Asianet Suvarna News Asianet Suvarna News

ಬಿಜೆಪಿ ಮುಖಂಡನ ಪುತ್ರನಿಂದ ಗೂಂಡಾಗಿರಿ: ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರಿನ ರೆಸ್ಟೋರೆಂಟ್'ವೊಂದರಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ಗೂಂಡಾಗಿರಿ ನಡೆದಿದ್ದು, ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.
 

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ವಿಲೇಜ್‌ ರೆಸ್ಟೋರೆಂಟ್'ನಲ್ಲಿ ಬಿಜೆಪಿ ಮುಖಂಡ ಕೆ.ಸಿ ರಾಮಚಂದ್ರ ಅವರ ಪುತ್ರ ಧನು‍ಷ್ ದಾಂಧಲೆ ನಡೆಸಿದ್ದಾನೆ. ಹುಟ್ಟು ಹಬ್ಬದ ಪಾರ್ಟಿ ಮಾಡಿ ತಡರಾತ್ರಿ ರೆಸ್ಟೋರೆಂಟ್'ಗೆ ತೆರಳಿದ್ದಾರೆ. ಊಟ ಖಾಲಿ ಆಗಿದೆ ಹೇಳಿದ್ದಕ್ಕೆ ಅಲ್ಲಿನ ಸಿಬ್ಬಂದಿ ಮೇಲೆ 15 ರಿಂದ 20 ಮಂದಿಯಿಂದ ಹಲ್ಲೆ ಮಾಡಲಾಗಿದೆ. ಮಹಿಳಾ ಸಿಬ್ಬಂದಿ ಮೇಲೂ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

Video Top Stories