ್ದರಾಮಯ್ಯ

ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡಿಸಿದ್ದಾರೆ. ನಾನು ಬಜೆಟ್ ಮೇಲೆ ಬಹಳ ನಿರೀಕ್ಷೆ ಇರಲಿಲ್ಲ. ರೈತರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು.ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ರು.ಆದರೆ ಅವರ ನಿರೀಕ್ಷೆ ಈಡೇರಿಲ್ಲ. ಕಳೆದ ವರ್ಷ ಸುಮಾರು 34 ಲಕ್ಷ ಕೋಟಿ ರೂ ಬಜೆಟ್ ಮಂಡಿಸಿದ್ರು.ಈ ವರ್ಷ 39.45ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ 4 ಲಕ್ಷದ 61ಸಾವಿರ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ವರ್ಷದ 11ಲಕ್ಷ 87ಸಾವಿರದ 180ಕೋಟಿ ರೂ ಸಾಲ ಮಾಡಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಮೇಲೆ ಇದ್ದ ಸಾಲ 135ಲಕ್ಷ 87ಸಾವಿರ ಕೋಟಿ ರೂ. ಮಹಮೋಹನ್ ಸಿಂಗ್ ಕಾಲದಲ್ಲಿ ಇದ್ದಂತ ಸಾಲ 53ಲಕ್ಷ 11ಸಾವಿರ ಕೋಟಿ. 8ವರ್ಷದ ಅವಧಿಯಲ್ಲಿ‌ ಬಿಜೆಪಿ 93ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ.9,40,651ಕೋಟಿ ವರ್ಷಕ್ಕೆ ಬಡ್ಡಿ ಆಗುತ್ತೆ. ಬಜೆಟ್ ‌ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ.

ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ.

 

 

05:08 PM (IST) Feb 01

Budget ಭಾಷಣದಲ್ಲಿ ನಿರ್ಮಲಾ ಶಾಂತಿ ಪರ್ವವನ್ನು ಮೆನ್ಷನ್ ಮಾಡಿದ್ದೇಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್(Union Budget) 2022-23 ಅನ್ನು ಮಂಡಿಸುತ್ತಿರುವಾಗ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಅಧ್ಯಾಯಗಳಲ್ಲಿ 12ನೆಯದಾದ ಶಾಂತಿಪರ್ವ(Book of Peace)ದಲ್ಲಿ ಬರುವ ಪದ್ಯವೊಂದನ್ನು ಪ್ರಸ್ತಾಪಿಸಿದರು. ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ  ಮಹಾಭಾರತವನ್ನು ಉಲ್ಲೇಖಿಸಿ, ಶಾಂತಿ ಪರ್ವದ ಪದ್ಯವೊಂದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳಿದರು. 

ನಿರ್ಮಲಾ ಹೇಳಿದ ಶ್ಲೋಕದ ಅರ್ಥವೇನು?

 

 

04:50 PM (IST) Feb 01

ಗೇಮಿಂಗ್ ಮತ್ತು ಅನಿಮೇಷನ್‌ಗೆ ಒತ್ತು, ಗಂಗೆಯ ದಡದಲ್ಲಿ ಕೃಷಿ

ಈ ಬಜೆಟ್‌ನಿಂದ ಮುಂದಿನ 25 ವರ್ಷಗಳ ಕಾಲ ಭಾರತಕ್ಕೆ ಅಡಿಪಾಯ ಸಿಗಲಿದೆ ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಪ್ರಗತಿ ನಿರೀಕ್ಷಿಸಲಾಗಿದೆ.ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.9.2ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ರೈಲ್ವೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆಗಳನ್ನು ಮಾಡಲಾಗಿದೆ.

ಗಂಗೆಯ ದಡದಲ್ಲಿ ಕೃಷಿ, Union Budget 2022ರ 10 ದೊಡ್ಡ ವಿಚಾರಗಳು!

04:49 PM (IST) Feb 01

Union Budget 2022: 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ

ಕೇಂದ್ರ ಹಣಕಾಸು ಸಚಿವಾಲಯದ ಬಿಡುಗಡೆಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಮತ್ತು ಫಿನ್‌ಟೆಕ್ (Fintech) ಆವಿಷ್ಕಾರಗಳು ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆದಿವೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಗ್ರಾಹಕ ಸ್ನೇಹಿ ರೀತಿಯಲ್ಲಿ ದೇಶದ ಮೂಲೆ ಮೂಲೆಗಳನ್ನು ತಲುಪಲು ಸರ್ಕಾರವು ನಿರಂತರವಾಗಿ ಅವುಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು. 

 ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್!

 

 

04:45 PM (IST) Feb 01

Budget 2022: ಬಜೆಟನಲ್ಲಿ ಇ-ಪಾಸ್‌ಪೋರ್ಟ್ ಘೋಷಣೆ

 ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದ್ದು ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. ಬಜೆಟ್‌ನಲ್ಲಿ ಗಮನ ಸೆಳೆದ ವಿಚಾರಗಳಲ್ಲಿ ಇ-ಪಾಸ್‌ಪೋರ್ಟ್‌ (E-Passport) ಕೂಡ ಒಂದು. ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದಾರೆ. 

