05:01 PM (IST) May 12

ಕುಬ್ಬನ್ ಪಾರ್ಕ್‌ ಹೊಸ ನಿಯಮಗಳು; ಶಿಸ್ತು ತರಬೇಕೋ? ನಿಷೇಧ ಹೇರಬೇಕೋ? ಬೆಂಗಳೂರಿಗರ ಆಕ್ರೋಶ!

ಕಬ್ಬನ್ ಪಾರ್ಕ್‌ನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಊಟ, ಫೋಟೋಶೂಟ್, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಹಿರಿಯ ನಾಗರಿಕರು ಈ ನಿಯಮಗಳನ್ನು ವಿರೋಧಿಸಿದ್ದು, ಪರ್ಯಾಯ ಪರಿಹಾರಗಳನ್ನು ಸೂಚಿಸಿದ್ದಾರೆ.

ಪೂರ್ತಿ ಓದಿ
04:06 PM (IST) May 12

ಬೆಂಗಳೂರಿನ ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಡೊನಾಲ್ಡ್ ಟ್ರಂಪ್‌ಗೆ ಮಧ್ಯಸ್ಥಿಕೆ ವಹಿಸಲು ಮನವಿ!

ಬೆಂಗಳೂರಿನ ಈಜಿಪುರ ಫ್ಲೈಓವರ್ ಕಾಮಗಾರಿ ವಿಳಂಬದಿಂದ ಬೇಸತ್ತ ನಿವಾಸಿಯೊಬ್ಬರು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಧ್ಯಸ್ಥಿಕೆ ವಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಈ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫ್ಲೈಓವರ್‌ಗೆ 'ಮೆಗಾ ಟ್ರಂಪ್ ಫ್ಲೈಓವರ್' ಎಂದು ಹೆಸರಿಡುವುದಾಗಿ ತಿಳಿಸಿದ್ದಾರೆ.

ಪೂರ್ತಿ ಓದಿ
03:10 PM (IST) May 12

ಭಾರತದ ಭಿಕ್ಷಾಟನೆ ಮುಕ್ತ ನಗರ ಯಾವುದು? ಇಲ್ಲಿ ಭಿಕ್ಷೆ ಬೇಡಿದರೆ ಕೊಲೆ ಮಾಡಿದಷ್ಟೇ ಅಪರಾಧ!

ಒಂದು ವರ್ಷದ ಅಭಿಯಾನದ ನಂತರ, ಈ ನಗರವನ್ನು ಭಾರತದ ಮೊದಲ ಭಿಕ್ಷುಕ-ಮುಕ್ತ ನಗರವೆಂದು ಘೋಷಿಸಲ್ಪಟ್ಟಿದೆ. ಇಲ್ಲಿ ವಯಸ್ಕ ಭಿಕ್ಷುಕರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಮತ್ತು ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಮೂಲಕ ಭಿಕ್ಷುಕರ ಮುಕ್ತ ನಗರ ನಿರ್ಮಾಣ ಮಾಡಲಾಗಿದೆ.

ಪೂರ್ತಿ ಓದಿ
11:36 AM (IST) May 12

ಕಾಶ್ಮೀರವನ್ನ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ಕರ್ನಾಟಕ ಕಾಂಗ್ರೆಸ್: ಡಿಕೆಶಿ ಆಕ್ರೋಶ

ಭಾರತ-ಪಾಕಿಸ್ತಾನ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ, ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ಪೋಸ್ಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ. 

ಪೂರ್ತಿ ಓದಿ
11:29 AM (IST) May 12

ಕೆಮಿಕಲ್‌ ಕಂಪನಿಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗ ಕಾರ್ಮಿಕರು?: ಮಾಹಿತಿ ಮುಚ್ಚಿಡುವುದೇಕೆ?

ಈಗ, ಕಾರ್ಖಾನೆಯಲ್ಲಿ ಬಾಲಕಾರ್ಮಿಕರನ್ನಷ್ಟೇ ಅಲ್ಲ, ಅನ್ಯರಾಜ್ಯಗಳ, ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರನ್ನು ಕರೆಯಿಸಿಕೊಂಡಿರುವ ಸಾಧ್ಯತೆಯಿದೆ. ಹತ್ತಾರು ಕಾರ್ಮಿಕರು ಇಲ್ಲಿ ಇರಬಹುದಾದ ಶಂಕೆ ವ್ಯಕ್ತವಾಗಿದೆ. 

ಪೂರ್ತಿ ಓದಿ
11:05 AM (IST) May 12

ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...: ತನ್ನ ಇರುವನ್ನೇ ಮರೆತ ಮನುಷ್ಯನನ್ನು ಅಕ್ರಮಿಸಿದ ಕ್ರೌರ್ಯ

ಈ ನಡುವೆ ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿ ರೂಪಿಸಿಕೊಳ್ಳಲು ಇರುವ ಮಾರ್ಗಶೋಧದಲ್ಲಿ ‘ಧರ್ಮವೇ’ ದೀಪವಾಗಿ ತೋರಿತು. ಈ ಹಣತೆಗೆ ಹನಿ ಎಣ್ಣೆ ಸುರಿದು ಅದೇ ಬೆಳಕಿನಲ್ಲಿ ಬದುಕುವ ಪ್ರಯತ್ನವನ್ನು ನಿರಂತರವಾಗಿ ಜಾರಿಯಲ್ಲಿಟ್ಟ ಮನುಷ್ಯನಿಗೆ, ಅದೇ ಮತಧರ್ಮಗಳು ಸಂಕೋಲೆಗಳಾಗಿ‌ ಪರಿಣಮಿಸಿದ್ದು ಮಾತ್ರ ವಿಪರ್ಯಾಸವೇ ಸರಿ!
 

