ಚಾಮರಾಜನಗರ: ಸಾಲಕ್ಕೆ ಹೆದರಿ ಕಾರ್ಪೆಂಟರ್ ಆತ್ಮಹತ್ಯೆ
ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ಚಿನ್ನಸ್ವಾಮಿ ಶವ ಪತ್ತೆಯಾಗಿದೆ. ಚಿನ್ನಸ್ವಾಮಿ ಚಾರಿ ಸಾವಿನ ಬಗ್ಗೆ ಅನುಮಾನವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗುಂಡ್ಲುಪೇಟೆ(ನ.03): ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿವಪುರ ಗ್ರಾಮದ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಕಾರ್ಪೆಂಟರ್ ಚಿನ್ನಸ್ವಾಮಿಚಾರಿ(50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಈ ಸಂಬಂಧ ಮೃತರ ಪುತ್ರ ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ ನ.1 ರಂದು ಬೆಳಗ್ಗೆ ಕೆಲಸಕ್ಕೆ ಹೋದ ಚಿನ್ನಸ್ವಾಮಿಚಾರಿ ರಾತ್ರಿಯಾದರೂ ಮನೆಗೆ ಬರಲಿಲ್ಲ. ನ.2 ರ ಬೆಳಗ್ಗೆ ಕಲ್ಕಟ್ಟೆ ಕೆರೆಯ ಬಳಿ ಚಿನ್ನಸ್ವಾಮಿಚಾರಿ ಚಪ್ಪಲಿ ಸಿಕ್ಕ ನಂತರ ಸಂಶಯಗೊಂಡ ಪುತ್ರ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದ್ದಾರೆ.
ಬಟ್ಟ ಬಯಲಿನಲ್ಲಿ ಮಹಿಳೆಯ ಸೀರೆ ಹಿಡಿದೆಳೆದ ಪರಪುರುಷ: ಮನನೊಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ
ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ಚಿನ್ನಸ್ವಾಮಿ ಶವ ಪತ್ತೆಯಾಗಿದೆ. ಚಿನ್ನಸ್ವಾಮಿ ಚಾರಿ ಸಾವಿನ ಬಗ್ಗೆ ಅನುಮಾನವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.