ಇ-ಪಾಸ್‌ಪೋರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

04:43 PM (IST) Feb 01

ನಿರ್ಮಲಾ ಬಜೆಟ್‌ಗೆ ಬೇಷ್ ಎಂದ ಪ್ರಧಾನಿ ಮೋದಿ

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಕೇಂದ್ರ ಬಜೆಟ್(Union Budget 2022) ಮಂಡಿಸಿದ್ದಾರೆ. ಬಜೆಟ್ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಷೇರು ಸೂಚ್ಯಂಕ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಬಜೆಟ್ ಕುರಿತು ಭಾಷಣ ಮಾಡಿದ್ದಾರೆ. ಈ ಬಜೆಟ್ ಅತ್ಯುತ್ತಮ ಬಜೆಟ್ ಆಗಿದ್ದು, ಮುಂದಿನ 100 ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟು ಮಂಡನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!

 

 

04:28 PM (IST) Feb 01

Union Budget 2022 ಅಭಿವೃದ್ಧಿಗೆ ಮತ್ತಷ್ಟು ವೇಗ

ಕೇಂದ್ರ ಬಜೆಟ್(Union Budget 2022) ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರ್ಥಿಕ ತಜ್ಞರು ಒಟ್ಟಾರೆ ಉತ್ತಮ ಬಜೆಟ್ ಎಂದಿದ್ದರೆ, ರಾಹುಲ್ ಗಾಂಧಿ(Rahul Gandhi) ಸೇರಿದಂತೆ ವಿಪಕ್ಷ ಶೂನ್ಯ ಬಜೆಟ್ ಎಂದಿದೆ. ತಜ್ಞರ ಪ್ರಕಾರ ಭಾರತದಲ್ಲಿ ಮೂಲಸೌಕರ್ಯ(infrastructure) ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಲ್ಲಿ ಹೆದ್ದಾರಿ ಅಭಿವೃದ್ದಿ(Highway) ಕೂಡ ಸೇರಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರ 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಿಸಲು ಮುಂದಾಗಿದೆ.

20,000 ಕೋಟಿ ರೂ ವೆಚ್ಚದಲ್ಲಿ 25,000 ಕಿ.ಮೀ ಹೆದ್ದಾರಿ ವಿಸ್ತರಣೆ!

 

 

03:53 PM (IST) Feb 01

ಉದ್ಯೋಗ ಸೃಷ್ಟಿಗೆ ಒತ್ತು, ಹೇಳಿದ್ದಷ್ಟು ಕೊಡಲಿಲ್ಲ ಎಂದ ಕಾಂಗ್ರೆಸ್

ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ   60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಇಂದು ತಾವು ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿಯೂ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. 2014 ರಿಂದಲೂ ಯುವಕರು ಮತ್ತು ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮುಂದಿರುವ ಗುರಿಯಾಗಿದೆ. ಬಡತನದಿಂದ ಮೇಲೆತ್ತಲು ಈ ಉದ್ಯೋಗಗಳು ಅನುಕೂಲವಾಗಲಿದೆ ಎಂದಿದ್ದಾರೆ. 

 Aatmanirbhar Bharatನಡಿ 16 ಲಕ್ಷ ಉದ್ಯೋಗ, 5 ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

 

 

03:49 PM (IST) Feb 01

Union Budget 2022: ನಾರಿಗೆ ಶಕ್ತಿ ತುಂಬಿದ ಬಜೆಟ್

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ತಮ್ಮ ನಾಲ್ಕನೇ ಬಜೆಟ್ ಭಾಷಣದಲ್ಲಿ ಕೆಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಆ ಮೂಲಕ ಈ ಬಾರಿಯ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯರ  ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸೋ ಜೊತೆಗೆ ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಿದೆ ಕೂಡ. 

ಮಹಿಳಾ ಸಬಲೀಕರಣಕ್ಕೆ ಯಾವೆಲ್ಲ ಕಾರ್ಯಕ್ರಮಗಳು ಘೋಷಣೆಯಾಗಿವೆ?

 

 

03:26 PM (IST) Feb 01

ಮನೆ ಮನೆಗೂ ನೀರು ನೀಡಲು ಜಲ ಯೋಜನೆ

ನರೇಂದ್ರ ಮೋದಿ (Narendra Modi)ನೇತೃತ್ವದ ಸರ್ಕಾರದ ಪ್ರಮುಖ ಭರವಸೆಗಳಲ್ಲಿ ದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವುದು ಪ್ರಮುಖವಾಗಿತ್ತು. ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  (central government) ಈವರೆಗೂ ದೊಡ್ಡ ಮಟ್ಟದ ಶ್ರಮವಹಿಸಿದ್ದು, ಕೇಂದ್ರ ಬಜೆಟ್ ನಲ್ಲಿ "ಹರ್ ಘರ್, ನಳ್ ಸೇ ಜಲ್" (ಪ್ರತಿ ಮನೆಗೂ, ನಲ್ಲಿಯಿಂದ ನೀರು) ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಹೇಳಿದ್ದಾರೆ.