ಪೂರ್ತಿ ಓದಿ
10:34 AM (IST) May 12

ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ: ತಳ್ಬೇಡ್ರಿ ಸಿಎಂ ಹೊಡೀತಾರೆ ಅಂತ ಭಯಗೊಂಡಿದ್ದೇಕೆ?

ಸುಮಾರು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಆ ಆಜ್ಜನಿಗೆ ಆ ರಾತ್ರಿ ಒಂದು ಕನಸು ಬಿದ್ದಿದೆ. ಆ ಕನಸಿನಲ್ಲಿ ಪುತ್ರನೇ ಅಜ್ಜನ ಪತ್ನಿಯನ್ನು ಕೊಲೆ ಮಾಡಿ ಬಿಟ್ಟಿದ್ದಾನೆ.

ಪೂರ್ತಿ ಓದಿ
10:09 AM (IST) May 12

ಇನ್ನೂ ಮೃತರ ಹೆಸರಲ್ಲೇ ಇವೆ 52 ಲಕ್ಷ ಜಮೀನು ಖಾತೆ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದಲ್ಲಿ 52 ಲಕ್ಷ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇವೆ. ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ.

ಪೂರ್ತಿ ಓದಿ
09:51 AM (IST) May 12

ಬಲಾತ್ಕಾರ ಕೇಸ್‌ನಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಹೈಕೋರ್ಟ್‌ ಆದೇಶ

ಯಾವುದೇ ತಾಯಿ ದೂರು ದಾಖಲಿಸುವ ಮೂಲಕ ತನ್ನ ಮಗಳ ಜೀವನ ಹಾಳುಮಾಡುವುದಿಲ್ಲ ಎಂಬ ಏಕೈಕ ಅಂಶ ಆಧರಿಸಿ ಆರೋಪಿಯನ್ನು ದೋಷಿಯೆಂದು ನಿರ್ಧರಿಸಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ. 

ಪೂರ್ತಿ ಓದಿ
09:43 AM (IST) May 12

ರಾಜ್ಯದಲ್ಲಿ 100 ಕಾಂಗ್ರೆಸ್ ಭವನ ಸ್ಥಾಪಿಸುವ ಉದ್ದೇಶ: ಡಿ.ಕೆ.ಶಿವಕುಮಾರ್

ಮಹಾತ್ಮ ಗಾಂಧಿರವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ 100 ವರ್ಷಗಳ ಸ್ಮರಣಾರ್ಥ ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಪೂರ್ತಿ ಓದಿ
09:01 AM (IST) May 12

ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಆಟೋದಲ್ಲಿಟ್ಟು ಪರಾರಿ: ಓರ್ವನ ಬಂಧನ

ಅನೈತಿಕ ಸಂಬಂಧಕ್ಕೆ ಜನಿಸಿದ್ದ ಸುಮಾರು 15 ದಿನಗಳ ಹೆಣ್ಣು ಹಸುಗೂಸನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.

ಪೂರ್ತಿ ಓದಿ
08:44 AM (IST) May 12

Bengaluru: ಬಿಬಿಎಂಪಿ ವ್ಯಾಪ್ತಿಯ 66 ಕೆರೆಗಳು ಸಂಪೂರ್ಣ ಖಾಲಿ

ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 66 ಕೆರೆಗಳು ಸಂಪೂರ್ಣವಾಗಿ ಬರಿದಾಗಿದ್ದು, ಒಟ್ಟಾರೆ 134 ಕೆರೆಗಳಲ್ಲಿ ನೀರಿನ ಮಟ್ಟ ಅರ್ಧಕ್ಕಿಂತ ಕಡಿಮೆಯಾಗಿದೆ. 

ಪೂರ್ತಿ ಓದಿ
07:59 AM (IST) May 12

ಯೆಲ್ಲೋ ಅಲರ್ಟ್‌: ಮುಂದಿನ ಐದು ದಿನ ರಾಜ್ಯದ ಈ 14 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ

ರಾಜ್ಯದಲ್ಲಿ ಮತ್ತೆ ಪೂರ್ವ ಮುಂಗಾರು ಚುರುಕುಗೊಳ್ಳುವ ಲಕ್ಷಣ ಕಂಡು ಬರುತ್ತಿದ್ದು, ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. 

ಪೂರ್ತಿ ಓದಿ

07:55 AM (IST) May 12

ಶಾಕಿಂಗ್ ನ್ಯೂಸ್: ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್ ಪೂಜಾರಿ ನಿಧನ

ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ರಾಕೇಶ್ ಪೂಜಾರಿ ವಿಧಿವಶರಾಗಿದ್ದಾರೆ. ಅವರು ಕಳೆದ ರಾತ್ರಿ  ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು. 

ಪೂರ್ತಿ ಓದಿ