ಭಾರತಕ್ಕೆ ಭೇಷ್ ಎಂದ ವಿಶ್ವ ಆರೋಗ್ಯ ಸಂಸ್ಥೆ!

Kannadaprabha News   | Asianet News
Published : Mar 18, 2020, 07:17 AM IST
ಭಾರತಕ್ಕೆ ಭೇಷ್ ಎಂದ ವಿಶ್ವ ಆರೋಗ್ಯ ಸಂಸ್ಥೆ!

ಸಾರಾಂಶ

 ಕೊರೋನಾ ವೈರಸ್‌ ತಡೆ ಮತ್ತು ನಿವಾರಣೆ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌​ಒ) ಬಹುವಾಗಿ ಮೆಚ್ಚಿಕೊಂಡಿದೆ.

ನವ​ದೆ​ಹ​ಲಿ [ಮಾ.18]: ವಿಶ್ವದಾದ್ಯಂತ ತಲ್ಲಣ ಹುಟ್ಟುಹಾಕಿರುವ ಕೊರೋನಾ ವೈರಸ್‌ ತಡೆ ಮತ್ತು ನಿವಾರಣೆ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌​ಒ) ಬಹುವಾಗಿ ಮೆಚ್ಚಿಕೊಂಡಿದೆ. ಅಲ್ಲದೆ ಕೊರೋನಾ ವೈರಸ್‌ ಅನ್ನು ನಿರ್ವ​ಹಿ​ಸು​ವಲ್ಲಿ ಭಾರ​ತ ವಿಶ್ವಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಹಾಡಿ ಹೊಗ​ಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್‌ ಬೆಕೆ​ಡ​ಮ್‌, ‘ಕೊರೋನಾ ವೈರಸ್‌ ನಿಯಂತ್ರ​ಣಕ್ಕೆ ಭಾರತ ಸರ್ಕಾರದ ಬದ್ಧತೆ ಮತ್ತು ಪ್ರಧಾನಿ ಕಚೇ​ರಿಯ ಕಾರ್ಯ ಅಗಾಧ ಮತ್ತು ಅತ್ಯಂತ ಶ್ಲಾಘ​ನೀಯ. ಹೀಗಾಗಿ ಭಾರ​ತ ಇದೀಗ ಸುಸ್ಥಿತಿ​ಯ​ಲ್ಲಿದೆ. ಈ ಹೋರಾ​ಟಕ್ಕೆ ಎಲ್ಲರನ್ನೂ ಒಂದು​ಗೂ​ಡಿ​ಸಿ​ದ್ದನ್ನು ಕಂಡು ನಾನು ಬಹಳ ಪ್ರಭಾ​ವಿ​ತನಾ​ಗಿ​ದ್ದೇ​ನೆ’ ಎಂದು ಹೇಳಿ​ದ್ದಾ​ರೆ.

 

ಇದೇ ವೇಳೆ ಸೋಂಕಿಗೆ ಕಾರ​ಣ​ವಾ​ಗುವ ಸಾರ್ಸ್‌- ಕೋವ್‌-2 ಎಂಬ ವೈರಾ​ಣು​ವ​ನ್ನು ಬೇರ್ಪ​ಡಿ​ಸುವಲ್ಲಿ ಯಶಸ್ವಿ ಆಗಿ​ರುವ ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡ​ಳಿ​ಯ ಕಾರ್ಯ​ಕ್ಕೆ ಹೆಂಕ್‌ ಬೆಕೆ​ಡ​ಮ್‌ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ್ದಾರೆ. ‘ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡ​ಳಿ​ ಮತ್ತು ಆರೋಗ್ಯ ಸಂಶೋ​ಧನಾ ಇಲಾ​ಖೆ ಅತ್ಯು​ತ್ತಮ ಸಂಶೋ​ಧ​ನಾ ವ್ಯವ​ಸ್ಥೆ​ಯನ್ನು ಹೊಂದಿದೆ. ಭಾರ​ತದ ವಿಜ್ಞಾ​ನಿ​ಗಳು ವೈರಾ​ಣು​ವ​ನ್ನು ಗುರು​ತಿ​ಸು​ವಲ್ಲಿ ಯಶಸ್ವಿ ಆಗಿ​ದ್ದಾರೆ. ಕೊರೋನಾ ವೈರ​ಸ್‌ಗೆ ಸಂಶೋ​ಧನೆ ಕೈಗೊಂಡಿ​ರುವ ರಾಷ್ಟ್ರ​ಗಳ ಸಾಲಿಗೆ ಭಾರತವೂ ಸೇರ್ಪಡೆ ಆಗಿ​ದೆ ಎಂದು ಹೇಳಿ​ದ್ದಾ​ರೆ.

ಕೊರೋನಾ ಪೀಡಿತ ಚೀನಾದ ವುಹಾ​ನ್‌​ನಿಂದ ವಿದ್ಯಾ​ರ್ಥಿ​ಗ​ಳು ಮರ​ಳಿ​ದಾಗ ಅವ​ರಲ್ಲಿ ಮೂವ​ರಿಂದ ಮಾದ​ರಿ​ಗ​ಳನ್ನು ಸಂಗ್ರ​ಹಿಸಿ ಪುಣೆ​ಯ​ಲ್ಲಿ​ರು​ವ ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡಳಿ ಹಾಗೂ ನ್ಯಾಷನಲ್‌ ಇನ್ಸಿ​ಟ್ಯೂಟ್‌ ಆಫ್‌ ವೈರಾ​ಲಜಿ ಸೋಂಕುಕಾರಕ ರೋಗಾ​ಣು​ವನ್ನು ಪತ್ತೆ ಮಾಡು​ವಲ್ಲಿ ಯಶಸ್ವಿ ಆಗಿದೆ. ಸೋಂಕು ಕಾರಕ ವೈರಾ​ಣು​ವನ್ನು ಬೇರ್ಪ​ಡಿ​ಸಿ​ದ್ದರಿಂದ ಲಾಭ​ವೆಂದರೆ ಭವಿ​ಷ್ಯ​ದಲ್ಲಿ ಭಾರತ ಕೊರೋ​ನಾಗೆ ತನ್ನದೇ ಆದ ಲಸಿ​ಕೆ​ಯನ್ನು ಕಂಡು​ಹಿ​ಡಿ​ಯು​ವು​ದಕ್ಕೆ ಕಾರ​ಣ​ವಾ​ಗ​ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೇಳಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!