ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌

Kannadaprabha News   | Kannada Prabha
Published : Sep 14, 2025, 04:22 AM IST
Zakir Naik

ಸಾರಾಂಶ

ಧಾರ್ಮಿಕ ಉಗ್ರವಾದ ಹರಡುವಿಕೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್‌ ನಾಯ್ಕ್‌ಗೆ ಎಚ್‌ಐವಿ ಏಡ್ಸ್ ತಗುಲಿದೆ ಎಂಬ ಊಹಾಪೋಹಗಳ ನಡುವೆಯೇ, ‘ನನಗೆ ಏಡ್ಸ್‌ ಇಲ್ಲ’ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಕೌಲಾಲಂಪುರ (ಮಲೇಷ್ಯಾ): ಧಾರ್ಮಿಕ ಉಗ್ರವಾದ ಹರಡುವಿಕೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್‌ ನಾಯ್ಕ್‌ಗೆ ಎಚ್‌ಐವಿ ಏಡ್ಸ್ ತಗುಲಿದೆ ಎಂಬ ಊಹಾಪೋಹಗಳ ನಡುವೆಯೇ, ‘ನನಗೆ ಏಡ್ಸ್‌ ಇಲ್ಲ’ ಎಂದು ಆತ ಸ್ಪಷ್ಟಪಡಿಸಿದ್ದಾನೆ. ಇದೇ ವೇಳೆ, ‘ಆತ ಗುಣಪಡಿಸಲಾಗದ ವೈರಾಣು ಕಾಯಿಲೆಯಿಂದ ಬಳಲುತ್ತಿದ್ದಾನೆ ಹಾಗೂ ಮಲೇಷ್ಯಾದ ಪ್ರಖ್ಯಾತ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಕಾಯಿಲೆಯ ಹೆಸರು ಹೇಳಿಲ್ಲ.

ನಾಯ್ಕ್‌ಗೆ ಮತ್ತು ಆತನ ಪತ್ನಿ ಫರ್ಹತಾ ನಾಯ್ಕ್ ಹಾಗೂ ಜಿಕ್ರಾ ನಾಯ್ಕ್‌ಗೆ ಎಚ್ಐವಿ ಏಡ್ಸ್‌ ಇದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಸಂದೇಶ ಹರಿದಾಡುತ್ತಿವೆ. ಈ ಬಗ್ಗೆ ನಾಯ್ಕ್‌ ಪರವಾಗಿ ಆತನ ವಕೀಲ ಅಕ್ಬರ್‌ದಿನ್ ಅಬ್ದುಲ್‌ ಖಾದಿರ್‌ ಮಲೇಷ್ಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿ, ‘ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಂದೇಶಗಳು ಸುಳ್ಳು. ಅವು ಸಂಪೂರ್ಣ ಆಧಾರರಹಿತ. ಅವು ನಕಲಿ ಸುದ್ದಿ. ಇಂಥ ವದಂತಿಕೋರರ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಝಾಕಿರ್‌ ಯೋಚಿಸುತ್ತಿದ್ದಾರೆ’ ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಝಾಕಿರ್‌- ವರದಿ:

ಇದೇ ವೇಳೆ, ‘ಝಾಕಿರ್‌ ಸಾಂಕ್ರಾಮಿಕ ರೋಗಗಳು, ಆಂಕೊಲಾಜಿ, ಹೃದ್ರೋಗ, ಎಚ್ಐವಿ, ಚಯಾಪಚಯ ಅಸ್ವಸ್ಥತೆಗಳ ಚಿಕಿತ್ಸೆಗೆ ಹೆಸರಾಗಿರುವ ಸನ್‌ವೇ ವೈದ್ಯಕೀಯ ಕೇಂದ್ರದಲ್ಲಿ ದಾಖಲಾಗಿದ್ದು, ಬಿಗಿ ಭದ್ರತೆಯಲ್ಲಿದ್ದಾನೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ. ಆದರೆ ಈ ಬಗ್ಗೆ ಆತನ ಕುಟುಂಬ ಅಥವಾ ಮಲೇಷ್ಯಾ ಸರ್ಕಾರದಿಂದ ಅಧಿಕೃತ ಮಾಹಿತಿ ಲಭಿಸಿಲ್ಲ.

2016ರಿಂದ ಮಲೇಷ್ಯಾದಲ್ಲೇ ನೆಲೆಸಿ ಅಲ್ಲಿನ ನಾಗರಿಕತ್ವ ಪಡೆದಿರುವ ನಾಯ್ಕ್‌ ಮೇಲೆ ಭಯೋತ್ಪಾದನೆಗೆ ಹಣಕಾಸು ನೆರವು, ಯುವಕರನ್ನುದ್ದೇಶಿಸಿ ದ್ವೇಷ ಭಾಷಣ ಮತ್ತು ಮೂಲಭೂತವಾದವನ್ನು ಉಪಗ್ರಹ ಟಿವಿ ಚಾನೆಲ್‌ ಮೂಲಕ ಹರಡುವುದು- ಇತ್ಯಾದಿ ಆರೋಪಗಳಿವೆ. ಈ ಸಂಬಂಧ ತನಿಖೆಗೆ ನಡೆಸಲು ಹಸ್ತಾಂತರಿಸುವಂತೆ ಭಾರತ ವರ್ಷಗಳಿಂದ ಆಗ್ರಹಿಸುತ್ತಿದೆ.

ಧಾರ್ಮಿಕ ಉಗ್ರವಾದ, ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಭಾರತಕ್ಕೆ ಬೇಕಾಗಿರುವ ಝಾಕಿರ್‌ ನಾಯ್ಕ್‌ ಸದ್ಯ ಮಲೇಷ್ಯಾದಲ್ಲಿ ವಾಸ

ಝಾಕಿರ್‌, ಆತನ ಪತ್ನಿ, ಪುತ್ರ ಏಡ್ಸ್‌ನಿಂದ ಬಳಲುತ್ತಿದ್ದಾರೆ ಎಂದು ಭಾರೀ ವದಂತಿ. ಅದರ ಬೆನ್ನಲ್ಲೇ ಅಂಥದ್ದೇನಿಲ್ಲ ಎಂದು ಸ್ಪಷ್ಟನೆ

ಝಾಕಿರ್‌ಗೆ ಗುಣಪಡಿಸಲಾಗದ ಕಾಯಿಲೆ ಇದೆ. ಹೀಗಾಗಿ ಆಸ್ಪತ್ರೆಗೆ ದಾಖಲು ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮ ವರದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!