ಮನೆ ಮನೆಗೂ ನೀರು ನೀಡಲು ಜಲ ಯೋಜನೆ

 

 

03:22 PM (IST) Feb 01

25 ಸಂಸದರಿಗೆ, ರಾಜ್ಯದ ಸಿಎಂಗೆ ಅಭಿನಂದಿಸ್ತೇನೆ: ಡಿಕೆಶಿ

ರಾಜ್ಯಕ್ಕೆ ಯೋಜನೆಗಳ ಸುರಿಮಳೆ ಬಜೆಟ್ ಕೊಡಿಸಿದ್ದಾರೆ. ಇದು ಕೇಂದ್ರ ಬಜೆಟ್ ಅಲ್ಲ ಇದು ಕೋವಿಡ್ ಬಜೆಟ್. ಕರ್ನಾಟಕಕ್ಕೆ ಕೊಡುಗೆ ಶೂನ್ಯ.. ಬಜೆಟ್‌ನಲ್ಲಿ ಕರ್ನಾಟಕದ ಹೆಸರೇ ಇಲ್ಲ. ವರ್ಷ ಎರಡು ಕೋಟಿ ಉದ್ಯೋಗ ಕೊಡ್ತೇವೆ ಎಂದವರು ಈಗ 60 ಲಕ್ಷ ಉದ್ಯೋಗದ ಮಾತಾಡಿದ್ದಾರೆ. ದೇಶದ ಯುವಕರಿಗೆ ಅನ್ಯಾಯ ಮಾಡಿದ್ದಾರೆ..

- ಕೇಂದ್ರ ಬಜೆಟ್ ಬಗ್ಗೆ ಡಿಕೆಶಿ ವ್ಯಂಗ್ಯ

 

 

03:19 PM (IST) Feb 01

ಇದು ದೂರದೃಷ್ಟಿ ಇರುವ ಬಜೆಟ್: ನಳೀನ್ ಕುಮಾರ್ ಕಟೀಲ್

ಇದು ದೂರದೃಷ್ಟಿ ಇರುವ ಬಜೆಟ್. ಜಗತ್ತು ಸಂಕಷ್ಟದಲ್ಲಿದ್ದಾಗಲೂ ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಆಟಲ್ ಕನಸಿಗೆ ಆದ್ಯತೆ ಕೊಟ್ಟವರು ಮೋದಿ. ರಾಷ್ಟ್ರದಲ್ಲಿ 25 ಸಾವಿರ ಕಿಲೋಮೀಟರ್ ಹೆದ್ದಾರೆ ಘೋಷಣೆಯಾಗಿದೆ. ಒಂದೇ ಭಾರತ್ ಯೋಜನೆಯ ಮೂಲಕ 400 ಹೊಎ ರೈಲುಗಳಿಗೆ ಆದ್ಯತೆ. ಆಟಲ್ ಕನಸು ನದಿ ಜೋಡಣೆಗೆ ಮೋದಿಯಿಂದ ನನಸು.

- ನಳೀನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಸಂಸದ

 

 

03:15 PM (IST) Feb 01

Education Budget 2022: ಶಿಕ್ಷಣಕ್ಕೆ ಸಿಕ್ಕಿದ್ದು ಮಹತ್ವದ ಕೊಡುಗೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

ಕೇಂದ್ರ ಬಜೆಟ್ 2022ರ (Union Budget 2022) ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದಾರೆ. ಆತ್ಮನಿರ್ಭರ್‌ಗೆ ಹೆಚ್ಚು ಒತ್ತು ನೀಡಿದ್ದು, 25 ವರ್ಷಗಳ ಬ್ಲೂಪ್ರಿಂಟ್  ತಯಾರು ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಆಂತರಿಕವಾಗಿ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ.

ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

 

 

 

03:12 PM (IST) Feb 01

Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ

ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟ್‌ (Union Budget 2022) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಇಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ ಬಜೆಟ್ ನೀಡಿದ್ದಾರೆ. ಬಜೆಟ್‌ನ ಗಾತ್ರ, ಯಾರ್ಯಾರಿಗೆ ಏನೇನು ಸಿಕ್ಕಿದೆ..? ಬಜೆಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ. 

"

 

03:06 PM (IST) Feb 01

Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ತೆರಿಗೆದಾರರು ನಿರಾಶೆಗೊಂಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಜೆಟ್‌ನಲ್ಲಿ ಏನು ದುಬಾರಿಯಾಗಿದೆ ಮತ್ತು ಯಾವ ವಸ್ತುಗಳಿಗೆ ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಜನರಲ್ಲಿತ್ತು. ಬಜೆಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿವೆ.

Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

 

 

03:00 PM (IST) Feb 01

ಹಳ್ಳಿಯ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ. ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದ್ದು, ಇದು ಅತಿ ವೇಗದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದೆ. ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. 

ಹಳ್ಳಿಯ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ

 

 

02:15 PM (IST) Feb 01

Union Budget 2022 : ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಸರ್ಕಾರದ ಒಪ್ಪಿಗೆ

