Asianet Suvarna News Asianet Suvarna News

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸುಧಾರಣೆ ತರಲಿ: ಎಸ್‌.ಎಂ.ಕೃಷ್ಣ ಮನವಿ

ಜೀವನದ ಸಂಧ್ಯಾಕಾಲದಲ್ಲಿರುವ ನಮಗೆ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಬೇಕು ಅನ್ನಿಸುತ್ತಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯಲ್ಲಿ ನೆರವೇರಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮನವಿ ಮಾಡಿದರು. 

Let Prime Minister Narendra Modi bring election reform Says SM Krishna gvd
Author
First Published Mar 18, 2024, 9:09 AM IST

ಮೈಸೂರು (ಮಾ.18): ಜೀವನದ ಸಂಧ್ಯಾಕಾಲದಲ್ಲಿರುವ ನಮಗೆ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಬೇಕು ಅನ್ನಿಸುತ್ತಿದೆ. ಇದನ್ನು ಪ್ರಧಾನಿ ನರೇಂದ್ರಮೋದಿ ಅವರು ತಮ್ಮ ಮೂರನೇ ಅವಧಿಯಲ್ಲಿ ನೆರವೇರಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮನವಿ ಮಾಡಿದರು. ನಗರದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಚುನಾವಣಾ ರಾಜಕೀಯದಲ್ಲಿ ಬದಲಾವಣೆ ಆಗಬೇಕು. ಚುನಾವಣೆಯಲ್ಲಿ ನೂರಾರು ಕೋಟಿ ಖರ್ಚು ಮಾಡುವವರು ಇದ್ದಾರೆ. ಆದರೆ ರಾಜಕೀಯದಲ್ಲಿ ಹಿಂದಿರುಗಿ ನೋಡಿದಾಗ ಸುಧಾರಣೆ ಆಗಬೇಕು ಅನ್ನಿಸುತ್ತದೆ ಹಾಗೂ ಅಲ್ಲದೆ ಚುನಾವಣೆಯಲ್ಲಿ ಮೌಲ್ಯಗಳಿವೆಯಾ ಎಂಬ ಪ್ರಶ್ನೆ ಕಾಡುತ್ತದೆ ಎಂದರು. ನಾವು ಈಗ ಜೀವನದ ಸಂಧ್ಯಾಕಾಲದಲ್ಲಿದ್ದೇವೆ. ಎಲ್ಲಾ ಪದವಿ ಮತ್ತು ಸವಲತ್ತು ಹೊಂದಿದ್ದೇನೆ. ಆದರೆ ಈ ಸಂದರ್ಭದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗುತ್ತಿದ್ದೆ. ಶೇಷನ್‌ ಎಂಬ ಚುನಾವಣಾ ಆಯುಕ್ತರು ಇದ್ದರು. ಅವರು ಬಂದರೆ ನಾವು ನಡುಗುತ್ತಿದ್ದೆವು. ಅಷ್ಟು ಎದರಿಕೆ, ಶಿಸ್ತು ಮೂಡಿಸಿದ್ದರು. 

ಒಬಿಸಿ ವೋಟ್‌ಬ್ಯಾಂಕ್ ಮಾಡಿಕೊಳ್ಳುವ ಕಾಂಗ್ರೆಸ್‌ ಹುನ್ನಾರ ಫಲಿಸುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ಈಗ ಪ್ರಧಾನಿ ನರೇಂದ್ರಮೋದಿ ಅವರು ದೇಶವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮೂರನೇ ಅವಧಿಗೆ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಈ ವೇಳೆ ಹಣದ ಸುಳಿಯಿಂದ ಚುನಾವಣೆ ರಕ್ಷಿಸಲು ಅಗತ್ಯತಂತ್ರಗಾರಿಕೆ ಮಾಡಬೇಕು. ಇದಕ್ಕಾಗಿ ಈ ವೇದಿಕೆ ಬಳಸಿಕೊಳ್ಳುತ್ತಿದ್ದೇನೆ ಎಂದರು. ಅಶೋಕಪುರಂನ ಪ್ರತಿ ಮನೆಯಲ್ಲೂ ಪ್ರಸಾದ್‌ ಅವರ ಬೆಂಬಲಿಗರು ಇದ್ದರು. ಅಯಸ್ಕಾಂತ ಶಕ್ತಿ ಹೊಂದಿದ್ದಾರೆ ಎಂದರೆ ಅತಿಶಯೋಕ್ತಿ ಆಗದು. ಮೈಸೂರಿನ ಜನ ಪ್ರಬುದ್ಧರು, ಅಗಾಧವಾದ ವಿಷಯ ತಿಳಿದಿದ್ದಾರೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಇದ್ದಾರೆ. ರಾಜಕೀಯ ಜಾಗೃತಿಗೆ ಮೈಸೂರು ಮಾದರಿಯಾದದ್ದು ಎಂದರು.

