Asianet Suvarna News Asianet Suvarna News

News Hour: ಸುಪ್ರೀಂಕೋರ್ಟ್​ ಕಟಕಟೆಯಲ್ಲಿ ಬರ ಪರಿಹಾರ ಫೈಟ್!


ಸುಪ್ರೀಂಕೋರ್ಟ್​ ಕಟಕಟೆಯಲ್ಲಿ ಬರ ಪರಿಹಾರ ಫೈಟ್ ಶುರುವಾಗಿದೆ. ಕೇಂದ್ರದ ವಿರುದ್ಧ ಕರ್ನಾಟಕ ಸರ್ಕಾರಕ್ಕೆ ಆರಂಭಿಕ ಜಯ ಸಿಕ್ಕಿದೆ. 2 ವಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ದ್ವಿಸದಸ್ಯ ಪೀಠ ಚಾಟಿ ಬೀಸಿದೆ.
 

ಬೆಂಗಳೂರು (ಏ.8): ಸುಪ್ರೀಂಕೋರ್ಟ್​ನಲ್ಲಿ ಬರ ಪರಿಹಾರಕ್ಕಾಗಿ ಕರ್ನಾಟಕ ಫೈಟ್‌ಗೆ ಆರಂಭಿಕ ಜಯ ಸಿಕ್ಕಿದೆ. ಬರ ಪರಿಹಾರ ಗೊಂದಲ ಹರಿಸಿಕೊಳ್ಳಲು 2 ವಾರ ಡೆಡ್​ಲೈನ್ಅನ್ನು ಕೇಂದ್ರ ಸರ್ಕಾರದ ಪರ ವಕೀಲರು ಕೇಳಿದ್ದಾರೆ.

ಎರಡು ವಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಸುಪ್ರೀಂ ಚಾಟಿ ಬೀಸಿದೆ. ನೋಟಿಸ್​ ನೀಡಬೇಡಿ.. 2 ವಾರದಲ್ಲಿ ಸಮಸ್ಯೆ ಬಗೆಹರಿಸ್ತೀವಿ. ಸುಪ್ರೀಂಕೋರ್ಟ್ ಎದುರು ಸಾಲಿಸಿಟರ್ ಜನರಲ್​ ವಾದ ಮಂಡಿಸಿದ್ದಾರೆ. ಎಲ್ಲ ವಿಚಾರಗಳಿಗೂ ರಾಜ್ಯ ಸುಪ್ರೀಂಕೋರ್ಟ್​ಗೆ ಬರಬೇಕಾ? ಅಲ್ಲದೇ ಈ ಮಾದರಿ ಅರ್ಜಿ ಹೊತ್ತು ಹಲವು ರಾಜ್ಯ ಬರುತ್ತಿವೆ. ಇಬ್ಬರ ಸ್ಪರ್ಧೆ ಬೇಡ.. 2 ವಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ನ್ಯಾ.ಬಿಆರ್ ಗವಾಯಿ, ಸಂದೀಪ್ ಮೆಹ್ತಾ ಪೀಠದಲ್ಲಿ ವಿಚಾರಣೆ ನಡೆದಿದೆ. ಕರ್ನಾಟಕ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ವಾದ ನಡೆಸಿದ್ದಾರೆ.