ಕೃಷಿ ಕಾಯ್ದೆಗಳ ವಿರುದ್ಧವಾಗಿ ವರ್ಷಗಳ ಕಾಲ ನಡೆದ ರೈತ ಹೋರಾಟದಿಂದ ಕುಂದಿದ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central government) ಕೆಲ ಪ್ರಮುಖ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ. 2021-22 ರ ರಾಬಿ ಋತುವಿನಲ್ಲಿ ಸರ್ಕಾರದ ಬೃಹತ್ ಗೋಧಿ (wheat) ಸಂಗ್ರಹಣೆ ಮತ್ತು 2021-22 ರ ಖಾರಿಫ್ ಋತುವಿನಲ್ಲಿ ಭತ್ತದ (paddy) ಅಂದಾಜು ಸಂಗ್ರಹಣೆಯು 1208 ಮೆಟ್ರಿಕ್ ಟನ್ ಆಗಲಿದ್ದು, 1.63 ಲಕ್ಷ ರೈತರಿಂದ ಸರ್ಕಾರ ಗೋಧಿ ಹಾಗೂ ಭತ್ತದ ಖರೀದಿ ಮಾಡಲಿದೆ. ಅದರೊಂದಿಗೆ ಕೆನ್-ಬೆಟ್ವಾ ಲಿಂಕ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಮೊತ್ತದ ಹಣವನ್ನು ಮೀಸಲಿಟ್ಟಿದೆ. ಕೆನ್-ಬೆಟ್ವಾದೊಂದಿಗೆ ಕಾವೇರಿ ಸೇರಿದಂತೆ ದಕ್ಷಿಣದ ನದಿಗಳ ಜೋಡಿಣೆಯ ಪ್ರಸ್ತಾಪಕ್ಕೆ ಕರ್ನಾಟಕದ ರಾಜಕಾರಣಿಗಳು ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

02:12 PM (IST) Feb 01

Union Budget 2022 ಸೊರಗಿರುವ ಆಟೋ ಕ್ಷೇತ್ರಕ್ಕೆ ನಿರಾಸೆ, ಬ್ಯಾಟರಿ ಸ್ವ್ಯಾಪ್ ನೀತಿಗೆ ತೃಪ್ತಿ!

ಕೇಂದ್ರದ ಬಜೆಟ್(Union Budget 2022) ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್(Automobile Sector) ಕ್ಷೇತ್ರಕ್ಕೆ ನಿರಾಸೆಯಾಗಿದೆ. ಕೊರೋನಾ, ಲಾಕ್‌ಡೌನ್, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ಸೊರಗಿ ಹೋಗಿದ್ದ ಭಾರತದ ಆಟೋ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೆಲ ಕೊಡುಗೆ ನಿರೀಕ್ಷಿಸಿತ್ತು. ಆದರೆ ಎಲೆಕ್ಟ್ರಿಕ್ ವಾಹನ(Electric Vehicle) ಸಂಬಂಧ ಕೆಲ ಘೋಷಣೆ ಹೊರತು ಪಡಿಸಿ ಇನ್ನುಳಿದ ವಿಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಈ  ಮೂಲಕ ಆಟೋ ಕ್ಷೇತ್ರದ ನಿರೀಕ್ಷೆ ತಕ್ಕ ಬಜೆಟ್ ಇರಲಿಲ್ಲ ಅನ್ನೋದು ಸತ್ಯ.

Union Budget 2022 ಸೊರಗಿರುವ ಆಟೋ ಕ್ಷೇತ್ರಕ್ಕೆ ನಿರಾಸೆ, ಬ್ಯಾಟರಿ ಸ್ವ್ಯಾಪ್ ನೀತಿಗೆ ತೃಪ್ತಿ!

02:01 PM (IST) Feb 01

ಡಿಜಿಟಲ್ ಕಲಿಕೆ, ಕೌಶಲ್ಯ, ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್: ಅಶ್ವತ್ಥನಾರಾಯಣ ಸಂತಸ

ಡಿಜಿಟಲ್ ಕಲಿಕೆ, ಕೌಶಲ್ಯ, ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್: ಅಶ್ವತ್ಥನಾರಾಯಣ ಸಂತಸ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ. ಈ ಉಪಕ್ರಮಗಳು ಅತ್ಯಂತ ಸಮಯೋಚಿತ ಮತ್ತು ಅರ್ಥಪೂರ್ಣವಾಗಿವೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ `ಒಂದು ತರಗತಿ, ಒಂದು ಟಿವಿ ಚಾನೆಲ್’ ಘೋಷಣೆಯಡಿ 200 ಟಿವಿ ವಾಹಿನಿಗಳಿಗೆ ಅವಕಾಶ ನೀಡಿರುವುದು ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ಕ್ರಮವಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ವಿಶ್ವ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಹುದು. ಇದು ಎನ್ಇಪಿ ಆಶಯಗಳಿಗೆ ತಕ್ಕಂತಿದೆ.

ಜತೆಗೆ, ಕೌಶಲ್ಯಗಳ ಪೂರೈಕೆ ಮತ್ತು ಅವುಗಳ ಸಮರ್ಪಕ ಜಾರಿಗೆ ದೇಶ್ ಇ-ಪೋರ್ಟಲ್ ಸ್ಥಾಪನೆ, ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ, ಎವಿಜಿಸಿ ಕಾರ್ಯಪಡೆ ಸ್ಥಾಪನೆ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗೆ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹವಾಗಿದೆ. ಇದಲ್ಲದೆ, ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಕ್ರಿಪ್ಟೋಕರೆನ್ಸಿ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿರುವುದಲ್ಲದೆ, ಡೀಪ್ ಟೆಕ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆಗಳನ್ನು ಘೋಷಿಸಿರುವುದರಿಂದ ಜನರ ಜೀವನ ಗುಣಮಟ್ಟ ಸುಧಾರಿಸುತ್ತದೆ. ಇದಕ್ಕೆ ಪೂರಕವಾಗಿ `ಸುಗಮ ಜೀವನ’ (ಈಸ್ ಆಫ್ ಲಿವಿಂಗ್) ಸಂಸ್ಕೃತಿಯನ್ನು ರೂಪಿಸಲು ಹೆಜ್ಜೆ ಇಡಲಾಗಿದೆ.