ಶ್ರೀನಿವಾಸ ಪ್ರಸಾದ್‌ ಅವರು ಹೊಂದಿರುವ ಮೌಲ್ಯವನ್ನು ಗಮನಿಸಬೇಕು. ಅವರು ಜನ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದರು. ಎಲ್ಲರ ಜತೆಗೂಡಿ ಸ್ನೇಹದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಹಾಡಿ ಹೊಗಳುತ್ತೇವೆ. ಆದರೆ ಪ್ರಜಾಪ್ರಭುತ್ವ ಯಾವ ಧಿಕ್ಕಿಗೆ ಹೋಗುತ್ತಿದೆ ಎಂಬುದನ್ನು ನೋಡಬೇಕಿದೆ ಎಂದು ಅವರು ಹೇಳಿದರು. ಐದು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಸುವುದೇ ಪ್ರಜಾಪ್ರಭುತ್ವ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ಕೆಲ ಘಟನೆ ನೋಡಿದರೆ ಹಾಗೆ ಅನ್ನಿಸುತ್ತದೆ. ಏಕೆಂದರೆ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾಗ ಜನರೇ ಮುಂದೆ ಬಂದು ಹಣ ಕೊಡುತ್ತಿದ್ದರು. 

1962 ರಲ್ಲಿ ದೊಡ್ಡ ಚುನಾವಣೆ. ವೀರಣ್ಣಗೌಡರನ್ನು ಎದುರಿಸಿದ್ದೆ. 1971ರ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ 10 ಸಾವಿರ ನೀಡಿದರು. ಅದೇ ಮೊದಲು ಹತ್ತು ಸಾವಿರದ ಕಂತೆಯನ್ನು ನಾನು ನೋಡಿದ್ದು ಎಂದು ಅವರು ಉದ್ಘರಿಸಿದರು. ಅಲ್ಲಿಂದ ಮುಂದಕ್ಕೆ ದುರಾದೃಷ್ಟವಶಾತ್ ಹಣದ ಪ್ರಭಾವ ಹೇಗಿದೆ ಎಂಬ ಬಗ್ಗೆ ನೋಡಬೇಕು. ಚುನಾವಣೆ ಈಗ ಹಣದ ಮೇಲೆ ನಿಂತಿದೆ. ನಾವು ಹಣದ ಮೇಲೆ ನಿಯಂತ್ರಣ ಹೊಂದದ ಹೊರತು ಸಾಮಾಜಿಕ ನಿಯಂತ್ರಣ ಹೊಂದಲು ಸಾಧ್ಯವಿಲ್ಲ. ಪ್ರಸಾದ್‌ಅವರ ಜತೆ ನಾನು ಒಡನಾಡಿದ್ದೇನ. ಅವರ ಬಗ್ಗೆ ವ್ಯಕ್ತಿಗತ ಗೌರವವಿದೆ, ಅವರಿಗೆ ದೇವರು ಎಲ್ಲಾ ರೀತಿಯ ಶುಭವನ್ನು ಕರುಣಿಸಲಿ ಎಂದು ಆಶಿಸಿದರು.

ಅಭಿನಂದನಾ ಸಮಿತಿ ಅಧ್ಯಕ್ಷ ಪಿ.ಜಿ.ಆರ್‌. ಸಿಂಧ್ಯಾ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರಸಾದ್‌ ಅವರು ಅಳವಡಿಸಿಕೊಂಡವರು, ಇತರೆ ರಾಜಕಾರಣಿಗಳಂತೆ ಹೌದಪ್ಪಗಳಲ್ಲ. ಎಲ್ಲರ ವಿಶ್ವಾಸ ಗಳಿಸಿದ ಅಜಾತ ಶತ್ರು. ಪ್ರಸಾದ್‌ ಅವರ ಮಾತು ಮಾರ್ಗದರ್ಶಕ. ಅವರು ಸಚ್ಚಾರಿತ್ರ್ಯ ಬೆಳಸಿಕೊಂಡವರು. ಪ್ರಸಾದ್‌ಅವರ ಜೀವನ ತೆರೆದ ಕನ್ನಡಿ, ಅನೇಕ ಘಟನೆಗಳಲ್ಲಿ ನೋಡಿದ್ದೇನೆ, ಇದ್ದದ್ದನ್ನು ಇದ್ದ ಹಾಗೆ ಮುಖಕ್ಕೆ ಹೇಳುತ್ತಾರೆ ಆದರೆ ಅದನ್ನೇ ಅಪಾರ್ಥಮಾಡಿಕೊಂಡು ಪ್ರಸಾದ್‌ಅವರು ಒಂದು ಕೋಮಿನ ವಿರೋಧಿ ಎಂದು ಬಿಂಬಿಸಲಾಗಿತ್ತು ಎಂದು ಹೇಳಿದರು.

