Asianet Suvarna News Asianet Suvarna News

Jaanu from Sweden: ‘ಎಲ್ಲಿ ನನ್ನವರು..? ದಯವಿಟ್ಟು ಹುಡುಕಿಕೊಡಿ’: ಇದು ರೋಚಕ..ಅಷ್ಟೇ ಭಾವುಕ ಕಥೆ..!

ತಾಯಿಯನ್ನ ಅರಸಿ ಬಂದವಳಿಗೆ ಬರಸಿಡಿಲು..!
ದೂರದ ಸ್ವೀಡನ್ನಿಂದ ಬಂದ ಕರುಳಿನ ಮೊಗ್ಗು..!
ಕಬಿನಿ ಹಿನ್ನೀರನ್ನ ನೆನಪಿಸಿದ ಆತ್ಮಹತ್ಯೆ ಘಟನೆ..!
 

ಇದೊಂದು ತುಂಬಾ ರೋಚಕ ಸಹಿತ ಭಾವುಕ ಕಥೆ. ತನ್ನ ಸಣ್ಣ ವಯಸ್ಸಿನಲ್ಲಿ ತಂದೆ ತಾಯಿಯಿಂದ ದೂರವಾಗಿ ಗೊತ್ತು ಗುರಿ ಇಲ್ಲದ ದೇಶದಲ್ಲಿ ಬೆಳೆದು ಈಗ ಮತ್ತೆ ತನ್ನವರನ್ನ ಹುಡುಕಿಕೊಂಡು ಬಂದ ಯುವತಿಯ ಕಥೆ. ಆಕೆ ಸಕ್ಕರೆ ನಾಡು ಮಂಡ್ಯದಲ್(Mandya)ಲಿ ಹುಟ್ಟಿ ಅರಮನೆ ನಗರಿಯಲ್ಲಿ(Mysore) 5 ವರ್ಷದ ತನಕ ಬೆಳೆದವಳು. ನಂತರ ದತ್ತುಪುತ್ರಿಯಾಗಿ ಸ್ವೀಡನ್(Sweden) ದೇಶಕ್ಕೆ ಹೋಗಿ ಬದುಕಿದವಳು. ಈಕೆಯ ಹುಟ್ಟು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಾದ್ರೆ, ಬಾಲ್ಯ ಕಳೆದಿದ್ದು ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯಲ್ಲಿ. 5ನೇ ವಯಸ್ಸಿಗೇ ವಿದೇಶಕ್ಕೆ ಹೋಗಿ ನೆಲೆಸಿದ ಬಾಲಕಿ ಈಗ ಮಧ್ಯ ವಯಸ್ಸಿನಲ್ಲಿ ಭಾರತಕ್ಕೆ(India) ಬಂದು ತಮ್ಮ ಮೂಲ ಪೋಷಕರನ್ನು ಹುಡುಕುತ್ತಿದ್ದಾಳೆ. ತನ್ನ ಕಣ್ಣಿಗೆ ಯಾರೇ ಕಂಡರೂ ಅವರು ನನಗೆ ಸಹಾಯ ಮಾಡ್ತಾರೆ ಅನ್ನೋ ಥರ ನೋಡ್ತಾ ಇದಾಳೆ. ಈಕೆಯ ಬದುಕಿನ ತಿರುವುಗಳ ಕಥೆ ಬಹಳ ಡಿಫರೆಂಟ್ ಆಗಿದೆ.

ಇದನ್ನೂ ವೀಕ್ಷಿಸಿ: Rakshit Shetty- sudeep: ಸುದೀಪ್‌, ರಕ್ಷಿತ್‌ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ ? ಈ ಬಗ್ಗೆ ಕಿಚ್ಚ ಹೇಳಿದ್ದೇನು ?

Video Top Stories