 

 

01:56 PM (IST) Feb 01

ಯಾವುದೇ ಅಸಾಧ್ಯವೋ ಅದು ಸಾಧ್ಯ ಮಾಡುವುದೇ ಮೋದಿ ಸರ್ಕಾರದ ಆಶಯ: ತೇಜಸ್ವಿ ಸೂರ್ಯ

ಇದು ದೂರ ದೃಷ್ಟಿಯುಳ್ಳ ಬಜೆಟ್. ಬಿಜೆಪಿ ಇದನ್ನು ಸ್ವಾಗತಿಸುತ್ತದೆ. ಮೂಲ ಸೌಕರ್ಯ, ಹೈವೇಗಳು, 400 ರೈಲು ಯೋಜನೆಗಳು ಘೋಷಣೆಯಾಗಿವೆ. ಇದರಿಂದ ಕೋಟ್ಯಂತರ ಉದ್ಯೋಗಗಳು ಸಿಗಲಿವೆ. ಕ್ರಿಪ್ಟೋ ಕರೆನ್ಸಿ ವಿಚಾರಕ್ಕೆ ಈ ಬಜೆಟ್‌ನಲ್ಲಿ ಸ್ಪಷ್ಟತೆ ಸಿಕ್ಕಿದೆ. ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಸಹಕಾರಿ ಸಂಘಗಳ ಮೇಲೆ ಇದ್ದ ಸರ್‌ಚಾರ್ಜ್ ಇಳಿಸಿದೆ. ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಿದೆ. ರೈತರು, ಗ್ರಾಮೀಣ ಭಾಗ, ಸ್ಟಾಟ್೯ ಅಪ್ ಸೇರಿ ಎಲ್ಲಾ ವಿಭಾಗಳಿಗೂ ಬಜೆಟ್ ಸ್ಪರ್ಶ ಸಿಕ್ಕಿದೆ. ಮೋದಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಒಂದು ಸ್ಕೀಂ ಅಂತಾ ಘೋಷಣೆ ಮಾಡಲ್ಲ. ಆದರೆ ಮೂಲಸೌರ್ಯ ಹೆಸರಲ್ಲಿ ಎಲ್ಲಾ ರಾಜ್ಯಗಳ ಯೋಜನೆಗಳಿಗೆ ಹಣ ಸಿಗುತ್ತೆ. ಕ್ರಿಪ್ಟೋ ಕರೆನ್ಸಿ ಕಾನೂನು ಬಾಹಿರ ಅಂತ ಕೇಂದ್ರ ಸರ್ಕಾರ ಹೇಳಿಲ್ಲ. ಬದಲಿಗೆ RBI ತರುವ ಕ್ರಿಪ್ಟೋ ಕರೆನ್ಸಿ ಮೂಲಕ ಡಿಜಿಟಲ್ ಹಣ ಹೂಡಿಕೆ ಮಾಡಬಹುದು. ನದಿ ಜೋಡಣೆ ವಿಚಾರವಾಗಿ ಹೇಳುವುದಾದರೆ ಯಾವುದೇ ಅಸಾಧ್ಯವೋ ಅದು ಸಾಧ್ಯ ಮಾಡುವುದೇ ಮೋದಿ ಸರ್ಕಾರದ ಆಶಯ.
- ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಸಂಸದ

 

 

01:51 PM (IST) Feb 01

ದೇಶದ ಮೂಲೆಯ ಹಳ್ಳಿಯೊಂದ ಮನೆಗೂ ಇಂಟರ್ನೆಟ್ ಸೇವೆ ಒದಗಿಸಲು ಸರಕಾರ ಬದ್ಧ

5G ಸೇವೆ  ಪ್ರಸ್ತುತ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. 2022-23 ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗವುದು ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ತಿಳಿಸಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು ಎಂದು ಸೀತಾರಾಮನ್‌ ತಿಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ 4Gಗಿಂತ ನೂರು ಪಟ್ಟು ವೇಗದ ಇಂಟರ್‌ನೆಟ್‌  ಶೀಘ್ರದಲ್ಲೇ ಲಭ್ಯವಾಗಲಿದೆ.

ದೇಶದ ಮೂಲೆಯ ಹಳ್ಳಿಯೊಂದ ಮನೆಗೂ ಇಂಟರ್ನೆಟ್ ಸೇವೆ ಒದಗಿಸಲು ಸರಕಾರ ಬದ್ಧ


 

01:47 PM (IST) Feb 01

ಬಡವರಿಗೆ, ಯುವಕರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಬರೀ ಶೂನ್ಯ: ರಾಹುಲ್ ಗಾಂಧಿ

ಮಧ್ಯಮ ವರ್ಗದವರಿಗೆ, ನೌಕರರಿಗೆ, ಬಡವರಿಗೆ, ಯುವಕರಿಗೆ, ರೈತರಿಗೆ, ಮಧ್ಯಮ ವರ್ಗದ ಜನರಿಗೆ, ದೀನ ದಲಿತರಿಗೆ ಈ ಬಜೆಟ್‌ನಿಂದ ಸಿಕ್ಕಿದ್ದು ಬರೀ ಶೂನ್ಯ. ಇದು ಮೋದಿ ಸರಕಾರದ ಶೂನ್ಯ ಬಜೆಟ್: ರಾಹುಲ್ ಗಾಂಧಿ
 

01:44 PM (IST) Feb 01

Union Budget 2022: ತೆರಿಗಾದರರಿಗೆ, ಅದರಲ್ಲಿಯೂ ಸರಕಾರಿ ನೌಕರರಿಗೆ ಸಿಕ್ಕಿದ್ದೇನು?

