ಈ ರಾಶಿಯವರಿಗೆ ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿದೆ

Published : Apr 11, 2019, 07:22 AM ISTUpdated : Apr 11, 2019, 08:04 AM IST
ಈ ರಾಶಿಯವರಿಗೆ ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿದೆ

ಸಾರಾಂಶ

ಇಂದು ನಿಮ್ಮ ರಾಶಿ ಫಲ ಹೇಗಿದೆ? ಯಾವ ರಾಶಿ ಯಾವ ಫಲ? ಯಾರಿಗೆ ಶುಭ? ಇಲ್ಲಿದೆ ನೋಡಿ ಇಂದಿನ ರಾಶಿ ಭವಿಷ್ಯ

ಮೇಷ: ಕ್ಷುಲ್ಲಕ ಕಾರಣಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಇಡೀ ದಿನ ನಿಮ್ಮ ಪಾಡಿಗೆ ನೀವಿದ್ದು ಬಿಡಲಿದ್ದೀರಿ. ನೆಮ್ಮದಿ ಇದೆ.

ವೃಷಭ: ಮತ್ತೊಬ್ಬರ ಕಷ್ಟಕ್ಕೆ ನೆರವು ನೀಡಲಿದ್ದೀರಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಜಯ

ಮಿಥುನ: ನಿಮ್ಮ ಪಾಲಿಗೆ ಬಂದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದೀರಿ. ಹೊಸ ಆಲೋಚನೆಗಳು ಹುಟ್ಟಿಕೊಳ್ಳಲಿವೆ

ಕಟಕ: ಕಹಿ ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಕೊರಗುವುದು ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಸಿಂಹ: ವಿದೇಶಿ ಪ್ರಯಾಣಕ್ಕೆ ಬೇಕಾದ ಎಲ್ಲಾ ತಯಾರಿಗಳೂ ಮುಕ್ತಾಯವಾಗಲಿವೆ. ರೈತರಿಗೆ ಹೆಚ್ಚಿನ ಸಿಂಹ ಅನುಕೂಲವಾಗಲಿದೆ. ನೆಮ್ಮದಿ ಹೆಚ್ಚಲಿದೆ.

ಕನ್ಯಾ: ನೀವು ಮಾಡಿದ ಕಾರ್ಯಕ್ಕೆ ತಕ್ಕದಾದ ಪ್ರತಿಫಲವನ್ನು ಹೊಂದಲಿದ್ದೀರಿ. ದ್ವಿಚಕ್ರ ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ತುಲಾ: ಮಾತು ಮಾತಿಗೂ ಸಿಡುಕು ಮಾಡಿಕೊಳ್ಳು ವುದು ಬೇಡ. ದೊಡ್ಡವರ ಮಾತಿಗೆ ಬೆಲೆ ತುಲಾ ನೀಡಿ. ಸಂತೋಷದಿಂದ ದಿನ ಕಳೆಯುವಿರಿ.

ವೃಶ್ಚಿಕ: ಹಳೆಯ ಸಾಲಗಳು ಇಂದು ವಾಪಸ್ ಆಗಲಿವೆ. ವ್ಯವಹಾರದಲ್ಲಿ ಕೊಂಚ ಹಿನ್ನಡೆ. ನಿಮ್ಮ ಕಾರ್ಯಗಳನ್ನು ನೀವೇ ಮಾಡಿಕೊಳ್ಳಬೇಕು.

ಧನುಸ್ಸು: ನಿಮ್ಮ ಶಕ್ತಿಯನ್ನು ಅರಿತುಕೊಂಡು ಕೆಲಸ ಕಾರ್ಯಗಳಿಗೆ ಕೈ ಹಾಕಿ. ದೂರದ ಬೆಟ್ಟ ಯಾವಾಗಲೂ ನುಣ್ಣಗೆ ಕಾಣುತ್ತದೆ.

ಮಕರ: ಕೈಗೆ ಸಿಗದ ದ್ರಾಕ್ಷಿ ಹುಳಿ ಎಂದುಕೊಂಡು ಸುಮ್ಮನೆ ಕೂರುವುದು ಬೇಡ. ನಿರಂತರ ಪ್ರಯತ್ನದಿಂದ ಯಶಸ್ಸು ಸಿಕ್ಕೇ ಸಿಕ್ಕುತ್ತದೆ.

ಕುಂಭ:ನಿಮ್ಮ ಮೇಲಿನ ಆರೋಪಗಳಿಗೆ ನಿಮ್ಮ ಕಾರ್ಯಗಳಿಂದಲೇ ಉತ್ತರ ಕೊಡಿ. ಅತಿ ಭಾವುಕತೆ ಒಳ್ಳೆಯದ್ದಲ್ಲ. ಸಂತೋಷ ಹೆಚ್ಚಲಿದೆ.

 ಮೀನ: ಹಿಂದು ಮುಂದು ಆಲೋಚನೆ ಮಾಡದೇ  ಯಾರಿಗೂ ಮಾತು ಕೊಡುವುದಕ್ಕೆ ಹೋಗದಿರಿ. ಸ್ನೇಹಿತರೊಂದಿಗೆ ಜಗಳ ಬೇಡ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