ಪ್ರಸಾದ್‌ ಅವರ ನಿವೃತ್ತಿ ಬೇಸರ ತರಿಸಿದೆ. ಅವರಿಗೆ ಆರೋಗ್ಯ ತಕ್ಕಮಟ್ಟಿಗೆ ಇದೆಯಾದರೂ, ನೆನಪಿನ ಶಕ್ತಿ ಅಗಾಧವಾಗಿದೆ. ಪ್ರಸಾದ್‌ ಅವರಿಗೆ ದೇವರ ಆರೋಗ್ಯ, ಆಯಸ್ಸು, ನೀಡಲಿ ಎಂದು ಆಶಿಸಿದರು. ಪುಸ್ತಕ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್‌ ಮಾತನಾಡಿ, ಪ್ರಸಾದ್‌ ಅವರು ಮುತ್ಸದ್ದಿ ರಾಜಕಾರಣಿ. ರಾಜಕಾರಣಿಗಳು ಮುಂದಿನ ಚುನಾವಣೆ ಕುರಿತು ಯೋಚಿಸುತ್ತಾರೆ. ಆದರೆ ಮುತ್ಸದ್ಧಿಗಳು ಮುಂದಿನ ಜನಾಂಗದ ಕುರಿತು ಯೋಚಿಸುತ್ತಾರೆ. ಅಂತಹ ಮಹಾನುಭಾವರು ಪ್ರಸಾದ್‌ ಎಂದರು. ಪ್ರಸಾದ್‌ ಅವರಿಗೆ ಲೌಖಿಕ ಲಾಭದ ಉದ್ದೇಶವಿಲ್ಲ. 

ಕೆಂದ್ರದಲ್ಲಿ ಪ್ರಮುಖ ಖಾತೆ ಹೊಂದಲು ಕ್ಷೇತ್ರ ಮತದಾರರು ಕಾರಣ: ಸಚಿವ ಪ್ರಲ್ಹಾದ್‌ ಜೋಶಿ

ಅವರೊಬ್ಬ ಸ್ವಾಭಿಮಾನಿ. ಅಂಬೇಡ್ಕರ್‌ ಮತ್ತು ಬುದ್ಧ ಅವರ ಒಳಗಣ್ಣು. ಅನಿವಾರ್ಯವಾಗಿ ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಹೊರತು ಸ್ವಾಭಿಮಾನ ಬಲಿಕೊಟ್ಟಿಲ್ಲ. ಅವರು ಪಕ್ಷಾಂತರಿ ಇರಬಹುದು, ಆದರೆ ತತ್ತ್ವಾಂತರಿ ಅಲ್ಲ ಎಂದರು. ರಾಜಕೀಯದಲ್ಲಿ ಮೂರನ್ನು ಬಿಟ್ಟವರುಂಟು. ಆದರೆ ಮೂರನ್ನೂ ಭದ್ರವಾಗಿಟ್ಟುಕೊಂಡು ನಿಷ್ಠೂರ ರಾಜಕೀಯ ಮಾಡಿದ್ದಾರೆ. ಸ್ವಾಭಿಮಾನಿ ನೆನಪುಗಳು ಅಭಿನಂದನಾ ಗ್ರಂಥವು ಅಪರೂಪದ ಪುಸ್ತಕ. ಅದೊಂದು ಜ್ಞಾಪಕ ಚಿತ್ರಶಾಲೆ. ನೆನಪುಗಳ ಮಂಧಾರ ಮಾಲೆ. ಕೆಲವು ನೆನಪು ಕಹಿ ಇರಬಹುದು. ಇದೊಂದು ಸ್ವಚ್ಛ ನೆನಪುಗಳ ಗುಚ್ಛ. ಮುಂದೆ ರಾಜಕೀಯಕ್ಕೆ ಬರುವವರಿಗೆ ಇಂದೊಂದು ಕೈಪಿಡಿ ಎಂದರು.

Follow Us:
Download App:
  • android
  • ios