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು 10% ರಿಂದ 14% ಕ್ಕೆ ಹೆಚ್ಚಿಸಲಾಗುವುದು ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ತರಲು ಸಹಾಯ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ಕಡಿತಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹೇಗೆ ಲಾಭವಾಗಲಿದೆ ಸರಕಾರಿ ನೌಕರರಿಗೆ?




 

01:42 PM (IST) Feb 01

ಉಪ್ಪು, ಉಳಿ, ಖಾರವಿಲ್ಲದ ಬಜೆಟ್: ಡಿ.ಕೆ.ಸುರೇಶ್

ಬಜೆಟ್ ಕುರಿತು ಸಂಸದ ಡಿ ಕೆ ಸುರೇಶ್ ನವದೆಹಲಿಯಲ್ಲಿ ನೀಡಿದ ಹೇಳಿಕೆ ಇದು..

ಇದು ಬಜೆಟ್ ಅಲ್ಲ. ಬದಲಿಗೆ ಸಂಸದರನ್ನು ಕುರಿಸಿಕೊಂಡು ಒಂದು ರಿಪೋರ್ಟ್ ಹೇಳಿದಂತೆ ಇದೆ. ಇದು ಭರವಸೆ ಮೂಡಿಸದ ಬಜೆಟ್. ಇದರಲ್ಲಿ ಉಪ್ಪು,ಹುಳಿ, ಖಾರ ಏನೂ ಇಲ್ಲ. ಕೋವಿಡ್‌ನಿಂದ ಜನರು ತೊಂದರಗೆ ಒಳಗಾಗಿದ್ದರು. ಆದರೆ ಬಡವರಿಗೆ, ಮಧ್ಯಮ ವರ್ಗಕ್ಕೆ ಏನೂ ಮಾಡಿಲ್ಲ. ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ಕೊಡ್ತಾರಂತೆ! ಈ ಬಜೆಟ್ ಚರ್ಚೆ ಮಾಡಲೂ ಕೂಡ ಏನೂ ಇಲ್ಲ. ನಿರುದ್ಯೋಗವನ್ನು ಪಿಎಂ ಒಪ್ಪಿಕೊಂಡಂತೆ ಆಗಿದೆ. ಇದರಲ್ಲಿ ಬರೀ ಸುಳ್ಳು ಭರವಸೆಗಳ ಬಜೆಟ್. ಹಣ ಇಡದೆ ಬರೀ ದಿಕ್ಸೂಚಿ ತೋರಿಸಿದ್ದಾರೆ. 39  ಲಕ್ಷ ಕೋಟೆ ಬಜೆಟ್ ಅಂತಾರೆ, ಆದರೆ ತೆರಿಗೆಗಳಿಂದ 24 ಲಕ್ಷ ಕೋಟಿ ಬರುತ್ತೆ. ಪುನಾ ಭಾರತೀಯರನ್ನು ಸಾಲಗಾರರನ್ನಾಗಿ ಮಾಡಿದೆ. ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆ, ರೈಲು ಯೋಜನೆಗಳಿಗೆ ಹಣ ಸಿಕ್ಕಿಲ್ಲ. ಮಹದಾಯಿ ವಿಚಾರವಾಗಿ ಚರ್ಚೆಯಾಗಿಲ್ಲ.
 


 

01:36 PM (IST) Feb 01

ನಾಗರಿಕರು ಕಚೇರಿಗಳಿಗೆ ಅಲೆದಾಡುವುದರಿಂದ ಮುಕ್ತಿ: ಆರಗ ಜ್ಞಾನೇಂದ್ರ

ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಇ-ಪಾಸ್ ಪೋರ್ಟ್ ನೀಡುವ ಮಾನ್ಯ ಪ್ರಧಾನಿ ಶ್ರೀ @narendramodi ಸರ್ಕಾರದ ನಿರ್ಧಾರದಿಂದ, ನಾಗರಿಕರು ಕಚೇರಿಗಳಿಗೆ ಅಲೆದಾಡದೆ ಸುಲಭವಾಗಿ ಪಾಸ್ ಪೋರ್ಟ್ ಸೇವೆ ಪಡೆಯಲು ಸಾಧ್ಯವಾಗಲಿದೆ. ತಂತ್ರಜ್ಞಾನದ ಸದ್ಬಳಕೆಗೆ ಇದು ಮಾದರಿ. 

 

01:35 PM (IST) Feb 01

Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ಗೃಹ!

ದೇಶದ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ(Union Budget 2022) ಕೈಗೆಟುಕುವ ದರದಲ್ಲಿ ಮನೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಬರೋಬ್ಬರಿ 48,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಪ್ರಧಾನ ಮಂತ್ರಿ ಅವಾಸ್( PMAY) ಯೋಜನೆಯಡಿ 80 ಲಕ್ಷ ಮನೆ(House) ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.

Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ಗೃಹ!

