
ಲಕ್ನೋ(ಮಾ.15): ಕೆಲವೊಮ್ಮೆ ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡಿದಾಗ ನಾವು ಕೇಳಿದ್ದು ಒಂದು, ಹೋಟೆಲ್ನವರು ತಂದುಕೊಡುವುದು ಇನ್ನೊಂದು...ಹೀಗಾಗುವುದು ಸಹಜ.
ಆದರೆ ಉತ್ತರ ಪ್ರದೇಶದ ಮಹಿಳೆಯೊಬ್ಬರು ವೆಜ್ ಪಿಜ್ಜಾ ಆರ್ಡರ್ ಮಾಡಿ, ರೆಸ್ಟೋರೆಂಟ್ನವರು ನಾನ್ವೆಜ್ ಪಿಜ್ಜಾ ತಂದುಕೊಟ್ಟಿದ್ದಕ್ಕೆ 1 ಕೋಟಿ ರು. ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಲ್ಲಿನ ಗಾಜಿಯಾಬಾದ್ನ ದೀಪಾಲಿ ತ್ಯಾಗಿ ಮೂಲತಃ ಸಸ್ಯಾಹಾರಿ. ಇವರು ಮಾ.21, 2019ರಲ್ಲಿ ಹತ್ತಿರದ ಪಿಜ್ಜಾ ಹಟ್ನಿಂದ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ರೆಸ್ಟೋರೆಂಟ್ ಹೋಂ ಡೆಲಿವರಿ ಮಾಡಿದ್ದ ಪಿಜ್ಜಾ ನಾನ್ವೆಜ್ ಆಗಿತ್ತು.
ಹೀಗಾಗಿ ದೀಪಾಲಿ ಅವರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೂರು ನೀಡಿ, 1 ಕೋಟಿ ರು. ಪರಿಹಾರ ಕೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