01:20 PM (IST) Feb 01

ಡಿಜಿಟಲ್ ಆಸ್ತಿಗೆ ತೆರಿಗೆ ಘೋಷಿಸಿದ ನಿರ್ಮಲ ಸೀತರಾಮನ್

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ.‌ ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದೆ.  ಪ್ರಸ್ತುತ ಡಿಜಿಟಲ್‌ ಕರೆನ್ಸಿ ಹಾಗೈ ಡಿಜಿಟಲ್‌ ಸ್ವತ್ತುಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಬೆನ್ನಲ್ಲೇ 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (Rserve Bank Of India) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೇ ಯಾವುದೇ  ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ

ಏನಿದು ಲೆಕ್ಕಚಾರ?

01:13 PM (IST) Feb 01

ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ: ಪ್ರಜ್ವಲ್ ರೇವಣ್ಣ

ಬಹಳ ನಿರಾಸಾದಾಯಕ ಬಜೆಟ್. ಬಜಟ್ ಮೇಲೆ ನಂಬಿಕೆಯೇ ಹೋಗಿದೆ. 25 ಜನ ಬಿಜೆಪಿ ಎಂಪಿಗಳು ಕರ್ನಾಟಕದಿಂದ ಇದ್ದಾರೆ, ಏನು ತಂದರು ರಾಜ್ಯಕ್ಕೆ? ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ಫೇಲ್ ಬಜೆಟ್. ಬಹಳಷ್ಟು ನಿರೀಕ್ಷೆಗಳು ಇದ್ದವು. ಕಾವೇರಿ- ಮೇಕೆದಾಟು ವಿಚಾರಕ್ಕೆ ಬಜೆಟ್‌ನಲ್ಲಿ ನಿರೀಕ್ಷೆ ಮಾಡಲಾಗಿತ್ತು.

ನದಿ ಜೋಡಣೆ ವಿಚಾರ: ಆದರೆ ಬಜೆಟ್ ನಲ್ಲಿ ರಾಜ್ಯಗಳ ಸಹಮತ ಇದ್ದರೇ ಮಾತ್ರ ಜೋಡೆ ಎಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ? ಇದು ಕಳಪೆ ಬಜೆಟ್. ಕರ್ನಾಟಕ ಕ್ಕೆ ಏನೂ ಕೊಟ್ಟಿಲ್ಲ. 
ಡಿಜಿಟಲ್ ಕರೆನ್ಸಿ ವಿಚಾರ: ಯಾವುದಕ್ಕೆ ಏನು? ಎಷ್ಟು ತೆರಿಗೆ ಹಾಕಿದ್ದಾರೆ ಅನ್ನೋದು ಸರಿಯಾಗಿ ಮಾಹಿತಿ ಕೊಟ್ಟಿಲ್ಲ

- ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ

 

01:11 PM (IST) Feb 01

ಕೇಂದ್ರ ಬಜೆಟ್ 2022-23: ಬಿಎಸ್‌ವೈ ಹೇಳಿದ್ದೇನು?

ಭಾರತ ಸರ್ಕಾರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ 2022-23 ಸಾಲಿನ ಆಯವ್ಯಯವು ಕೋವಿಡ್-19 ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ. ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತರ್ಹ ವಿಷಯ.

ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, 2023 ರ ವರ್ಷವನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯ” ವರ್ಷವೆಂದು ಘೋಷಣೆ ಮಾಡಿದ್ದು ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ.

01:09 PM (IST) Feb 01

ನಿರ್ಮಲಾ ಒಪ್ಪಿಸಿದ ಲೆಕ್ಕ ಹೇಗಿತ್ತು? ಆರ್ಥಿಕ ತಜ್ಞರು ಏನಂತಾರೆ?

ನಿರ್ಮಲಾ ಜನಪ್ರಿಯ ಬಜೆಟ್ ಮಂಡಿಸಿಲ್ಲ. ಆದರೆ, ಜನಪರ ಬಜೆಟ್ ಇದು ಎನ್ನುತ್ತಾರೆ ಆರ್ಥಿಕ ತಜ್ಞರು. ಶ್ರೀ ಸಾಮಾನ್ಯನಿಗೂ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಸಿಗಲಿಲ್ಲ ಎಂಬ ನೋವು. 80ಸಿ ಅಡಿಯಲ್ಲಾದರೂ ತೆರಿಗೆ ಉಳಿಸಿ ಹೆಚ್ಚುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ಸಿಕ್ಕಿದ್ದು ಏನೂ ಇಲ್ಲ. ವೀಕ್ಷಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್.
 

12:52 PM (IST) Feb 01

ಬಿಜೆಪಿ ಕಚೇರಿಯಲ್ಲಿ ಕಾರಜೋಳ, ಸಿಸಿ ಪಾಟೀಲ್ ಜಂಟಿ ಸುದ್ದಿಗೋಷ್ಠಿ

ನದಿ ಜೋಡಣೆ ಇದು ಐತಿಹಾಸಿಕ ಯೋಜನೆ. ಇತಿಹಾಸ ಪುಟದಲ್ಲಿ ಇರಲಿದೆ. ರೈತರ ಬದುಕನ್ನು ಹಸನಾಗಿಸುವ ಯೋಜನೆ ಇದು.ಈ ಯೋಜನೆ ತಂದಿರೋದಕ್ಕೆ ಪ್ರಧಾನಿ ಮೋದಿಗೆ ಕೃತಜ್ಞತೆ. ಎರಡು ಲಕ್ಷ ಅಂಗನವಾಡಿ ಮೇಲ್ದರ್ಜೆಗೆ. ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು. ಎಸ್‌ಟಿ ಎಸ್‌ಸಿ ಬಡ ರೈತರಿಗೆ ನೀರಾವರಿ ಸೌಲಭ್ಯ. ಇಡಿ ಕುಟುಂಬಕ್ಕೆ ಉದ್ಯೋಗ ಸೃಷ್ಟಿ. 400 ಹೊಸ ರೈಲು ಮಾರ್ಗ. ಅದರಲ್ಲಿ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ. 80 ಲಕ್ಷ ಮನೆ ನಿರ್ಮಾಣಕ್ಕೆ ರೂಪುರೇಷೆ: ಕಾರಜೋಳ

ಮುಂದಿನ 25 ವರ್ಷದ ಯೋಜನೆ ದೃಷ್ಟಿಯಲ್ಲಿ ಇರಿಸಿಕೊಂಡು ಬಜೇಟ್ ಮಾಡಿದ್ದಾರೆ. ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ. ಐವತ್ತು ವರ್ಷಗಳ ತನಕ ಬಡ್ಡಿ ರಹಿತ ಸಾಲ ಕೊಡುವ ಕೇಂದ್ರದ ಘೋಷಣೆ ಸ್ವಾಗತವೆಂದ ಸಿಸಿ ಪಾಟೀಲ್. 

12:48 PM (IST) Feb 01

ಜನಪ್ರಿಯ ಬಜೆಟ್ ಇದಲ್ಲ, ಜನಪರ ಬಜೆಟ್ ಇದು

ಶ್ರೀಸಾಮಾನ್ಯನ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಇಲ್ಲ. 34 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ನಿರ್ಮಲಾ ಸೀತರಾಮನ್. ಆದರೆ, ದೇಶದ ಆರ್ಥಿಕ ಸುಧಾರಣೆಗೆ ಬೇಕಾಗುವ ಟಾನಿಕ್ ಒದಗಿಸುವಂತೆ ಮಂಡನೆಯಾದ ಬಜೆಟ್. 

12:44 PM (IST) Feb 01

ಯಾವುದಿನ್ನು ಏರಿಕೆ? ಯಾವ ವಸ್ತುಗಳ ಬೆಲೆ ಇಳಿಕೆ?

ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ. ಮೊಬೈಲ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ. ವೈದ್ಯಕೀಯ ಉಪಕರಣಗಳು, ಔಷಧಗಳ ಅಬಕಾರಿ ಸುಂಕ ಇಳಿಕೆ. ಗುಜರಿ ಸ್ಟೀಲ್‌ಗೆ ಇನ್ನೂ ಒಂದು ಸುಂಕ ವಿನಾಯಿತಿ. ತೈಲ ಬೆಲೆ ಮತ್ತಷ್ಟು ಏರುವ ನಿರೀಕ್ಷೆ. ಅನ್‌ಬ್ಲೆಂಡಂಡ್ ತೈಲದ ಮೇಲೆ 2 ರೂ. ಸುಂಕ ಹೆಚ್ಚಳ. ಅನೇಕ ಅಂದಾಜುಗಳ ಹುಸಿಗೊಳಿಸುವಂತೆ ವಿಭಿನ್ನ ಬಜೆಟ್ ಮಂಡಿಸಿದ ಕೇಂದ್ರ ಸರಕಾರ. 

12:38 PM (IST) Feb 01

ರಾಜ್ಯ ಕೇಂದ್ರಿತ ಬಜೆಟ್ ಘೋಷಿಸಿದ ಕೇಂದ್ರ ಸರಕಾರ

ಆರ್ಥಿಕತೆಗೆ ಟಾನಿಕ್ ನೀಡುವ ಬಜೆಟ್. ಜನಪ್ರಿಯ ಘೋಷಣೆಗಳಿಲ್ಲ. ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿರುವ ಪಂಜ ರಾಜ್ಯಗಳಿಗೆ ಸಿಕ್ಕಿದ್ದು ಏನೂ ಇಲ್ಲ. ಎಲ್ಲರಿಗೂ ಒಂದೇ ಯೋಜನೆ. ಮುಂದಿನ 25 ವರ್ಷಗಳಲ್ಲಿ ದೇಶವನ್ನು ಯಾವ ರೀತಿ ಕಟ್ಟಬೇಕು ಎಂಬ ನೀಲಿ ನಕ್ಷೆಯನ್ನು ಇಟ್ಟುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್. 

 

 

12:33 PM (IST) Feb 01

ಬಜೆಟ್ ಮಂಡನೆ ಅಂತ್ಯ

ಕಚ್ಚಾ ವಜ್ರದ ಮೇಲಿನ ಆಮದು ಸುಂಕ ಶೇ.5 ಇಳಿಕೆ.  ಎಲೆಕ್ಷನ್ ಮರೆತು ದೂರದೃಷ್ಟಿಯ ಬಜೆಟ್ ಮಂಡಿದಿಸಿ ವಿತ್ತ ಸಚಿವೆ. ಆದಾಯ ತೆರಿಗೆಯಲ್ಲಿ ಇಲ್ಲ ಬದಲಾವಣೆ. ಪಂಚರಾಜ್ಯಗಳಿಗೆ ಪಂಚಾಮೃತ ಸಿಕ್ಕಲಿಲ್ಲ. 


More Trending News